Mumbai Boat Accident: ಮುಂಬೈ ದೋಣಿ ದುರಂತದ ಹಿಂದಿನ ಕಾರಣ ಬಿಚ್ಚಿಟ್ಟ ನೌಕಾಪಡೆ, malfunction craft lost control Navy Reveals the reason behind mumbai boat accident says engine | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Mumbai Boat Accident: ಮುಂಬೈ ದೋಣಿ ದುರಂತದ ಹಿಂದಿನ ಕಾರಣ ಬಿಚ್ಚಿಟ್ಟ ನೌಕಾಪಡೆ, malfunction craft lost control Navy Reveals the reason behind mumbai boat accident says engine | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಬೋಟ್‌ ಹಡಗಿಗೆ ಅಪ್ಪಳಿಸಿದ್ದೆ ತಡ, ದೋಣಿ ನೀರಿನಲ್ಲಿ ಮುಳುಗಿದೆ. ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿಗಳ ಜೊತೆ ಪ್ರಯಾಣಿಕರು ದಾರುಣ ಸಾವಿಗೀಡಾಗಿದ್ದಾರೆ. ದುರಂತದಲ್ಲಿ 101 ಜನರನ್ನು ರಕ್ಷಣೆ ಮಾಡಲಾಗಿದೆ.

ನಿಯಂತ್ರಣ ಕಳೆದುಕೊಂಡ ನೇವಲ್ ಕ್ರಾಫ್ಟ್ : ಕಾರಣ ಬಿಚ್ಚಿಟ್ಟ ನೌಕಾಪಡೆ

ಅಪಘಾತದ ನಂತರ, ಮುಂಬೈ ಬಂದರಿನಲ್ಲಿ ಎಂಜಿನ್‌ನ ಅಸಮರ್ಪಕ ಕಾರ್ಯದಿಂದಾಗಿ ನೌಕಾಪಡೆಯ ಬೋಟ್‌ ಎಂಜಿನ್ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ, ದೋಣಿಯು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದು ನಂತರ ನೀರಿನಲ್ಲಿ ಮಗುಚಿದೆ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯಲ್ಲಿ ದುರಂತಕ್ಕೆ ಕಾರಣವನ್ನು ಬಹಿರಂಗಪಡಿಸಿದೆ.

ಘಟನೆ ಸಂಭವಿಸುತ್ತಿದ್ದಂತೆ ಕೋಸ್ಟ್ ಗಾರ್ಡ್ ಮತ್ತು ಮೆರೈನ್ ಪೊಲೀಸರ ಸಮನ್ವಯದೊಂದಿಗೆ ನೌಕಾಪಡೆಯು ತಕ್ಷಣವೇ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿತು. ಭಾರತೀಯ ನೌಕಾ ಪಡೆ, ಕರಾವಳಿ ಭದ್ರತಾ ಪಡೆ ಹಾಗೂ ಕರಾವಳಿ ಪೊಲೀಸರು ಎಲ್ಲರೂ ಜೊತೆಯಾಗಿ ಹರಸಾಹಸಪಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ನಾಲ್ಕು ನೌಕಾ ಹೆಲಿಕಾಪ್ಟರ್‌ಗಳು, 11 ನೇವಲ್ ಕ್ರಾಫ್ಟ್, ಒಂದು ಕೋಸ್ಟ್ ಗಾರ್ಡ್ ಬೋಟ್ ಮತ್ತು ಮೂರು ಮೆರೈನ್ ಪೊಲೀಸ್ ಬೋಟ್‌ಗಳು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹಲವಾರ ಪ್ರಾಣವನ್ನು ಉಳಿಸಿದೆ ಎಂದು ನೌಕಾಪಡೆ ತಿಳಿಸಿದೆ.

“ಈ ಪ್ರದೇಶದಲ್ಲಿ ನೌಕಾಪಡೆ ಮತ್ತು ಸಿವಿಲ್ ಕ್ರಾಫ್ಟ್ ಮೂಲಕ ಬದುಕುಳಿದವರನ್ನು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಅವಘಡದಲ್ಲಿ 101 ಜನರನ್ನು ರಕ್ಷಿಸಲಾಗಿದೆ” ಎಂದು ನೌಕಾಪಡೆ ತಿಳಿಸಿದೆ.

ನೌಕಾಪಡೆಯ 3 ಸಿಬ್ಬಂದಿ ಸೇರಿ 13 ಜನರ ದಾರುಣ ಸಾವು

ಈ ಅಪಘಾತವು ನೌಕಾ ಸಿಬ್ಬಂದಿ ಮತ್ತು ನೌಕಾ ಕ್ರಾಫ್ಟ್‌ನಲ್ಲಿದ್ದ OEM (ಮೂಲ ಸಲಕರಣೆ ತಯಾರಕ) ವಿಭಾಗದ ಇಬ್ಬರು ಸೇರಿದಂತೆ 13 ಜನ ದುರಂತದಲ್ಲಿ ಬಲಿಯಾಗಿದ್ದಾರೆ. 101 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

“ಮುಂಬೈ ಬಂದರಿನಲ್ಲಿ ಪ್ರಯಾಣಿಕ ದೋಣಿ ಮತ್ತು ಭಾರತೀಯ ನೌಕಾಪಡೆಯ ಕ್ರಾಫ್ಟ್ ನಡುವಿನ ದುರಂತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದು, ತೀವ್ರ ದುಃಖವನ್ನುಂಟು ಮಾಡಿದೆ. ಎರಡೂ ಹಡಗುಗಳ ನೌಕಾ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಗಾಯಗೊಂಡ ಸಿಬ್ಬಂದಿ ತುರ್ತು ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೃತರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಕೋರಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇನ್ನಿತರೆ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನಿಂದ ವ್ಯಾಪಕ ಶೋಧ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

5 ಲಕ್ಷ ರೂಪಾಯಿ ಆರ್ಥಿಕ ನೆರವು

10 ನಾಗರಿಕರು ಮತ್ತು ನೌಕಾಪಡೆಯ ಮೂವರು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ನೌಕಾ ವೈದ್ಯರು ಸಂಜೆ 7.30 ರವರೆಗೆ ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ಫಡ್ನವಿಸ್ ಹೇಳಿದರು.

ಗಂಭೀರವಾಗಿ ಗಾಯಗೊಂಡ ನೌಕಾಪಡೆಯ ಇಬ್ಬರು ಸಿಬ್ಬಂದಿಯನ್ನು ನೌಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ದುರಂತದ ಸಂತ್ರಸ್ತರ ಕುಟುಂಬಗಳಿಗೆ ಫಡ್ನವಿಸ್ 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports