Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್‌ ಆಗಲು ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಾಧಕಿಯ ಕಥೆ


Last Updated:

ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

ಸಾಧಕಿಯ ಕಥೆ
ಸಾಧಕಿಯ ಕಥೆ

ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗಾಗಿ “ಪ್ರಾಜೆಕ್ಟ್ ಸೂರ್ಯ” ಎಂಬ ಸಂಸ್ಥೆ (Foundation) ಹುಟ್ಟುಹಾಕಿ ಇಂದು ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಅತ್ಯಂತ ಕಿರಿಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ!

ತಮ್ಮನ ನೋವೇ ಸ್ಫೂರ್ತಿ,  ಹುಟ್ಟಿತು ಪ್ರಾಜೆಕ್ಟ್ ಸೂರ್ಯ

ದಿವಾ ಅವರ ತಮ್ಮ ಸೂರ್ಯನಿಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದಾಗ ಇಡೀ ಕುಟುಂಬ ಬೆಚ್ಚಿಬಿದ್ದಿತು. ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು, ನಿರಂತರ ಗ್ಲೂಕೋಸ್ ಪರೀಕ್ಷೆ ಮತ್ತು ಭಾವನಾತ್ಮಕ ಹೋರಾಟ ಕಣ್ಣಾರೆ ಕಂಡ ದಿವಾ ಮನದಲ್ಲಿ ಒಂದು ಪ್ರಶ್ನೆ ಮೂಡಿತು. “ಇನ್ಸುಲಿನ್ ಕೊಳ್ಳಲಾಗದ ಬಡ ಮಕ್ಕಳ ಗತಿ ಏನು?” ಈ ಒಂದು ಪ್ರಶ್ನೆ 2021ರಲ್ಲಿ “ಪ್ರಾಜೆಕ್ಟ್ ಸೂರ್ಯ” ಸ್ಥಾಪನೆಗೆ ನಾಂದಿ ಹಾಡಿತು. ಕನ್ನಡದಲ್ಲಿ “ಸೂರ್ಯ” ಅಂದರೆ ಬೆಳಕು, ಟೈಪ್ 1 ಮಧುಮೇಹ ಪೀಡಿತ ಮಕ್ಕಳ ಜೀವನವನ್ನು ಸೂರ್ಯನಂತೆ ಬೆಳಗಿಸುವ ಸಂಕಲ್ಪವೇ ಈ ಸಂಸ್ಥೆಯ ಆಶಯ.

5 ವರ್ಷದಲ್ಲಿ 10 ನಗರ, 6 ದೇಶಗಳಲ್ಲಿ ಅಲೆ!

ಇಂದು 17ರ ಹರೆಯದ ದಿವಾ ನೇತೃತ್ವದ ಈ ಯುವ ಸಂಸ್ಥೆ ಭಾರತ, UAE, ಅಮೆರಿಕ, ಕೆನಡಾ, ಮೊರಾಕೊ ಮತ್ತು ನೈಜೀರಿಯಾ ಸೇರಿ 6 ದೇಶಗಳ 10 ನಗರಗಳಿಗೆ ವ್ಯಾಪಿಸಿದೆ. ಇದುವರೆಗೆ 4.02 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿ, 19,858 ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿ, 3,190 ಮಕ್ಕಳಿಗೆ ನೆರವು ನೀಡಲಾಗಿದೆ. ಇದಲ್ಲದೆ 200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ 49,500 ಗ್ರಾಮೀಣ ಜನರನ್ನು ತಲುಪಲಾಗಿದೆ. 4,500 ಇನ್ಸುಲಿನ್ ಶೀಷೆ, 1,000 ಸಿರಿಂಜ್ ದಾನ ಮಾಡಿ ₹20 ಲಕ್ಷ ನಿಧಿ ಸಂಗ್ರಹಿಸಲಾಗಿದೆ. ಎಂದು ಬೆಂಗಳೂರು ಮಿರರ್‌ ವರದಿ ಮಾಡಿದೆ.

ವಿಶ್ವಸಂಸ್ಥೆಯಿಂದ ಫೋರ್ಬ್ಸ್‌ವರೆಗೆ ಮಾನ್ಯತೆ!

ಇದನ್ನೂ ಓದಿ: Peaceful Life: ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್‍ಬೈ, ಹಿಮಾಲಯದ ಕಣಿವೆಯಲ್ಲಿ ಚಹಾ ಮಾರಾಟ ಮಾಡುವುದೇ ನೆಮ್ಮದಿ!

G20 ವಿದ್ಯಾರ್ಥಿ ಶೃಂಗ ಮತ್ತು ವಿಶ್ವಸಂಸ್ಥೆಯ ಆ್ಯಕ್ಟಿವೇಟ್ ಇಂಪ್ಯಾಕ್ಟ್ ಶೃಂಗದಲ್ಲಿ ಭಾಗವಹಿಸಿರುವ ದಿವಾ, ಡಯಾನಾ ಅವಾರ್ಡ್ 2023 ಹಾಗೂ ಗ್ಲೋಬಲ್ ಸ್ಟೂಡೆಂಟ್ ಪ್ರೈಜ್‌ನ ಭಾರತದ ಅಗ್ರ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ. ತೆರಿಗೆ ಮುಕ್ತ ಇನ್ಸುಲಿನ್ ಮತ್ತು ಟೈಪ್ 1 ಮಧುಮೇಹ ಪೀಡಿತರ ಸವಾಲುಗಳ ಮಾನ್ಯತೆಗಾಗಿ ನೀತಿ ಬದಲಾವಣೆಯ ಹೋರಾಟವನ್ನೂ ಮುನ್ನಡೆಸುತ್ತಿದ್ದಾರೆ. “ಪ್ರತಿ ಮಗುವಿಗೂ ಆರ್ಥಿಕ ಸ್ಥಿತಿ ಹೇಗಿದ್ದರೂ ಆರೋಗ್ಯವಾಗಿ ಕನಸು ಕಾಣುವ ಹಕ್ಕಿದೆ” ಎನ್ನುವ ದಿವಾ ಅವರ ಈ ಸ್ಫೂರ್ತಿದಾಯಕ ಕಥೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed