Last Updated:
ಪ್ರಾಂಶುಪಾಲರನ್ನು ಮಕ್ಕಳೇ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆ ಸಂಬಂಧ ಇದೀಗ ಪೊಲೀಸರು ಇಬ್ಬರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣ ಕೂಡ ತಿಳಿದುಬಂದಿದ್ದು, ಇದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ತಿದ್ದಿ ಬುದ್ದಿ ಹೇಳಿ, ಸರಿ ದಾರಿಗೆ ತಂದು, ಪಾಠ ಮಾಡುವ ಶಿಕ್ಷಕಿಯನ್ನೇ ವಿದ್ಯಾರ್ಥಿಗಳು (Students) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ತೆಲಂಗಾಣ (Telangana) ರಾಜ್ಯದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೆಪಲ್ಲಿ ಗ್ರಾಮದಲ್ಲಿ ಈ ಒಂದು ಭೀಕರ ಘಟನೆ ನಡೆದಿತ್ತು. ನಾಗಾರ್ಜುನ ಶಾಲೆಯ 50 ವರ್ಷದ ಮಹಿಳಾ ಪ್ರಾಂಶುಪಾಲರಾದ (Principal) ರೂಪಾ ರೆಡ್ಡಿ ಅವರನ್ನು ಅವರ ಸ್ವಂತ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.














