Last Updated:
ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ತಮ್ಮ ವೈಯಕ್ತಿಕ ಮನೋಭಾವದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾರಾದರೂ ನಿಧನರಾದ ಬಳಿಕ ಅವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ ತಮ್ಮ ಜೀವನ ಮತ್ತು ಕೆಲಸದ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟಿಯರಲ್ಲಿ ಒಬ್ಬರಾದ ಶ್ರೀದೇವಿ (Sridevi) ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಅಭಿನಯ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದರು. ಇದೀಗ ಶ್ರೀದೇವಿ ಜೀವನಚರಿತ್ರೆ ದಿ ಎಂಪ್ರೆಸ್ ಪುಸ್ತಕಕ್ಕೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದು ಅಧ್ಯಾಯ ಬರೆದಿರುವುದು ಗಮನ ಸೆಳೆದಿದೆ.














