Last Updated:
Darshan: ನಟ ದರ್ಶನ್ ಅವರು ತಮಗೆ ಖುದ್ದಾಗಿ ಕೋರ್ಟ್ಗೆ ಹಾಜರಾಗೋಕೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಾಗಿದೆ. ಇಲ್ಲಿ ನಟ ಕೋರ್ಟ್ಗೆ ಬರೋಕೆ ಸಾಧ್ಯವಿಲ್ಲ ಅಥವಾ ಸವಾಲೆನಿಸುವ ಸಂಗತಿ ಬಗ್ಗೆ ಜಡ್ಜ್ ಏನೇನು ಹೇಳಿದ್ರು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಸಾಕಷ್ಟು ಬೆಳವಣಿಗಗಳಾಗುತ್ತಿವೆ. ಹಲವಾರು ಸಂಗತಿಗಳಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಇತ್ತೀಚೆಗೆ ಈ ಕೇಸ್ಗೆ ಸಂಬಂಧಿಸಿ ಆರೋಪಿ ಪ್ರದೋಷ್ ನಾನು ಮಾಫಿ ಸಾಕ್ಷಿಯಾಗುತ್ತೇನೆ (Approver) ಎಂದು ಮುಂದೆ ಬಂದಾಗ ರಿಯಲ್ ಟ್ವಿಸ್ಟ್ ಎದುರಾಗಿತ್ತು. ಇದನ್ನು ಪ್ರಶ್ನಿಸಿ ದರ್ಶನ್ (Darshan) ಕೋರ್ಟ್ ಮೊರೆ ಹೋದರು, ಅತ್ತ ಪವಿತ್ರಾ ಗೌಡ (Pavithra Gowda) ಬ್ಯಾರಕ್ ಚೇಂಜ್ ಬೇಕು ಎಂದರು, ಇನ್ನಿಬ್ಬರು ಆರೋಪಿಗಳು ನಮ್ಮನ್ನು ಚಿತ್ರದುರ್ಗ (Chitradurga) ಜೈಲಿಗೆ ಶಿಫ್ಟ್ ಮಾಡಿ ಎಂದರು ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾದವು.














