Last Updated:
Darshan-Vijayalakshmi: ದರ್ಶನ್ ಹಾಗೂ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ದರ್ಶನ್ ಪತ್ನಿಯ ನಡೆ ಅಚ್ಚರಿ ಮೂಡಿಸಿದೆ. ಲೇಟೆಸ್ಟ್ ಅಪ್ಡೇಟ್ ಏನು?
ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪಿ ದರ್ಶನ್ಗೆ (Darshan) 1 ವರ್ಷ ಬೇಲ್ ಇಲ್ಲ ಎನ್ನುವುದು ನುಂಗಲಾರದ ತುತ್ತಾಗಿದೆ. ಅವರು ಈಗ ಜೈಲಿನಲ್ಲಿ (Jail) ಇರಲೇಬೇಕಾಗಿದೆ. ಜಾಮೀನಿನ ಆಪ್ಶನ್ 1 ವರ್ಷದ ತನಕ ಬ್ಲಾಕ್ ಆಗಿದೆ. ಹೀಗಿರುವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಕಣ್ಣೀರು ಒಂದು ಕಡೆಯಾದರೆ ಪತ್ನಿ, ಮಗನನ್ನ ನೋಡಲು ಹಾತೊರೆಯುತ್ತಿರುವ ಅವರಿಗೆ ಕುಟುಂಬಸ್ಥರ ಭೇಟಿಯೂ ಸಾಧ್ಯವಾಗುತ್ತಿಲ್ಲ.
ಮೇ 19ರಂದು ನಟ ದರ್ಶನ್ ವಿವಾಹ ವಾರ್ಷಿಕೋತ್ಸವದ ಸಂಬಂಧವಾಗಿ ಹೆಂಡತಿ, ಮಗನ ಒಳಸಂದರ್ಶನಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಘಿದೆ. ಕೊಠಡಿ ಒಳಗೆ ಭೇಟಿ ಮಾಡಲು ಅವಕಾಶ ನೀಡಿ ಅಂತ ಮನವಿ ಮಾಡಲಾಗಿದೆ.
ಜೈಲು ಆಧೀಕ್ಷಕ ಎಸ್ಪಿ ಅಂಶುಕುಮಾರ್ಗೆ ಮನವಿ ಮಾಡಲಾಗಿದ್ದು ಕಾರಾಗೃಹ ಡಿಐಜಿ ಅಲೋಕ್ ಕುಮಾರ್ಗೆ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ. ಬಹುತೇಕ ನಾಳೆ ಪತ್ನಿ ಭೇಟಿಗೆ ದರ್ಶನ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಮೇ 19 ರಂದು ದರ್ಶನ್ ವಿಜಯಲಕ್ಷ್ಮಿ 23 ನೇ ವಿವಾಹ ವಾರ್ಷಿಕೋತ್ಸವ ಇರಲಿದ್ದು ಹೆಂಡತಿ-ಮಗನ ಒಳಸಂದರ್ಶನಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಕೊಠಡಿಯ ಒಳಗೆ ಭೇಟಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದ್ದು ಪರಪ್ಪನ ಅಗ್ರಹಾರ ಜೈಲು ಆಧೀಕ್ಷಕ ಎಸ್ಪಿ ಅಂಶುಕುಮಾರ್ ಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ.
Bangalore,Karnataka
May 18, 2026 12:43 PM IST













