Bengaluru Power Cut: ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ನಾಳೆ 6 ಗಂಟೆ ಕರೆಂಟ್ ಇರಲ್ಲ, ನಿಮ್ಮ ಏರಿಯಾ ಪಟ್ಟಿಯಲ್ಲಿದೆಯಾ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಿದ್ಯುತ್ ಕಡಿತ


Last Updated:

ಜುಲೈ 29 ರಂದು ಬೆಂಗಳೂರಿನ ಹೆಬ್ಬಾಳ ವಿಭಾಗದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಕಾರಣ.

ವಿದ್ಯುತ್ ಕಡಿತ
ವಿದ್ಯುತ್ ಕಡಿತ

ಬೆಂಗಳೂರು ಜನತೆಗೆ ಬೆಸ್ಕಾಂ (Bescom) ಕಡೆಯಿಂದ ಒಂದು ಪ್ರಮುಖ ಮತ್ತು ತುರ್ತು ಎಚ್ಚರಿಕೆ ನೀಡಲಾಗಿದೆ. ಜುಲೈ 29 ರಂದು ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು (Publics) ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮನವಿ ಮಾಡಲಾಗಿದೆ. ಕೆಪಿಟಿಸಿಎಲ್ (KPTCL) ವತಿಯಿಂದ ಕೈಗೊಳ್ಳಲಾಗುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಈ ಪವರ್ ಕಟ್ (Power Cut) ಇರಲಿದೆ.

ವಿದ್ಯುತ್ ಕಡಿತದ ಸಮಯ

ದಿನಾಂಕ: ಜುಲೈ 29

ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 5:00 ರವರೆಗೆ (ಪೂರ್ಣ 6 ಗಂಟೆಗಳ ಕಾಲ ವಿದ್ಯುತ್ ಸಂಪರ್ಕವಿರುವುದಿಲ್ಲ)

ಕಾರಣ: ಕಟ್ಟಿಗೇನಹಳ್ಳಿ 66/11 ಕೆವಿ ಸಬ್‍ಸ್ಟೇಷನ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ.
ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ?

ನಿಮ್ಮ ಮನೆ ಅಥವಾ ಕಚೇರಿ ಈ ಕೆಳಗಿನ ಪ್ರದೇಶಗಳ ವ್ಯಾಪ್ತಿಯಲ್ಲಿದ್ದರೆ, ಇಂದೇ ನಿಮ್ಮ ಮೊಬೈಲ್ ಚಾಜಿರ್ಂಗ್, ನೀರಿನ ಸಂಗ್ರಹ ಹಾಗೂ ಇತ್ಯಾದಿ ಕೆಲಸಗಳನ್ನು ಮುಗಿಸಿಟ್ಟುಕೊಳ್ಳುವುದು ಉತ್ತಮ.

ಪ್ರಮುಖ ಗೇಟ್‍ಗಳು ಮತ್ತು ಕಂಪನಿಗಳು

ನಾರ್ತ್ ಗೇಟ್ 1, 2, 3, ರಾಯಭಾರ ಕಚೇರಿ ಹಾಗೂ ಫಿಲಿಪ್ಸ್ ಕಂಪನಿ ಸುತ್ತಮುತ್ತಲಿನ ಪ್ರದೇಶಗಳು.ದ್ವಾರಕಾನಗರ, ಬಾಬಾನಗರ ಮತ್ತು ಸಂಪೂರ್ಣ ಕಟ್ಟಿಗೇನಹಳ್ಳಿ ಸುತ್ತಮುತ್ತಲಿನ ವಲಯ. ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ ಹಾಗೂ ವಿನಾಯಕನಗರ.ಮಣಿಪಾಲ ಕಾಲೇಜು, ಬಿಎಸ್‍ಎಫ್ ಕ್ಯಾಂಪ್ ಮತ್ತು ಪಿಡಿಎಂಎಸ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರಿಗೆ ಬೆಸ್ಕಾಂ ಮನವಿ

ಈ ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ ಉಂಟಾಗಬಹುದಾದ ಅನಾನುಕೂಲತೆಗಾಗಿ ಬೆಸ್ಕಾಂ ವಿಷಾದಿಸಿದೆ. ಸಾರ್ವಜನಿಕರು ಈ ಅವಧಿಗೆ ಮುಂಚಿತವಾಗಿ ತಮ್ಮ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವ ಮೂಲಕ ಸಹಕರಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಕೋರಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed