Last Updated:
ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಹಿಡ್ಕಲ್, ನಾರಾಯಣಪುರ, ಹಾರಂಗಿ ಬಹುತೇಕ ಭರ್ತಿ. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಒಳಹರಿವು.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ (Reservoir) ಒಳಹರಿವು ಹೆಚ್ಚಾಗಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಜಲಮೂಲಗಳು ಭರ್ತಿಯಾಗುತ್ತಿದ್ದು, ಜನಸಾಮಾನ್ಯರಲ್ಲಿ ಮತ್ತು ರೈತರಲ್ಲಿ (Farmer) ಹೊಸ ಮಂದಹಾಸ ಮೂಡಿಸಿದೆ. ಒದಗಿಸಲಾಗಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಹಲವು ಪ್ರಮುಖ ಅಣೆಕಟ್ಟುಗಳು (Dams) ತಮ್ಮ ಗರಿಷ್ಠ ಮಟ್ಟ ತಲುಪಲು ಕೇವಲ ಇಂಚುಗಳಷ್ಟು ಮಾತ್ರ ಬಾಕಿ ಉಳಿಸಿಕೊಂಡಿವೆ.














