Karnataka Rain: ಕೆಲವೇ ಗಂಟೆಗಳಲ್ಲಿ 40 ಕಿಲೋಮೀಟರ್‌ ವೇಗದ ಬಿರುಗಾಳಿ ಜೊತೆ ಗುಡುಗು-ಸಿಡಿಲಿನ ಮಳೆ; ಈ 4 ಜಿಲ್ಲೆಗಳಿಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮಳೆ


Last Updated:

IMD ಮೇ 27 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನಕ್ಕೆ ಬಿರುಮಳೆ, ಬಿರುಗಾಳಿ ಎಚ್ಚರಿಕೆ, ಜೂನ್ 5 ರಂದು ಮುಂಗಾರು ಕರ್ನಾಟಕ ಪ್ರವೇಶಿಸಲಿದೆ

ಮಳೆ
ಮಳೆ

ಬೆಂಗಳೂರು: ನೀವು ಕರಾವಳಿ (Coastal) ಅಥವಾ ಮಲೆನಾಡಿನ ಭಾಗದವರಾ? ಹಾಗಾದರೆ ತಕ್ಷಣ ಈ ಸುದ್ದಿಯನ್ನು ಓದಿ! ಹವಾಮಾನ ಇಲಾಖೆಯು (IMD) ಮುಂದಿನ 3 ಗಂಟೆಗಳ ಕಾಲ ಅತ್ಯಂತ ಜಾಗರೂಕರಾಗಿರಲು ರಾಜ್ಯದ ಪ್ರಮುಖ 4 ಜಿಲ್ಲೆಗಳಿಗೆ ಬಿಗ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ಮೇ 27, 2026 ರಂದು ಮಧ್ಯಾಹ್ನ 12:00 ಗಂಟೆಗೆ ಹೊರಡಿಸಿರುವ ಈ ಮುನ್ಸೂಚನೆ ಏನು ಗೊತ್ತಾ? ಹಾಗಾದರೆ ಆ 4 ಜಿಲ್ಲೆಗಳು ಯಾವುವು? ಅಲ್ಲಿ ಏನಾಗಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಈ 4 ಜಿಲ್ಲೆಗಳಿಗೆ ಕಂಟಕ! ನಿಮ್ಮ ಜಿಲ್ಲೆಯೂ ಇದೆಯಾ ನೋಡಿ!

ಹವಾಮಾನ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ಮುಂದಿನ 3 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ವೇಗವಾಗಿ ಬೀಸುವ ಗಾಳಿಯ ಜೊತೆ ಬಿರುಮಳೆ ಸುರಿಯಲಿದೆ. ಈ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಆರ್ಭಟಿಸುವ ಮಳೆ ಅಪ್ಪಳಿಸಲಿದೆ. ಗಂಟೆಗೆ ಬರೋಬ್ಬರಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರಾದ ಬಿರುಗಾಳಿ ಬೀಸಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು: ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಸಂಜೆ/ರಾತ್ರಿ ಮಳೆ ಸುರಿಯಲಿದೆ.
ಇಂದು ಎಲ್ಲೆಲ್ಲಾ ಮಳೆಯಾಗಲಿದೆ?

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇದೆ! ಹವಾಮಾನ ಇಲಾಖೆ ನೀಡಿರುವ ಅತ್ಯಂತ ಬಿಗ್ ಅಪ್ಡೇಟ್ ಎಂದರೆ ಮುಂಗಾರು ಮಳೆಯ ಆಗಮನ! ಆದರೆ ಅದರ ಜೊತೆಯಲ್ಲೇ ಆತಂಕವೂ ಎದುರಾಗಿದೆ, ಬಂಗಾಳಕೊಲ್ಲಿಯಲ್ಲಿ ಭಾರಿ ವಾಯುಭಾರ ಕುಸಿತದಂತಹ ತಿರುವು ಉಂಟಾಗಲಿದ್ದು, ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಜೂನ್ 4 ರಂದು ಮುಂಗಾರು ಅಧಿಕೃತವಾಗಿ ಕೇರಳಕ್ಕೆ ಪ್ರವೇಶಿಸಲಿದೆ. ಜೂನ್ 5 ರಂದು ಮುಂಗಾರು ಮಾರುತಗಳು ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯಕ್ಕೆ ಕಾಲಿಡಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed