Last Updated:
ಶಿವರಾಜ್ ಕುಮಾರ್ ತಮ್ಮ 64 ನೇ ಜನ್ಮ ದಿನಕ್ಕೆ ವಿಶೇಷ ಘೋಷಣೆ ಮಾಡುತ್ತಿದ್ದಾರೆ. ಈ ದಿನ ಅಭಿಮಾನಿಗಳು ಸಾಕಷ್ಟು ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಶಿವಣ್ಣನ (Shivanna) ವಾಕಿಂಗ್ ಫ್ರೆಂಡ್ಸ್ ಅಮರಾನಾಥ್ಗೆ ಹೋಗಿದ್ದಾರೆ. ಶಿವಣ್ಣನಿಗೆ ಒಳ್ಳೆಯದಾಗಲಿ, ಗೀತಕ್ಕನಿಗೆ ಒಳ್ಳೆಯದಾಗಲಿ, ಇವರ ಜನ್ಮ ದಿನದ ಪ್ರಯುಕ್ತವೇ ಈ ಸ್ನೇಹಿತರು ಅಮರನಾಥ್ಗೆ (Amarnath) ಹೋಗಿದ್ದಾರೆ. ಅಲ್ಲಿಂದಲೇ ವಿಶ್ ಮಾಡಿದ್ದಾರೆ. ವಿಡಿಯೋನೂ ಕಳಿಸಿದ್ದಾರೆ. ಇದರ ಹೊರತಾಗಿ ಶಿವಣ್ಣ ತಮ್ಮ ಜನ್ಮ ದಿನದಂದು (Birthday) ಜುಲೈ-12 ರಂದು ಒಂದು ಮಹತ್ವದ ಘೋಷಣೆ ಮಾಡುತ್ತಿದ್ದಾರೆ. ಅದೇನು ಅನ್ನುವ ಕುತೂಹಲವೂ ಹೆಚ್ಚಾಗಿದೆ. ಇದರ ನಡುವೆ ಜುಲೈ-11 ರಂದು ಮಧ್ಯ ರಾತ್ರಿ 12 ಗಂಟೆಗೆ ಸೆಲೆಬ್ರೇಷನ್ (Celebration) ಶುರು ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಮಹತ್ವದ ಘೋಷಣೆ
“ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ, ಜುಲೈ 12, 2026 ರಂದು ಬೆಳಿಗ್ಗೆ 10.00 ಗಂಟೆಗೆ ಡಾ. ಶಿವರಾಜ್ಕುಮಾರ್ ಅವರ ನಿವಾಸದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವಿಶೇಷ ಸಂದರ್ಭದಲ್ಲಿ, ತಮ್ಮ ಪ್ರೀತಿಯ ಅಭಿಮಾನಿಗಳಿಗಾಗಿ ಡಾ. ಶಿವರಾಜ್ಕುಮಾರ್ ಅವರು ಒಂದು ಮಹತ್ವದ ಘೋಷಣೆಯನ್ನು ಮಾಡಲಿದ್ದು, ಜನ್ಮದಿನದ ಸಂಭ್ರಮದ ಭಾಗವಾಗಿ ಇನ್ನೂ ಕೆಲವು ವಿಶೇಷ ಅಚ್ಚರಿಗಳನ್ನೂ ಸಿದ್ಧಪಡಿಸಲಾಗಿದೆ.” ಅಂತಲೇ ಮಾಹಿತಿ ಕೊಡಲಾಗಿದೆ.
ಶಿವಣ್ಣನ ಜನ್ಮ ದಿನ ಜುಲೈ-12 ರಂದು ಇರುತ್ತದೆ. ಆದರೆ, ಅಭಿಮಾನಿಗಳು ಈ ಸಂಭ್ರಮವನ್ನ ಜುಲೈ-11 ರಂದು ರಾತ್ರಿಯಿಂದಲೇ ಶುರು ಮಾಡುತ್ತಿದ್ದಾರೆ.
ಕರೆಕ್ಟ್ ಆಗಿ ರಾತ್ರಿ 12 ಗಂಟೆಗೆ ಸಿಡಿಮದ್ದು ಸಿಡಿಸಿ ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಅಭಿಮಾನಿಗಳ ಪರವಾಗಿಯೇ ಶಿವಣ್ಣ ಒಂದು ಕೇಕ್ ಕಟ್ ಮಾಡಲಿದ್ದಾರೆ. ಕೇಕ್ ಮತ್ತು ಇತರ ಉಡುಗೊರೆಯನ್ನ ತರಬೇಡಿ ಅಂತಲೇ ಈಗಾಗಲೇ ಸ್ವತಃ ಶಿವಣ್ಣ ವಿಡಿಯೋ ಮೂಲಕವೂ ಹೇಳಿದ್ದಾರೆ.
ಶಿವಣ್ಣ ಮನೆಯಲ್ಲಿಯೇ ಈ ಒಂದು ಬರ್ತ್ ಡೇ ಸೆಲೆಬ್ರೇಷನ್ ಇರುತ್ತದೆ. ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ.
ಶಿವಣ್ಣನ ವಾಕಿಂಗ್ ಫ್ರೆಂಡ್ಸ್
ಈ ದಿನ ಅಭಿಮಾನಿಗಳು ಇನ್ನೂ ಒಂದು ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿರೋ ಶಕ್ತಿಧಾಮಕ್ಕೆ ಧನಸಹಾಯ ಮಾಡಲು ಮುಂದಾಗಿದ್ದಾರೆ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸ್ಥಾಪಿಸಿರೋ ಈ ಶಕ್ತಿಧಾಮವನ್ನ ಗೀತಾ ಶಿವರಾಜ್ಕುಮಾರ್ ನೋಡಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಬೇರೆ ಬೇರೆ ಚಿತ್ರಗಳಿಗೆ ಹಾಡುತ್ತಿದ್ದರು. ಹಾಗೆ ಹಾಡಿರೋ ಹಾಡುಗಳಿಂದ ಬಂದ ದುಡ್ಡನ್ನ ಮೈಸೂರಿನ ಈ ಶಕ್ತಿಧಾಮಕ್ಕೆ ಕೊಡ್ತಾ ಇದ್ದರು. ಆದರೆ, ಈ ಸಲ ಶಿವಣ್ಣನ ಅಭಿಮಾನಿಗಳು ಈ ಶಕ್ತಿಧಾಮಕ್ಕೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡೋಕೆ ಯೋಚನೆ ಮಾಡಿದ್ದಾರೆ.
ಇದು ಬಿಟ್ಟರೆ, ವರಪುತ್ರ ಡಾಕ್ಟರ್ ಶಿವರಾಜ್ ಕುಮಾರ್ ಹಾಗೂ ಡಾಕ್ಟರ್ ಪುನೀತ್ ರಾಜ್ಕುಮಾರ್ ಕನ್ನಡ ಸೇನೆ ವಿಶೇಷ ಪೂಜೆ ಮಾಡಿಸುತ್ತಿದೆ. ವೀರೇಶ್ ಥಿಯೇಟರ್ ಸಮೀಪದಲ್ಲಿರೋ ಶ್ರೀ ಮುತಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವಣ್ಣನ ಬರ್ತ್ ಡೇ ಪ್ರಯುಕ್ತ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುತ್ತಿದ್ದಾರೆ.
ಶಿವರಾಜ್ ಕುಮಾರ್ ಪ್ರತಿ ದಿನ ವಾಕಿಂಗ್ ಮಾಡುತ್ತಾರೆ. ಇಲ್ಲಿ ಇವರಿಗೆ ಅನೇಕ ವಾಕಿಂಗ್ ಫ್ರೆಂಡ್ಸ್ ಕೂಡ ಇದ್ದಾರೆ. ಈ ವಾಕಿಂಗ್ ಫ್ರೆಂಡ್ಗಳಲ್ಲಿ ಕೆಲವರು ಶಿವಣ್ಣನ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಅಮರನಾಥ್ ಯಾತ್ರೆ ಕೈಗೊಂಡಿದ್ದಾರೆ.
ಶಿವಣ್ಣ ಹಾಗೂ ಗೀತಕ್ಕ ಅವರಿಗೆ ಒಳ್ಳೆಯದಾಗಲಿ, ಆರೋಗ್ಯವು ಚೆನ್ನಾಗಿ ಇರಲಿ ಅಂತ ಹಾರೈಸಿದ್ದಾರೆ. ಅಲ್ಲಿಂದಲೇ ಶಿವಣ್ಣನ ಜನ್ಮ ದಿನ್ಕೆ ವಿಶ್ ಕೂಡ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 11, 2026 10:19 AM IST














