Last Updated:
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಹಿಡ್ಕಲ್ 99.74%, ಆಲಮಟ್ಟಿ 96.87%, ಭದ್ರಾ 86.45% ಭರ್ತಿ. ಕೆ.ಆರ್.ಸಾಗರ 56.76%, ಹೇಮಾವತಿ 47.20%, ಕಬಿನಿ 56.34% ಇದೆ.
ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಳೆಯ (Rain) ಅಬ್ಬರ ಒಂದೆಡೆಯಾದರೆ, ಪ್ರಮುಖ ಜಲಾಶಯಗಳ (Reservoir) ಇತ್ತೀಚಿನ ನೀರಿನ ಮಟ್ಟದ (Water Level) ಬಗ್ಗೆ ಅಚ್ಚರಿಯ ಹಾಗೂ ಬ್ರೇಕಿಂಗ್ ಅಪ್ಡೇಟ್ ಹೊರಬಂದಿದೆ. ಯಾವ ಡ್ಯಾಮ್ (Dam) ಸಂಪೂರ್ಣ ಭರ್ತಿಯಾಗಿದೆ? ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹಿಡ್ಕಲ್ ಅಣೆಕಟ್ಟು: ಶೇ. 99.74% ರಷ್ಟು ಭರ್ತಿಯಾಗಿ ಸಕ್ಕತ್ ಸದ್ದು ಮಾಡುತ್ತಿರುವ ಹಿಡ್ಕಲ್ ಡ್ಯಾಮ್ನಲ್ಲಿ ಈಗ ನೀರು ಅಂಚಿಗೆ ಬಂದಿದೆ. ಒಟ್ಟು 51 TMC ಸಾಮರ್ಥ್ಯವಿರುವ ಇಲ್ಲಿ ಬರೋಬ್ಬರಿ 50.8 ಖಿಒಅ ನೀರು ಸಂಗ್ರಹವಾಗಿದೆ.
ಭದ್ರಾ ಅಣೆಕಟ್ಟು: ಶೇ. 86.45% ರಷ್ಟು ಭರ್ತಿಯಾಗುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಹೇಮಾವತಿ ಹಾಗೂ ಕಬಿನಿ: ಹೇಮಾವತಿ ಅಣೆಕಟ್ಟು ಶೇ. 47.20% ಮತ್ತು ಕಬಿನಿ ಅಣೆಕಟ್ಟು ಶೇ. 56.34% ರಷ್ಟು ಮಾತ್ರ ಭರ್ತಿಯಾಗಿದ್ದು, ಮಧ್ಯಮ ಹಂತದಲ್ಲಿ ನೀರು ಕಾಯ್ದುಕೊಂಡಿವೆ.
ತುಂಗಭದ್ರಾ ಅಣೆಕಟ್ಟು: ಶೇ. 78.21% ತುಂಬಿದ್ದು, 82 TMC ಗೂ ಅಧಿಕ ನೀರು ಸಂಗ್ರಹವಾಗಿದೆ.
ನಾರಾಯಣಪುರ ಅಣೆಕಟ್ಟು: ಶೇ. 83.09% ಭರ್ತಿಯಾಗಿದ್ದು, ಹೊರಹರಿವು ಕೂಡ ಜೋರಾಗಿದೆ.
ಭೀಮಾ ಲಿಫ್ಟ್ (ಸೊನ್ನ ಬ್ಯಾರೇಜ್): ಶೇ. 88.56% ರಷ್ಟು ಭರ್ತಿಯಾಗಿ ಅಚ್ಚರಿ ಮೂಡಿಸಿದೆ.














