Last Updated:
ಗಣೇಶ ಚತುರ್ಥಿ ಸ್ಪೆಷಲ್ ರೈಲು! ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆಯಲ್ಲಿ ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ನಡುವೆ 2 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಸೆ.11 ಮತ್ತು 13ರಂದು ಬೆಂಗಳೂರಿನಿಂದ ರೈಲು ಹೊರಡಲಿದೆ. ಹುಬ್ಬಳ್ಳಿ, ಧಾರವಾಡ ಸೇರಿ ಸಂಪೂರ್ಣ ಟೈಮಿಂಗ್ಸ್ ನೋಡಿ
ಬೆಂಗಳೂರು/ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬದ (Festival) ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈರುತ್ಯ ರೈಲ್ವೆ (South Western Railway) ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಬೆಳಗಾವಿ ನಡುವೆ ಎರಡು ಜೋಡಿ ವಿಶೇಷ ರೈಲುಗಳನ್ನು (Special Railway) ಓಡಿಸಲಿದೆ. ಎರಡೂ ವಿಶೇಷ ರೈಲುಗಳು ತಲಾ ಒಂದು ಟ್ರಿಪ್ ಸಂಚಾರ ನಡೆಸಲಿದ್ದು, ಸೆಪ್ಟೆಂಬರ್ 11ರಿಂದ ವಿಶೇಷ ಸೇವೆ ಆರಂಭವಾಗಲಿದೆ. ಪ್ರಯಾಣಿಕರು ರೈಲು ಸಂಖ್ಯೆ, ಹೊರಡುವ ಸಮಯ, ಮಧ್ಯದ ನಿಲ್ದಾಣಗಳು (Stops) ಹಾಗೂ ಮರಳಿ ಬರುವ ಸಮಯವನ್ನು ಗಮನಿಸಿಕೊಳ್ಳಬಹುದು.














