Last Updated:
ರಾಜ್ಯದಲ್ಲಿ ಮಳೆಯಿಂದ ಆಲಮಟ್ಟಿ, ಹಾರಂಗಿ ಅಣೆಕಟ್ಟುಗಳು ಭರ್ತಿಯಾಗುವ ಹಂತದಲ್ಲಿವೆ. ನಾರಾಯಣಪುರ ಅಣೆಕಟ್ಟು ಭರ್ತಿಯಾಗಿದೆ. ಕೆ.ಆರ್.ಸಾಗರ, ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು ಹರಿದುಬರುತ್ತಿದೆ. ಇದರಿಂದಾಗಿ ಕೆಲವು ಡ್ಯಾಮ್ಗಳು ಭರ್ತಿಯಾಗುವ ಹಂತದಲ್ಲಿದ್ದರೆ, ಇನ್ನು ಕೆಲವು ಜಲಾಶಯಗಳು ರೈತರಿಗೆ (Farmer) ಮುಡಿಗೆ ಹೂವಿನಂತೆ ನೆಮ್ಮದಿ ತಂದಿವೆ. ಪ್ರಮುಖ ಜಲಾಶಯಗಳಾದ (Reservoirs) ಆಲಮಟ್ಟಿ ಹಾಗೂ ಹಾರಂಗಿ (Harangi) ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿದ್ದು, ಶೇಕಡಾವಾರು ನೀರಿನ ಪ್ರಮಾಣ (Water Level) ಗಣನೀಯವಾಗಿ ಏರಿಕೆಯಾಗಿದೆ. ಕಾವೇರಿ (Cauvery) ಮತ್ತು ಕೃಷ್ಣಾ (Krishna) ಜಲಾನಯನ ಪ್ರದೇಶದ ಪ್ರಸ್ತುತ ನೀರಿನ ಮಟ್ಟದ ಸಂಪೂರ್ಣ ವರದಿ ಇಲ್ಲಿದೆ.
ಆಲಮಟ್ಟಿ ಅಣೆಕಟ್ಟು: ಶೇಕಡಾ 95.77 ರಷ್ಟು ಭರ್ತಿಯಾಗಿದ್ದು, ಒಟ್ಟು 117.88 ಟಿಎಂಸಿ ನೀರು ಸಂಗ್ರಹವಿದೆ. ಇಲ್ಲಿಂದ ಬರೋಬ್ಬರಿ 20,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ನಾರಾಯಣಪುರ ಅಣೆಕಟ್ಟು: ಶೇಕಡಾ 99.29 ರಷ್ಟು ತುಂಬಿ ತುಳುಕುತ್ತಿದ್ದು, ಸಂಪೂರ್ಣ ಭರ್ತಿಯ ಅಂಚಿನಲ್ಲಿದೆ.
ಹಾರಂಗಿ ಅಣೆಕಟ್ಟು: ಶೇಕಡಾ 95.54 ರಷ್ಟು ಭರ್ತಿಯಾಗಿದ್ದು, ಜಲಾಶಯಕ್ಕೆ 3,221 ಕ್ಯೂಸೆಕ್ ಒಳಹರಿವು ಇದೆ.
ತುಂಗಭದ್ರಾ ಅಣೆಕಟ್ಟು: ಶೇಕಡಾ 32.28 ರಷ್ಟು ಭರ್ತಿಯಾಗಿದ್ದು, ಒಳಹರಿವು ಹೆಚ್ಚಳವಾಗುತ್ತಿದೆ.
Bangalore,Karnataka














