Last Updated:
Kashmiri Pandit: ಲಷ್ಕರ್-ಎ-ತೊಯ್ಬಾ ಬೆಂಬಲಿತ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ULC) 2026ರ ಆಗಸ್ಟ್ 27 ರಂದು ಹೊಸ ಬೆದರಿಕೆ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಯುಎಲ್ಸಿ ಮಾಧ್ಯಮ ಸಂಯೋಜಕ ಹಾಗೂ ತನ್ನನ್ನು ‘ರೆಸಿಸ್ಟೆನ್ಸ್ನ ಯೋಧ’ ಎಂದು ಕರೆದುಕೊಂಡಿರುವ ಅಹ್ಮದ್ ಬಿಲಾಲ್ ಎಂಬಾತನ ಸಹಿಯೊಂದಿಗೆ ಈ ಪತ್ರ ಹೊರಬಿದ್ದಿದೆ.
ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಕಾಶ್ಮೀರದ ಪಂಡಿತರು (Kashmir Pandits) ಮತ್ತೆ ಕಂಗಾಲಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ನಿರ್ಗಮನಕ್ಕೆ ಸಂಬಂಧಿಸಿದ ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸುವ ಮತ್ತು ತನಿಖೆ ನಡೆಸುವ ಚರ್ಚೆಗಳ ಬೆನ್ನಲ್ಲೇ ಉಗ್ರ ಸಂಘಟನೆಗಳಿಂದ (terrorist organizations) ಹೊಸ ಬೆದರಿಕೆ ಕರೆ ಬಂದಿದೆ. ಲಷ್ಕರ್-ಎ-ತೊಯ್ಬಾ (LeT – Lashkar-e-Taiba) ಉಗ್ರ ಸಂಘಟನೆಯ ಅಂಗಸಂಸ್ಥೆಯಾದ ‘ಯುನೈಟೆಡ್ ಲಿಬರೇಶನ್ ಕೌನ್ಸಿಲ್’ (ULC – The United Liberation Council) ಕಾಶ್ಮೀರಿ ಪಂಡಿತರಿಗೆ ನೇರ ಎಚ್ಚರಿಕೆ ನೀಡಿದ್ದು, ಕಣಿವೆಯಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.














