Prajwal Devaraj: ‘ಕರಾವಳಿ’ ಟ್ರೈಲರ್‌‌ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಪ್ರಜ್ವಲ್ ದೇವರಾಜ್! ಆ ಮಾತು ಹೇಳಿದ್ಯಾಕೆ? | | ACTPnews

ಕರಾವಳಿ


Last Updated:

ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ (Prajwal Devaraj) ಗೈರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಕುರಿತು ಸ್ವತಃ ಪ್ರಜ್ವಲ್ ದೇವರಾಜ್ ಮಾಧ್ಯಮಗಳ ಮುಂದೆ ಮಾತನಾಡಿದ್ದು, ತಮ್ಮ ಗೈರುಹಾಜರಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಕರಾವಳಿ
ಕರಾವಳಿ

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಕರಾವಳಿ’ (Karavali) ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ (Prajwal Devaraj) ಗೈರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಕುರಿತು ಸ್ವತಃ ಪ್ರಜ್ವಲ್ ದೇವರಾಜ್ ಮಾಧ್ಯಮಗಳ ಮುಂದೆ ಮಾತನಾಡಿದ್ದು, ತಮ್ಮ ಗೈರುಹಾಜರಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ವಿಶ್ವವಾಣಿ ಕನ್ನಡ ವರದಿ ಪ್ರಕಾರ ಪ್ರಜ್ವಲ್ ದೇವರಾಜ್, ಚಿತ್ರದ ನಿರ್ಮಾಪಕರಿಂದ ತಮಗೆ ದೊಡ್ಡ ಮೊತ್ತದ ಸಂಭಾವನೆ ಇನ್ನೂ ಬಾಕಿಯಿದೆ ಎಂದು ಹೇಳಿದ್ದಾರೆ. ಜೊತೆಗೆ ಜಿಎಸ್‌ಟಿ ಪಾವತಿಯೂ ಬಾಕಿ ಉಳಿದಿತ್ತು ಎಂದು ತಿಳಿಸಿದ್ದಾರೆ.

ಈ ಹಣವನ್ನು ಪಾವತಿಸಿದ ಬಳಿಕವೇ ಡಬ್ಬಿಂಗ್‌ಗೆ ಬರುತ್ತೇನೆ ಎಂದು ನಿರ್ಮಾಪಕ ಗುರುದತ್ ಗಾಣಿಗ ಅವರಿಗೆ ಮೊದಲೇ ತಿಳಿಸಿದ್ದೆ. ಇದು ಯಾವುದೇ ಹೊಸ ಬೇಡಿಕೆಯಾಗಿರಲಿಲ್ಲ. ಒಪ್ಪಂದದ ಪ್ರಕಾರ ನೀಡಬೇಕಾದ ಹಣವನ್ನು ಕೇಳಿದ್ದೆ ಅಷ್ಟೇ ಎಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಯಾವುದೇ ಹೊಸ ಸಿನಿಮಾ ಮಾಡದೆ ಮನೆಯಲ್ಲೇ ಇದ್ದೇನೆ. ಎಲ್ಲರಂತೆ ನನಗೂ ಆರ್ಥಿಕ ಜವಾಬ್ದಾರಿಗಳಿವೆ. ಆದ್ದರಿಂದ ಒಪ್ಪಿಕೊಂಡಿರುವ ಹಣವನ್ನು ನೀಡುವಂತೆ ಕೇಳಿದ್ದೆ ಎಂದು ಪ್ರಜ್ವಲ್ ಹೇಳಿದ್ದಾರೆ.

ನಿರ್ಮಾಪಕರ ವರ್ತನೆ ಬೇಸರ ತಂದಿದೆ

ಹಣದ ವಿಚಾರದಲ್ಲಿ ನಡೆದ ಮಾತುಕತೆಯ ವೇಳೆ ನಿರ್ಮಾಪಕರ ಪ್ರತಿಕ್ರಿಯೆ ತಮಗೆ ಬೇಸರ ತಂದಿತು ಎಂದು ಪ್ರಜ್ವಲ್ ತಿಳಿಸಿದ್ದಾರೆ. ತಮ್ಮ ಮನವಿಯನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲದೆ, ಮಾತನಾಡಿದ ರೀತಿಯೂ ನೋವುಂಟು ಮಾಡಿತು ಎಂದು ತಿಳಿಸಿದ್ದಾರೆ.

ಟ್ರೈಲರ್‌ನಲ್ಲಿ ಧ್ವನಿಯೇ ಇಲ್ಲ

ಜುಲೈ 6ರ ರಾತ್ರಿ ಟ್ರೈಲರ್ ನೋಡಿದಾಗ ಮಾತ್ರ ಈ ವಿಚಾರ ಗೊತ್ತಾಯಿತು. ಮೊದಲೇ ಮಾಹಿತಿ ನೀಡಿದ್ದರೆ, ಟ್ರೈಲರ್‌ಗೆ ಮಾತ್ರವಾದರೂ ಡಬ್ಬಿಂಗ್ ಮಾಡಿ ಕೊಡಬಹುದಿತ್ತು. ಸಿನಿಮಾ ಬಿಡುಗಡೆಯವರೆಗೆ ಇನ್ನೂ ಸಮಯ ಇದ್ದುದರಿಂದ ಉಳಿದ ಡಬ್ಬಿಂಗ್ ಅನ್ನು ನಂತರ ಪೂರ್ಣಗೊಳಿಸಬಹುದಾಗಿತ್ತು ಎಂದು ನಟ ಪ್ರಜ್ವಲ್ ಹೇಳಿದ್ದಾರೆ.

ರಾಜ್ ಬಿ. ಶೆಟ್ಟಿ ಜೊತೆ ಯಾವುದೇ ಮನಸ್ತಾಪ ಇಲ್ಲ

ಈ ವಿವಾದದ ನಡುವೆ ಸಹನಟ ರಾಜ್ ಬಿ. ಶೆಟ್ಟಿ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳಿಗೂ ಪ್ರಜ್ವಲ್ ದೇವರಾಜ್ ತೆರೆ ಎಳೆದಿದ್ದಾರೆ. ‘ಚೌಕ’ ಚಿತ್ರದ ಸಮಯದಿಂದಲೇ ನಮ್ಮ ನಡುವೆ ಉತ್ತಮ ಸ್ನೇಹವಿದೆ. ಇಂದಿಗೂ ಅದೇ ಆತ್ಮೀಯತೆ ಮುಂದುವರಿದಿದೆ. ರಾಜ್ ಬಿ. ಶೆಟ್ಟಿ ಅತ್ಯುತ್ತಮ ಕಲಾವಿದ ಹಾಗೂ ಒಳ್ಳೆಯ ವ್ಯಕ್ತಿ. ಅವರೊಂದಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆಯ ಜೊತೆಗೆ ಆರಂಭವಾಗಿರುವ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದರ ಬಗ್ಗೆ ಚಿತ್ರರಂಗದಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರತಂಡ ಹಾಗೂ ನಿರ್ಮಾಪಕರು ಈ ವಿಷಯವನ್ನು ಹೇಗೆ ಬಗೆಹರಿಸುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed