Sad News: ರಥ ಎಳೆಯುವಾಗ ಉಸಿರುಗಟ್ಟಿ ಭಕ್ತ ಸಾವು, ಪುರಿ ರಥಯಾತ್ರೆಯಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಬಹುದ ಯಾತ್ರೆಯ ಸಮಯದಲ್ಲಿ ಸುಭದ್ರಾ ದೇವಿಯ ‘ದರ್ಪದಾಳನ್’ ರಥವನ್ನು ಎಳೆಯುವಾಗ ಭಕ್ತನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಟಕ್‌ನ ಅಭಿರಾಮ್ ದಾಸ್ (57) ಎಂದು ಗುರುತಿಸಲಾಗಿದೆ.

News18
News18

ಪುರಿ: ಪುರಿಯ ಗುಂಡಿಚಾ ದೇವಸ್ಥಾನದಿಂದ ಜಗನ್ನಾಥ ದೇವಸ್ಥಾನದವರೆಗೆ ಶುಕ್ರವಾರ ನಡೆದ ಬಹುದ ರಥಯಾತ್ರೆಯಲ್ಲಿ (Puri Ratha Yatra) ಉಸಿರುಗಟ್ಟಿ ಮೂವರು ಭಕ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಹುದ ಯಾತ್ರೆಯ ಸಮಯದಲ್ಲಿ ಸುಭದ್ರಾ ದೇವಿಯ ‘ದರ್ಪದಾಳನ್’ ರಥವನ್ನು ಎಳೆಯುವಾಗ ಭಕ್ತನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಟಕ್‌ನ ಅಭಿರಾಮ್ ದಾಸ್ (57) ಎಂದು ಗುರುತಿಸಲಾಗಿದೆ.

ಈ ಸಾವಿನೊಂದಿಗೆ, ಪುರಿಯಲ್ಲಿ ರಥಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ, ಜುಲೈ 16 ರಂದು ಗುಂಡಿಚಾ ದೇವಸ್ಥಾನದ ಕಡೆಗೆ ರಥಗಳನ್ನು ಎಳೆಯುತ್ತಿದ್ದಾಗ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ಉಸಿರುಗಟ್ಟುವಿಕೆ ಮತ್ತು ಇನ್ನೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

‘ಮೃತರಿಗೆ ಅಧಿಕ ರಕ್ತದೊತ್ತಡವಿತ್ತು ಮತ್ತು ಔಷಧಿ ನೀಡಲಾಗುತ್ತಿತ್ತು. ಅವರು ಚಿಕಿತ್ಸೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನಿಧನರಾದರು’ ಎಂದು ಆರೋಗ್ಯ ಸೇವೆಗಳ ನಿರ್ದೇಶಕ (ಡಿಎಚ್‌ಎಸ್) ಮಹೇಶ್ ಮೋಹನ್ ಪಾಂಡಾ ಪಿಟಿಐಗೆ ತಿಳಿಸಿದ್ದಾರೆ.

ಬಹುಧ ಯಾತ್ರೆಯ ಸಮಯದಲ್ಲಿ ಬಡಾ ದಂಡಾ ಅಥವಾ ಗ್ರ್ಯಾಂಡ್ ರಸ್ತೆಯಲ್ಲಿ ಜನಸಂದಣಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಒಟ್ಟು 102 ಭಕ್ತರು ಗಾಯಗೊಂಡಿದ್ದಾರೆ ಎಂದು ಬಿಜೆಡಿ ಉಪಾಧ್ಯಕ್ಷ ಸಂಜಯ್ ದಾಸ್ ಬರ್ಮಾ ಆರೋಪಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports