Last Updated:
ಖಾಸಗಿ ವಾಹಿನಿ ನಡೆಸುತ್ತಿದ್ದ ಖ್ಯಾತ ಕನ್ನಡ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ಸೀಸನ್ 2ರಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದಿದ್ದ ಅವರು ಬ್ರೈನ್ ಟ್ಯೂಮರ್ನಿಂದ ನಿಧನರಾಗಿದ್ದಾರೆ.
ಬೆಂಗಳೂರು: ಕನ್ನಡದ ರಿಯಾಲಿ ಶೋ ಒಂದರ ಮಾಜಿ ಸ್ಪರ್ಧಿಯೊಬ್ಬರು ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ (Brain Tumor) ಎಂದು ತಿಳಿದು ಬಂದಿದೆ.
ಖಾಸಗಿ ವಾಹಿನಿ ನಡೆಸುತ್ತಿದ್ದ ಖ್ಯಾತ ಕನ್ನಡ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ಸೀಸನ್ 2ರಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದಿದ್ದ ಪದ್ಮನಾಭ ಕೆ.ಎಂ (ಪದ್ದು ಗೌಡ) ಅವರು ಬ್ರೈನ್ ಟ್ಯೂಮರ್ನಿಂದ ನಿಧನರಾಗಿದ್ದಾರೆ. 44 ವರ್ಷದ ಪದ್ದು ಗೌಡ ಅವರು ಖಾಸಗಿ ಕನ್ನಡ ವಾಹಿನಿಯಲ್ಲಿ ನಿರೂಪಕರಾಗಿಯೂ ಹಾಗೂ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದರು.
ನಲವತ್ನಾಲ್ಕು ವರ್ಷದ ಪದ್ಮನಾಭ KM ಅಲಿಯಾಸ್ ಪದ್ದು ಗೌಡ ಅವರು ರಿಯಾಲಿಟಿ ಶೋ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಸೀಸನ್ ಟೂ ನಲ್ಲಿ ಇವರು ಭಾಗಿಯಾಗಿದ್ದರು. ಖಾಸಗಿ ಚಾನೆಲ್ನಲ್ಲಿ ನಿರೂಪಕರಾಗಿಯೂ ಅವರು ಕೆಲಸ ಮಾಡಿದ್ದರು.
ಮಾಡೆಲ್ ಕೂಡ ಆಗಿದ್ದ ಪದ್ಮನಾಭ್ ಅಲಿಯಾಸ್ ಪದ್ದು ಗೌಡ ಬೆಂಗಳೂರಿನ ಯಲಹಂಕದಲ್ಲಿ ಕೊನೆಯುಸಿರೆಳೆದಿದ್ದಾರೆ.
Bangalore,Karnataka













