Last Updated:
ಕರ್ನಾಟಕದಲ್ಲಿ ಮಳೆಯ ಅಬ್ಬರದಿಂದ ಕೆಆರ್ಎಸ್, ಕಬಿನಿ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್ಎಸ್ ಒಂದೇ ವಾರದಲ್ಲಿ 10 ಅಡಿ ಏರಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Rain) ಅಬ್ಬರ ಜೋರಾಗಿದೆ. ಕೊಡಗಿನ (Kodagu) ಬೆಟ್ಟ-ಗುಡ್ಡಗಳಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ರಾಜ್ಯದ ಪ್ರಮುಖ ಜಲಾಶಯಗಳ ( Reservoirs) ಒಡಲು ತುಂಬತೊಡಗಿದೆ. ಒಂದೆಡೆ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದ್ದರೆ, ಇನ್ನೊಂದೆಡೆ ಜಲಾಶಯಗಳ ನೀರಿನ ಮಟ್ಟ (Water Level) ಏರಿಕೆಯಾಗುತ್ತಿರುವುದು ರಾಜ್ಯದ ಜನರ ಪಾಲಿಗೆ ಸಿಹಿ ಸುದ್ದಿಯಾಗಿದೆ.
ಮಂಡ್ಯದ ಜೀವನಾಡಿ ಕೆಆರ್ಎಸ್ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಒಂದೇ ವಾರದಲ್ಲಿ ಬರೋಬ್ಬರಿ 10 ಅಡಿ ನೀರು ಹರಿದು ಬಂದಿದ್ದು, ನೀರಿನ ಮಟ್ಟ 90 ಅಡಿಗಳ ಗಡಿ ದಾಟಿದೆ. ಇದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಗರಿಷ್ಠ ಮಟ್ಟ: 124.80 ಅಡಿ
ಪ್ರಸ್ತುತ ಮಟ್ಟ: 90.60 ಅಡಿ
ಒಳಹರಿವು: 15,212 ಕ್ಯೂಸೆಕ್
ಇಲ್ಲಿ ಒಳಹರಿವು 14,574 ಕ್ಯೂಸೆಕ್ ಇದ್ದು, 9153 ಕ್ಯೂಸೆಕ್ ನೀರು ಸಂಗ್ರಹವಾಗಿದೆ.
ಪ್ರಸ್ತುತ ನೀರಿನ ಮಟ್ಟ: 1597.56 ಅಡಿ
ಒಳಹರಿವು: 39,245 ಕ್ಯೂಸೆಕ್
ಹಾರಂಗಿ ಡ್ಯಾಂ ಶೇ. 51 ರಷ್ಟು ತುಂಬಿದ್ದರೆ, ಹೇಮಾವತಿಯಲ್ಲಿ 20.10 ಟಿಎಂಸಿ (ಶೇ. 54) ನೀರಿದ್ದು, ಭರ್ಜರಿ 15,647 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಈ ಡ್ಯಾಂಗೆ ಬರೋಬ್ಬರಿ 1.3 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಸದ್ಯ 44.70 ಟಿಎಂಸಿ (ಶೇ. 36) ನೀರು ಸಂಗ್ರಹವಾಗಿದೆ.
ಮುಂಗಾರು ಮಳೆ ಚುರುಕು ಪಡೆದಿರುವುದರಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಿಂದ ಬರದ ಕಾರ್ಮೋಡಗಳು ಕರಗುತ್ತಿದ್ದು, ಜಲಾಶಯಗಳು ಭರ್ತಿಯಾಗುವ ದಿನ ಹತ್ತಿರವಾಗುತ್ತಿದೆ. ರಾಜ್ಯದ ರೈತರಿಗೆ ಇದು ನಿಜಕ್ಕೂ ಹಬ್ಬದ ಸುದ್ದಿಯೇ ಸರಿ.
Bangalore [Bangalore],Bangalore,Karnataka
Jul 11, 2026 10:22 AM IST














