Last Updated:
Darshan: ಮಾಫಿ ಸಾಕ್ಷಿ ಅರ್ಜಿ ಸಂಬಂಧವಾಗಿ ವಿಚಾರಣೆ ನಡೆದಿದ್ದು, ಆಗಸ್ಟ್ 20ರಂದು ಹೇಳಿಕೆ ದಾಖಲಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್ಗೆ ಕಳುಹಿಸಿರುವ ಕೋರ್ಟ್ (Court) ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ. ಅರ್ಜಿಯಲ್ಲಿರುವ ಅಂಶಗಳು ಸ್ವಯಂಪ್ರೇರಿತವೇ ಎಂದು ಪ್ರಶ್ನಿಸಿರುವ ಕೋರ್ಟ್ ಇದಕ್ಕೆ ಪ್ರದೋಷ್ ಬಳಿ ಉತ್ತರ ಕೇಳಿದೆ. ಇಂದು ಮಾಫಿ ಸಾಕ್ಷಿ ಬಗ್ಗೆ ಪ್ರದೋಷ್ ಪ್ರತಿಕ್ರಿಯೆ ನೀಡಬೇಕಾಗಿದೆ.














