Last Updated:
ಶ್ರೀಲಂಕಾ ಎ ವಿರುದ್ಧ ಭಾರತ ಎ ಆಡಿದ ಸರಣಿಯ ಸಮಯದಲ್ಲಿ ಸಾಯಿ ಸುದರ್ಶನ್ ಕಾಲಿನ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ (Sri Lanka Tour) ಟೀಮ್ ಇಂಡಿಯಾಕ್ಕೆ (Team India) ಮತ್ತೊಂದು ಅಘಾತಕಾರಿ ಸುದ್ದಿ ಎದುರಾಗಿದೆ. ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರು ಈಗಾಗಲೇ ಗಾಯದ ಕಾರಣ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಉದಯೋನ್ಮುಖ ಬ್ಯಾಟರ್ ಸಾಯಿ ಸುದರ್ಶನ್ ಸೇರಿದ್ದಾರೆ. ಸಾಯಿ ಸುದರ್ಶನ್ ಹೆಬ್ಬೆರಳಿನ ಗಾಯದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.














