Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ | | ACTPnews

Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ |


ದಿವ್ಯಾಂಶು ಕೇವಲ ಮಾಡೆಲ್ ಮಾತ್ರವಲ್ಲದೆ, ಡಿಸೈನರ್ ಕಾರ್ತಿಕ್ ಕುಮ್ರಾ ಸ್ಥಾಪಿಸಿದ ಬ್ರ್ಯಾಂಡ್ ಕಾರ್ತಿಕ್ ರಿಸರ್ಚ್‌ನ ದೆಹಲಿ ರೀಟೆಲ್ ಮಾರಾಟ ಮಳಿಗೆಯನ್ನು ಸಹ ನಿರ್ವಹಿಸುತ್ತಿದ್ದರು.

ವರದಿಗಳ ಪ್ರಕಾರ, ದಿವ್ಯಾಂಶು ಬ್ರಾಂಡ್‌ಗೆ ಸಂಬಂಧಿಸಿದ ಫೋಟೋಶೂಟ್‌ಗಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು. ಪೆರುಂಬವೂರ್ ಬಳಿಯ ಮುದಕುಳದಲ್ಲಿರುವ ನೀರು ತುಂಬಿದ ಕ್ವಾರಿಯಲ್ಲಿ ಈ ಘಟನೆ ನಡೆದಿದೆ.

20 ವರ್ಷಗಳಿಂದ ಪಾಳುಬಿದ್ದಿದ್ದ ಕ್ವಾರಿ

ಈ ಕ್ವಾರಿ ಎರಡು ದಶಕಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಸ್ಥಳೀಯವಾಗಿ ಅಪಾಯಕಾರಿ ಸ್ಥಳವೆಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ. ಫೋಟೋಶೂಟ್ ಮಾಡಿದ ತಂಡ ಸ್ಥಳಕ್ಕೆ ಪ್ರವೇಶಿಸಲು ಅಥವಾ ಚಿತ್ರೀಕರಣ ಮಾಡಲು ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ.

ಮಿಂಟ್ ಲೌಂಜ್ ವರದಿಯ ಪ್ರಕಾರ, ಕೊಡನಾಡ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸರಿನ್ ಎ.ಎಸ್., ಎಫ್‌ಐಆರ್‌ನಲ್ಲಿ ದೆಹಲಿ ಮೂಲದ ಫ್ಯಾಷನ್ ಬ್ರ್ಯಾಂಡ್‌ನಿಂದ ಈ ಪ್ರಾಜೆಕ್ಟ್​​ಗಾಗಿ ನೇಮಕಗೊಂಡಿದ್ದ ಕೊಚ್ಚಿ ಮೂಲದ ರಬ್ಬರ್‌ಬ್ಯಾಂಡ್ ಪ್ರೊಡಕ್ಷನ್ಸ್‌ನ ರಾಜೀವ್ ನೀಲಕಂಠನ್ ಅವರನ್ನು ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಪಂಚಾಯತ್ ಅಧ್ಯಕ್ಷೆ ಶಿಮಿ ವರ್ಗೀಸ್ ಮತ್ತು ನೀಲಕಂಠನ್ ಕೂಡ ಕ್ವಾರಿ ಪ್ರವೇಶಿಸಲು ಅಥವಾ ಚಿತ್ರೀಕರಣ ಮಾಡಲು ಬೇಕಾದ ಕಡ್ಡಾಯ ಆಡಳಿತಾತ್ಮಕ ಅನುಮತಿಗಳನ್ನು ಪಡೆಯಲಾಗಿಲ್ಲ ಎಂದು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ದುರಂತವು ಫ್ಯಾಷನ್ ಶೂಟ್‌ಗಳಲ್ಲಿನ ಸುರಕ್ಷತಾ ಮಾನದಂಡಗಳ ಬಗ್ಗೆ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ವಿಶೇಷವಾಗಿ ಮಾಡೆಲ್‌ಗಳು ಮತ್ತು ಸಿಬ್ಬಂದಿಯನ್ನು ಅಪಾಯಕಾರಿ ಹೊರಾಂಗಣ ಸ್ಥಳಗಳಿಗೆ ಕರೆದೊಯ್ಯುವಾಗ ಎಷ್ಟು ಅಪಾಯಗಳಿರುತ್ತವೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.

ಕಾರ್ತಿಕ್ ರಿಸರ್ಚ್ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ನೀಡಿ, “ನಮ್ಮ ಆತ್ಮೀಯ ಸಹೋದ್ಯೋಗಿ ಮತ್ತು ಸ್ನೇಹಿತ ದಿವ್ಯಾಂಶು ಜೋಶಿ ಅವರ ಸಾವಿನಿಂದ ನಾವು ನೊಂದಿದ್ದೇವೆ. ಅವರು ಮೇ 28, 2026 ರಂದು ನಿಧನರಾದರು. ಕಳೆದ ಎರಡು ವರ್ಷಗಳಿಂದ, ದಿವ್ಯಾಂಶು ನಮ್ಮ ದೆಹಲಿ ಅಂಗಡಿಯನ್ನು ಮುನ್ನಡೆಸಿದರು. ಅವರನ್ನು ಅವರ ತಂಡವು ತುಂಬಾ ಪ್ರೀತಿಸುತ್ತಿತ್ತು. ಅವರೊಂದಿಗೆ ಕೆಲಸ ಮಾಡಿದವರೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ.

ಪ್ರೊಡಕ್ಷನ್​ ಭಾಗವಾಗಿ ಈಜು ಸಂಬಂಧಿತ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಬ್ರ್ಯಾಂಡ್ ಸ್ಪಷ್ಟಪಡಿಸಿದೆ. ಮಿಂಟ್ ಲೌಂಜ್ ಪ್ರಕಾರ, ಬ್ರ್ಯಾಂಡ್‌ನ ಹೇಳಿಕೆಯ ಪ್ರಕಾರ, ಕಾರ್ತಿಕ್ ಕುಮ್ರಾ ದಿವ್ಯಾಂಶು ಅವರನ್ನು ಹುಡುಕಲು ನೀರಿಗೆ ಇಳಿದರು. ಆದರೆ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸಿಬ್ಬಂದಿ ತುರ್ತು ಸೇವೆಗಳನ್ನು ಸಂಪರ್ಕಿಸಿದರು ಎನ್ನಲಾಗಿದೆ.

ಆದಾಗ್ಯೂ, SHO ಸರಿನ್, “ಜೋಶಿ ನಂತರ ಯಾರೂ ಕ್ವಾರಿಗೆ ಹಾರಲಿಲ್ಲ” ಎಂದು ಹೇಳಿರುವುದಾಗಿ ವರದಿಯಾಗಿದೆ. ನಂತರ ಅಧಿಕಾರಿಗಳು ದಿವ್ಯಾಂಶು ಅವರ ದೇಹವನ್ನು ಸುಮಾರು 30 ಅಡಿ ಆಳದ ನೀರಿನಿಂದ ಹೊರತೆಗೆದರು. ಈ ಘಟನೆಯು ಫ್ಯಾಷನ್ ಉದ್ಯಮವನ್ನು ಬೆಚ್ಚಿಬೀಳಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports