Mohanlal: ಮೋಹನ್​ಲಾಲ್ ಮನೆಯಲ್ಲಿ 10 ಆನೆದಂತ, 13 ದಂತದ ವಿಗ್ರಹ! ಶಾಕ್ ಕೊಟ್ಟ ಸೌತ್ ಸ್ಟಾರ್​ ನಟನ ಅನೌನ್ಸ್​ಮೆಂಟ್ ’ Mohanlal announces about having 10 elephant tusk | | ACTPnews

ಆನೆದಂತ


Last Updated:

Mohanlal: ಖ್ಯಾತ ನಟನ ಮನೆಯಲ್ಲಿ ಈ ಹಿಂದೆ ರೈಡ್ ಮಾಡಿದಾಗ 4 ಆನೆದಂತ ಸಿಕ್ಕಿತ್ತು. ಈಗ ನಟ ಸ್ವತಃ ತನ್ನಲ್ಲಿ 10 ಆನೆ ದಂತ ಇದೆ ಎಂದು ಅನೌನ್ಸ್ ಮಾಡಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಆನೆದಂತ
ಆನೆದಂತ

ಮಾಲಿವುಡ್ ಸ್ಟಾರ್ (Mollywood Star) ನಟ ಮೋಹನ್​ಲಾಲ್ (Mohanlal) ಅವರ ಇತ್ತೀಚಿನ ಅಪ್ಡೇಟ್ ಎಲ್ಲರಿಗೂ ಶಾಕ್ ಕೊಟ್ಟಿದೆ. ನಟ ತನ್ನ ಬಳಿ ಸುಮಾರು 10 ಆನೆ ದಂತ (Elephant Tusk), 13 ದಂತದ ವಿಗ್ರಹಗಳು (Ivory Idols) ಇರುವುದಾಗಿ ಹೇಳಿದ್ದಾರೆ. ಈಗಾಗಲೇ ಈ ಸಂಬಂಧ ಕೇಸ್ ಎದುರಿಸುತ್ತಿರುವ ನಟ ಸ್ವತಃ ಇದನ್ನು ಒಪ್ಪಿಕೊಂಡಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ನಟ ಸದ್ಯ ವನ್ಯಜೀವಿ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ನಟ ಮೋಹನ್ ಲಾಲ್ ಅವರು 10 ಆನೆ ದಂತಗಳು ಮತ್ತು 13 ದಂತದ ವಿಗ್ರಹಗಳನ್ನು ಹೊಂದಿದ್ದಾರೆ ಎಂದು ಕೇರಳ ಅರಣ್ಯ ಇಲಾಖೆಗೆ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ವನ್ಯಜೀವಿ ವಸ್ತುಗಳಿದ್ದರೆ ಅದನ್ನು ಘೋಷಿಸಲು ಅವಕಾಶ

ಮಲಯತ್ತೂರು ವಿಭಾಗೀಯ ಅರಣ್ಯ ಕಚೇರಿಯ ಅಧಿಕಾರಿಗಳು, ಇಲಾಖೆಯ ಕ್ಷಮಾದಾನ ಯೋಜನೆಯಡಿಯಲ್ಲಿ ಈ ಘೋಷಣೆ ಮಾಡಲಾಗಿದೆ. ಯಾವುದೇ ವ್ಯಕ್ತಿ ತಮ್ಮಲ್ಲಿರುವ ವನ್ಯಜೀವಿ ವಸ್ತುಗಳನ್ನು ಘೋಷಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಈ ಹಿಂದೆ ನಾಲ್ಕು ಆನೆ ದಂತಗಳನ್ನು ಹೊಂದಿರುವುದಾಗಿ ನಟ ಘೋಷಿಸಿದ್ದರು. ಈಗ ಇನ್ನೂ ಆರು ದಂತಗಳನ್ನು ಬಹಿರಂಗಪಡಿಸಿದ್ದಾರೆ.

46 ಕೆಜಿಯಷ್ಟು ತೂಕದ ದಂತಹ ವಿಗ್ರಹ

ಅವರು ಘೋಷಿಸಿದ ದಂತದ ವಿಗ್ರಹಗಳಲ್ಲಿ ಶ್ರೀಕೃಷ್ಣ, ರಾಮ ಮತ್ತು ತಿರುಪತಿ ಬಾಲಾಜಿ ವಿಗ್ರಹಗಳು ಸೇರಿವೆ. ಒಟ್ಟು ತೂಕ ಸುಮಾರು 46 ಕೆಜಿ ಎಂದು ಅವರು ಹೇಳಿದರು.

ಅನುವಂಶಿಕವಾಗಿ, ಗಿಫ್ಟ್ ಆಗಿ ಬಂದ ದಂತ

ಮೋಹನ್ ಲಾಲ್ ತಮ್ಮ ಬಳಿ ಇರುವ ಹೆಚ್ಚಿನ ದಂತಗಳು ಆನುವಂಶಿಕವಾಗಿ ಬಂದಿವೆ ಅಥವಾ ಉಡುಗೊರೆಯಾಗಿ ಪಡೆದಿವೆ ಎಂದು ಹೇಳಿಕೊಂಡಿದ್ದಾರೆ. ಅರಣ್ಯ ಇಲಾಖೆಯು ದಂತಗಳು ಮತ್ತು ದಂತದ ವಿಗ್ರಹಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಿದೆ ಎಂದು ಅವರು ಹೇಳಿದರು.

Mohanlal announces about having 10 elephant tusk and 13 ivory idols

ಪ್ರಾತಿನಿಧಿಕ ಚಿತ್ರ

ಅರಣ್ಯ ಇಲಾಖೆಯ ಕ್ಷಮಾದಾನ ಯೋಜನೆಯಡಿಯಲ್ಲಿ, ಕಾನೂನು ಕ್ರಮವನ್ನು ತಪ್ಪಿಸಲು ಯಾವುದೇ ವ್ಯಕ್ತಿ ತನ್ನ ಬಳಿ ಇರುವ ನೋಂದಾಯಿಸದ ವನ್ಯಜೀವಿ ವಸ್ತುಗಳನ್ನು ಘೋಷಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ಆನೆ ದಂತಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದ ವನ್ಯಜೀವಿ ಪ್ರಕರಣದಲ್ಲಿ ಮೋಹನ್ ಲಾಲ್ ಪ್ರಸ್ತುತ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 2011 ರಲ್ಲಿ ನಟನ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಆನೆ ದಂತಗಳು ಮತ್ತು ದಂತದ ವಿಗ್ರಹಗಳು ಪತ್ತೆಯಾಗಿವೆ ಎಂದು ವರದಿಯಾದ ನಂತರ ಈ ಪ್ರಕರಣ ಸುದ್ದಿಯಾಗಿತ್ತು.

ಇದನ್ನೂ ಓದಿ: Krishi Thapanda: ಬೇರೆ ದಾರಿಯೇ ಇಲ್ಲ ಎಂದ ಕೃಷಿ ತಾಪಂಡ! ವೈಶಾಖ್ ಸಾವಿನ ನಂತರ 2ನೇ ಪೋಸ್ಟ್

ನಂತರ ಕೇರಳ ಹೈಕೋರ್ಟ್ ಆ ನಿರ್ಧಾರವನ್ನು ಎತ್ತಿಹಿಡಿದು, ನಟನ ವಿರುದ್ಧದ ಕಾನೂನು ಕ್ರಮಗಳನ್ನು ಮುಂದುವರಿಸಬೇಕೆಂದು ನಿರ್ದೇಶಿಸಿತು. ಕಳೆದ ವರ್ಷ ಕೇರಳ ಹೈಕೋರ್ಟ್ ನಟನ ಬಳಿಯಿದ್ದ ದಂತ ವಸ್ತುಗಳ ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿ, ದಂತಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡುವ ಸರ್ಕಾರಿ ಆದೇಶವನ್ನು ರದ್ದುಗೊಳಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed