Last Updated:
ಭಾರತ ತಂಡವು ವಿಶ್ವಕಪ್ನಲ್ಲಿ ಯಶಸ್ವಿ ಅಭಿಯಾನವನ್ನು ಮುಗಿಸಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿತ್ತು. ಆದರೆ, ಭಾರತಕ್ಕೆ ಹಿಂದಿರುಗುವ ವೇಳೆ ವಿಮಾನದಲ್ಲಿ ರಾಣಾ ಅಸ್ವಸ್ಥರಾದಾಗ ಆತಂಕ ಹುಟ್ಟಿಕೊಂಡವು.
ನವದೆಹಲಿ: ಭಾರತದ ಶೂಟಿಂಗ್ ದಂತಕಥೆ (Shooting Legend) ಮತ್ತು ಪ್ರಸಿದ್ಧ ತರಬೇತುದಾರ ಜಸ್ಪಾಲ್ ರಾಣಾ (Jaswal Rana Dies) ಅವರು 49ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.
ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ನಿಂದ ಭಾರತೀಯ ತಂಡ ಹಿಂದಿರುಗುವ ವೇಳೆ ವಿಮಾನದಲ್ಲಿ ಅಸ್ವಸ್ಥರಾಗಿದ್ದ ಖ್ಯಾತ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಅವರನ್ನು ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಸ್ವಾಲ್ ರಾಣಾ ಪ್ರಸ್ತುತ ಭಾರತೀಯ ಪಿಸ್ತೂಲ್ ಶೂಟರ್ಗಳಿಗೆ ಉನ್ನತ-ಕಾರ್ಯಕ್ಷಮತೆಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತೀಯ ತಂಡವು ಉತ್ತಮ ಪ್ರದರ್ಶನ ನೀಡಿ, ನಾಲ್ಕು ಪದಕಗಳನ್ನು (ಎರಡು ಚಿನ್ನ ಮತ್ತು ಎರಡು ಬೆಳ್ಳಿ) ಗೆದ್ದುಕೊಂಡಿತ್ತು. ಶೂಟರ್ ಆಗಿ ಯಶಸ್ವಿ ವೃತ್ತಿಜೀವನದ ನಂತರ, ಜಸ್ವಾಲ್ ರಾಣಾ ಜೂನಿಯರ್ ರಾಷ್ಟ್ರೀಯ ತಂಡದ ತರಬೇತುದಾರ ಮತ್ತು ಉನ್ನತ-ಕಾರ್ಯಕ್ಷಮತೆಯ ತರಬೇತುದಾರರಾಗಿ ಭಾರತೀಯ ಶೂಟಿಂಗ್ ಲೋಕಕ್ಕೆ ಹೊಸ ಆಯಾಮ ಕೊಟ್ಟಿದ್ದರು.
ಈ ಸಂಬಂಧ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಷ್ಟ್ರೀಯ ರೈಫಲ್ ಸಂಘದ (ಎನ್ಆರ್ಎಐ) ಮೂಲವೊಂದು, ‘ವಿಮಾನದಲ್ಲಿ ಜಸ್ವಾಲ್ ರಾಣಾಗೆ ಆರೋಗ್ಯ ಸರಿ ಇರಲಿಲ್ಲ, ದೆಹಲಿಯಲ್ಲಿ ಇಳಿದ ನಂತರ, ಅವರು ನೇರವಾಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗಳಿಗೆ ಒಳಗಾದರು. ನಂತರ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು’ ತಿಳಿಸಿದೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಸೇರಿದಂತೆ ಹಲವಾರು ಭಾರತೀಯ ಪಿಸ್ತೂಲ್ ಶೂಟರ್ಗಳಿಗೆ ತರಬೇತಿ ನೀಡುತ್ತಿದ್ದ ಜಸ್ವಾಲ್ ರಾಣಾ, ಪ್ರಸ್ತುತ ಭಾರತೀಯ ಪಿಸ್ತೂಲ್ ಈವೆಂಟ್ಗಳಿಗೆ ಉನ್ನತ-ಕಾರ್ಯಕ್ಷಮತೆಯ ತರಬೇತುದಾರರಾಗಿದ್ದರು.
ಭಾರತ ತಂಡವು ವಿಶ್ವಕಪ್ನಲ್ಲಿ ಯಶಸ್ವಿ ಅಭಿಯಾನವನ್ನು ಮುಗಿಸಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿತ್ತು. ಆದರೆ, ಭಾರತಕ್ಕೆ ಹಿಂದಿರುಗುವ ವೇಳೆ ವಿಮಾನದಲ್ಲಿ ರಾಣಾ ಅಸ್ವಸ್ಥರಾದಾಗ ಆತಂಕ ಹುಟ್ಟಿಕೊಂಡವು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಮನು ಭಾಕರ್ಗೆ ಮಾರ್ಗದರ್ಶನ ನೀಡಿದ್ದು ಅವರ ಅತ್ಯಂತ ಗಮನಾರ್ಹ ಯಶಸ್ಸು. ರಾಣಾ ಅವರು ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಸೇರಿದಂತೆ ಹಲವಾರು ಇತರ ಉನ್ನತ ಶೂಟರ್ಗಳಿಗೆ ಮಾರ್ಗದರ್ಶನ ನೀಡಿದ್ದಾರೆ, ಇದು ಭಾರತಕ್ಕೆ ಬಲವಾದ ಪ್ರತಿಭೆಗಳ ಪೈಪ್ಲೈನ್ ನಿರ್ಮಿಸಲು ಸಹಾಯ ಮಾಡಿದೆ.
Jun 12, 2026 10:04 AM IST













