Last Updated:
ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ವ್ಯತ್ಯಾಸ: ಉತ್ತರ ಕರ್ನಾಟಕದ ಡ್ಯಾಮ್ಗಳು ಭರ್ತಿ, ದಕ್ಷಿಣ ಕರ್ನಾಟಕದ ಕೆ.ಆರ್.ಎಸ್. ಸೇರಿ ಕೆಲವು ಜಲಾಶಯಗಳಲ್ಲಿ ನೀರಿನ ಕೊರತೆ.
ಬೆಂಗಳೂರು: ಕರ್ನಾಟಕದ (Karnataka) ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಡ್ಯಾಮ್ಗಳ ಕಥೆ ಒಂದಕ್ಕೊಂದು ಭಿನ್ನವಾಗಿದೆ. ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್., (KRS) ಕಬಿನಿ (Kabini), ಹೇಮಾವತಿ ಹಾಗೂ ಹಾರಂಗಿಯಲ್ಲಿ (Harangi) ನೀರಿನ ಸಂಗ್ರಹವು ನಿರೀಕ್ಷಿತ ಮಟ್ಟಕ್ಕಿಂತ ಕೊಂಚ ಕಡಿಮೆಯಾಗುತ್ತಿರುವುದು ಅನ್ನದಾತರಲ್ಲಿ ಚಿಂತೆ ಮೂಡಿಸಿದೆ. ಇದರೊಂದಿಗೆ ಕೃಷ್ಣಾ ಹಾಗೂ ತುಂಗಭದ್ರಾ ಬೇಸಿನ್ನಲ್ಲಿರುವ ಬೃಹತ್ ಅಣೆಕಟ್ಟುಗಳು ಭರ್ತಿಯಾಗುವ ಅಂಚಿಗೆ ತಲುಪಿದ್ದು, ರಾಜ್ಯದ ಜನತೆಗೆ ಇದು ದೊಡ್ಡ ನಿರಾಳತೆಯನ್ನು ತಂದಿದೆ.














