ತಾವು ಮಾಂತ್ರಿಕ ಮಂತ್ರಗಳನ್ನೇ ಬಿತ್ತುತ್ತಿದ್ದೇವೆಂದು ತಿಳಿಯದ ಕರುಣೆ ಇರುವಂತಹವರಿಂದಲೇ ಮಾಡಲ್ಪಟ್ಟ ಜಗತ್ತಿನಲ್ಲಿ ಒಂದು ಸುಂದರವಾದ ಮ್ಯಾಜಿಕ್ ಇದೆ. ನೀನು ಒಂಟಿಯಲ್ಲ, ನಾನಿದ್ದೇನೆ ಎನ್ನುತ್ತಾ ಅವರು ಬೆಳಕನ್ನು ಹರಡುತ್ತಾರೆ. ಆ ಬೆಳಕಿನಲ್ಲಿ, ನಾವು ಮತ್ತೆ ಉಸಿರಾಡುವುದು ಹೇಗೆ ಎಂದು ನೆನಪಿಸಿಕೊಳ್ಳುತ್ತೇವೆ ಎಂದು ಕೃಷಿ ತಾಪಂಡ ಬರೆದಿದ್ದಾರೆ. ಈ ಮೂಲಕ ಅವರು ಸೋಷಿಯಲ್ ಮೀಡಿಯಾ ಕಮ್ಯುನಿಟಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಎಲ್ಲವೂ ಭಾರವಾದಾಗ, ಅವರ ದಯೆ ಸೂರ್ಯನ ಬೆಳಗಿನ ಕಿರಣದಂತೆ ಮೃದುವಾಗಿ ಅರಳುತ್ತದೆ. ಅತಿದೊಡ್ಡ ರಾತ್ರಿಯ ನಂತರವೂ ಇನ್ನೂ ಬೆಳಗು ಬರುತ್ತದೆ ಎಂದು ತೋರಿಸುತ್ತದೆ.
ಭರವಸೆ ನಮ್ಮನ್ನು ಕಂಡುಕೊಳ್ಳುತ್ತದೆ ಎಂದಾಗ ನೀವು ನಮ್ಮನ್ನು ಕಾಯುತ್ತೀರಿ. ಇದನ್ನು ನೋಡಿಯೂ ದ್ವೇಷಿಸುವರರಿಗೆ ನಾನು ಹೇಳೋದೇನೆಂದರೆ ನೀವು ಮ್ಯಾಜಿಕ್ನ ಸಣ್ಣ ಕಿಡಿಯನ್ನು ನೋಡಿ. ಅದು ನಿಮ್ಮ ಹೃದಯದ ಸುತ್ತಲಿನ ಕಠೋರತೆಯನ್ನು ಕರಗಿಸಲಿ. ಖುಷಿಯಾಗಿ, ಪ್ರೀತಿಯಿಂದ ಇರುವುದು ಹೇಗೆ ಎಂಬುದನ್ನು ನೀವು ನೆನಪಿಸಿಕೊಳ್ಳಿ ಎಂದಿದ್ದಾರೆ.
ಜಗತ್ತಿಗೆ ನಿಮ್ಮ ಬೆಳಕು ಕೂಡ ಬೇಕು. ನೀವು ಅದರೊಳಗೆ ಹೆಜ್ಜೆ ಹಾಕಲು ನಾವು ಕಾಯುತ್ತಿದ್ದೇವೆ. ನಿಮ್ಮ ದಯೆ, ಪ್ರೀತಿಯಿಂದಲೇ ನಾನು ಇನ್ನೊಂದು ದಿನ ಹೆಚ್ಚು ಬದುಕುತ್ತಿದ್ದೇನೆ. ನಿಮ್ಮ ಸಹಾನುಭೂತಿ ನನ್ನ ಆಕ್ಸಿಜನ್ ಆಗಿದೆ ಎಂದು ಬರೆದಿದ್ದಾರೆ.
ಬೇರೊಬ್ಬರ ಕಣ್ಣೀರು, ನಿದ್ದೆಯಿಲ್ಲದ ರಾತ್ರಿಗಳು ಅಥವಾ ನೋವಿಗೆ ನಾವು ಕಾರಣಗಳಾಗಬಾರದು. ಬದಲಾಗಿ ನಾವು ಬೇರೆಯವರಿಗೆ ಸಮಾಧಾನವಾಗಬೇಕು. ತಿಳುವಳಿಕೆ, ನಗು ಮತ್ತು ಭರವಸೆಗೆ ಕಾರಣಗಳಾಗಬೇಕು. ನಾವು ಸಣ್ಣ ಸೂರ್ಯನ ಬೆಳಕುಗಳಾಗಿರೋಣ ಎಂದಿದ್ದಾರೆ.
ದಯೆ ಎನ್ನುವುದನ್ನು ನಾನು ನಂಬುವುದಕ್ಕೆ ಕಾರಣವೇ ನೀವು. ನನ್ನ ಬೆಳಕಾಗಿದ್ದಕ್ಕೆ ಧನ್ಯವಾದಗಳು. ನೀವೇ ತಿಳಿಯದೆ ನನ್ನನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಇರುವುದರಿಂದ ಜಗತ್ತು ಸುಂದರವಾಗಿದೆ ಎಂದು ಬರೆದಿದ್ದಾರೆ.
ನಾನು ಇಲ್ಲಿ 1000ಕ್ಕೂ ಹೆಚ್ಚು ಮೆಸೇಜ್ಗಳ ಜೊತೆ ಕುಳಿತಿದ್ದೇನೆ. Instagram ನಿಂದ, YouTube ನಿಂದ, ಎಲ್ಲೆಡೆಯಿಂದ. ಮತ್ತು ನನ್ನ ಕೈಗಳು ನಡುಗುತ್ತಿವೆ. ಏಕೆಂದರೆ ನಾನು ಈ ರೀತಿಯ ಪ್ರೀತಿಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಜಗತ್ತು ಇಷ್ಟು ಸುರಕ್ಷಿತವಾಗಿರಬಹುದೆಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದಿದ್ದಾರೆ.
ನಾನು ಮಾತನಾಡುವಾಗ, ನಾನು ಒಬ್ಬಂಟಿ ಎಂದು ಭಾವಿಸಿದೆ. ನಾನು ಸುಮ್ಮನೆ ಕಿರುಚುತ್ತಿದ್ದೇನೆ ಎಂದು ಅಂದುಕೊಂಡಿದ್ದೆ. ಆದರೆ ನಾನಂದುಕೊಂಡಿದ್ದು ತಪ್ಪು ಎಂದು ಸಾಬೀತಾಯಿತು. ನಾನು ಪ್ರತಿ ಮೆಸೇಜ್ ಓದುತ್ತಿದ್ದೇನೆ. ನಿಧಾನವಾಗಿ. ಒಂದೊಂದಾಗಿ. ನಾನು ಅದರಲ್ಲೇ ಮುಳುಗಿದ್ದೇನೆ ಎಂದಿದ್ದಾರೆ.
ಮೌನವಾಗಿ ಹೋರಾಡುತ್ತಿರುವ, ತಮ್ಮದೇ ಆದ ನೋವಿನ ನಂತರ ಹೊಸ ಜೀವನವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಮಹಿಳೆಯರನ್ನು ನಾನು ನೋಡಿದೆ. “ನಾವು ನಿಮ್ಮೊಂದಿಗಿದ್ದೇವೆ” ಎಂದು ಹೇಳಿದ ಸೂಕ್ಷ್ಮ ಮನಸ್ಥಿತಿಯ ಪುರುಷರನ್ನು ನಾನು ನೋಡಿದೆ ಎಂದಿದ್ದಾರೆ.
ನಾನು ಸ್ಫೂರ್ತಿಯಲ್ಲ. ನಾನು ಕೇವಲ ಸಾಮಾನ್ಯ ಹುಡುಗಿ ಎಂದು ಕೃಷಿ ತಾಪಂಡ ಹೇಳಿದ್ದಾರೆ. ನಿಮ್ಮಂತೆಯೇ. ಚಂಡಮಾರುತದ ನಂತರ ಉಸಿರಾಡಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯಂತೆ ನಾನು ಕೂಡಾ. ನನ್ನ ಯುದ್ಧ ಯಾವಾಗ ಮುಗಿಯುತ್ತದೆ ಎಂದು ನನಗೆ ತಿಳಿದಿಲ್ಲ. ಅಥವಾ ಅದು ಮುಗಿಲಿದೆಯಾ ಎಂದು ಕೂಡಾ ನನಗೆ ತಿಳಿದಿಲ್ಲ ಎಂದಿದ್ದಾರೆ.
ಆದರೆ ನಿಮ್ಮ ಪ್ರೀತಿ ನನಗೆ ಹೊಸ ಜೀವನವನ್ನು ನೀಡಿತು. ಹೊಸ ಭರವಸೆ. ಹೊಸ ನಂಬಿಕೆ ನೀಡಿದೆ. ಮಾನವೀಯತೆಯ ಮೇಲಿನ ನನ್ನ ನಂಬಿಕೆಯನ್ನು ನೀವು ಮತ್ತೆ ತಂದಿದ್ದೀರಿ. ನನಗೆ ಪ್ರೀತಿಯನ್ನು ಕಳುಹಿಸಿದ ಎಲ್ಲರೂ ನೀವು ನನ್ನನ್ನು ಉಳಿಸಿದ್ದೀರಿ ಎಂದಿದ್ದಾರೆ.












