IND vs ENG: ಈ 3 ತಪ್ಪುಗಳಿಂದಲೇ ಭಾರತ ಸತತ ಸರಣಿ ಸೋಲಲು ಕಾರಣ! ಸರಿಪಡಿಸಿಕೊಂಡರಷ್ಟೇ ಉಳಿಗಾಲ: ಮಾಜಿ ಕ್ರಿಕೆಟರ್ ವಾರ್ನಿಂಗ್ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:


ಯುರೋಪ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು ಏಳು T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ, ಅವುಗಳಲ್ಲಿ ಯಾವುದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಭಾರತ ಮೊದಲು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ T20 ಸರಣಿಯನ್ನು 0-2 ಅಂತರದಲ್ಲಿ ಸೋತಿತು. ನಂತರ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ T20 ಸರಣಿಯಲ್ಲಿ ಭಾರತವನ್ನು 4-0 ಅಂತರದಲ್ಲಿ ಸೋಲಿಸಿತು.

ಭಾರತ ತಂಡ
ಭಾರತ ತಂಡ

ಭಾರತ ತಂಡ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ 7 ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳನ್ನೂ ಸೋತಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ (Ireland and England) ಪ್ರವಾಸಗಳಲ್ಲಿ ಟೀಮ್ ಇಂಡಿಯಾದ ಪ್ರದರ್ಶನವು ಭಾರತೀಯ ಟಿ20 ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಭಾರತ ತಂಡವು ಕಳೆದ ಎರಡು ವಾರಗಳ ಅಂತರದಲ್ಲಿ ಸತತ ಎರಡು T20 ಸರಣಿಗಳನ್ನು (T20 Series) ಸೋತಿದೆ. ಈ ಕಳಪೆ ಪ್ರದರ್ಶನದ ನಂತರ ಟೀಮ್ ಇಂಡಿಯಾ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಇದರ ನಡುವೆ, ಭಾರತದ ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಭಾರತದ ಸರಣಿ ಸೋಲಿಗೆ ಮೂರು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ.

ಯುರೋಪ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು ಏಳು T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ, ಅವುಗಳಲ್ಲಿ ಯಾವುದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಭಾರತ ಮೊದಲು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ T20 ಸರಣಿಯನ್ನು 0-2 ಅಂತರದಲ್ಲಿ ಸೋತಿತು. ನಂತರ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ T20 ಸರಣಿಯಲ್ಲಿ ಭಾರತವನ್ನು 4-0 ಅಂತರದಲ್ಲಿ ಸೋಲಿಸಿತು.

ಟೀಮ್ ಇಂಡಿಯಾದ ಸೋಲಿಗೆ ಪೂಜಾರ ನೀಡಿದ 3 ಕಾರಣಗಳು

ಭಾರತದ ಕಳಪೆ ಪ್ರದರ್ಶನಕ್ಕೆ ಭಾರತದ ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಮೂರು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ. ಪೂಜಾರ ಅವರ ಪ್ರಕಾರ, ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಧ್ಯಮ ಕ್ರಮಾಂಕ ಅತ್ಯಂತ ದುರ್ಬಲವಾಗಿದೆ. ತಂಡದಲ್ಲಿ ಆಲ್​ರೌಂಡರ್​ಗಳ ದಂಡೇ ಇದೆ, ಆದರೆ ಗುಣಮಟ್ಟದ ಆಲ್‌ರೌಂಡರ್‌ಗಳ ಕೊರತೆ 2ನೇ ಕಾರಣವಾದರೆ, ಕಳಪೆ ಫೀಲ್ಡಿಂಗ್ ಭಾರತದ ಸತತ ಸೋಲುಗಳಿಗೆ ಪ್ರಮುಖ ಕಾರಣಗಳು ಎಂದು ತಿಳಿಸಿದ್ದಾರೆ.

ಕಳಪೆ ಫೀಲ್ಡಿಂಗ್

ಸಂದರ್ಶನವೊಂದರಲ್ಲಿ ಮಾತನಾಡಿದ ಚೇತೇಶ್ವರ ಪೂಜಾರ ಭಾರತದ ಕಳಪೆ ಫೀಲ್ಡಿಂಗ್ ಅನ್ನು ಪ್ರಶ್ನಿಸಿದ್ದಾರೆ. ಯಾವುದೇ ತಂಡಕ್ಕೂ ಇಂತಹ ನಿರ್ಲಕ್ಷ್ಯವು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಯುವ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ದೋಷಗಳು ಸಹಜ ಎಂದು ಒಪ್ಪಿಕೊಂಡರೂ, ಯಾವುದೇ ಸಂದರ್ಭಗಳಲ್ಲಿ ಕಳಪೆ ಫೀಲ್ಡಿಂಗ್ ಕ್ಷಮಿಸಲಾಗದು ಎಂದು ಅವರು ಪ್ರತಿಪಾದಿಸಿದರು. ಫೀಲ್ಡಿಂಗ್ T20 ಪಂದ್ಯದ ಹಾದಿಯನ್ನು ಬದಲಾಯಿಸಬಹುದು. ಆದರೆ ಈ ಸರಣಿಯಾದ್ಯಂತ ಭಾರತದ ಫೀಲ್ಡಿಂಗ್ ನಿರಾಶಾದಾಯಕವಾಗಿದೆ. ಇದು ತಂಡದ ಅತಿದೊಡ್ಡ ದೌರ್ಬಲ್ಯಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ದುರ್ಬಲ ಮಧ್ಯಮ ಕ್ರಮಾಂಕದ ಬ್ಯಾಟಿಂಗ್

ಎರಡೂ ತಂಡಗಳ ಮಧ್ಯಮ ಕ್ರಮಾಂಕದ ಪ್ರದರ್ಶನಗಳ ನಡುವಿನ ತೀವ್ರ ವ್ಯತ್ಯಾಸವನ್ನು ಪೂಜಾರ ಎತ್ತಿ ತೋರಿಸಿದ್ದಾರೆ. ಇಂಗ್ಲೆಂಡ್‌ನ 5, 6, 7 ಮತ್ತು 8 ನೇ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ಗಳು ಪ್ರತಿ ಪಂದ್ಯದಲ್ಲೂ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತವು ತಿಲಕ್ ವರ್ಮಾ ಅವರನ್ನು 5ನೇ ಸ್ಥಾನದಲ್ಲಿ ಮತ್ತು ಶಿವಂ ದುಬೆ ಅವರನ್ನು 6ನೇ ಸ್ಥಾನದಲ್ಲಿ ಕಣಕ್ಕಿಳಿಸಿದರೂ, ಅವರು ಇಂಗ್ಲಿಷ್ ಆಟಗಾರರಂತೆಯೇ ಪರಿಣಾಮವನ್ನು ಬೀರಲು ವಿಫಲರಾದರು ಎಂದು ಪೂಜಾರ ತಿಳಿಸಿದ್ದಾರೆ.

ಆಲ್-ರೌಂಡರ್‌ಗಳ ಕೊರತೆಯ ಬಗ್ಗೆ ಕಳವಳ

ಭಾರತ ತಂಡದಲ್ಲಿ ವಿಶ್ವಾಸಾರ್ಹ ಆಲ್‌ರೌಂಡರ್ ಕೊರತೆ ಎದ್ದು ಕಾಣುತ್ತಿದೆ. ಭಾರತ ತಂಡವು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸ್ಥಿರವಾಗಿ ಪ್ರದರ್ಶನ ನೀಡುವ ಸಾಮರ್ಥ್ಯವಿರುವ ಆಲ್‌ರೌಂಡರ್ ಅನ್ನು ಹೊಂದಿಲ್ಲ. ಇದು ಈಗಷ್ಟೇ ಅಲ್ಲ, ಭವಿಷ್ಯದಲ್ಲೂ ತಂಡಕ್ಕೆ ಕಳವಳಕಾರಿಯಾದ ವಿಷಯ. ಮ್ಯಾನೇಜ್‌ಮೆಂಟ್ ಈ ವಿಷಯದ ಬಗ್ಗೆ ಗಮನಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಗೊಂಡು ಈ ಸರಣಿಯಿಂದ ದೂರ ಉಳಿದಿದ್ದರು. ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದ ನಿತೀಶ್ ಕೂಡ ಗಾಯಗೊಂಡು ಹೊರಗುಳಿದಿದ್ದರಿಂದ ತಂಡದಲ್ಲಿ ಬೌಲಿಂಗ್-ಬ್ಯಾಟಿಂಗ್ ಎರಡಲ್ಲೂ ಸಮತೋಲನ ತರುವ ಆಟಗಾರನ ಕೊರತೆ ಎದ್ದು ಕಾಣಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed