School Holiday: ನಾಳೆ ಇಲ್ಲಿನ 4 ಜಿಲ್ಲೆಗಳ ಶಾಲೆಗಳಿಗೆ ರಜೆ! ಕೆಲವು ಕಾಲೇಜ್‌ಗಳಲ್ಲಿ ಪರೀಕ್ಷೆ ಮುಂದೂಡಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶಾಲೆಗೆ ರಜೆ


Last Updated:

School Holiday: ಮಳೆ ಅಬ್ಬರ ಮುಂದುವರೆದಿದೆ. ನೀರು ನಿಲ್ಲುವಿಕೆ, ನೀರಿನ ಮಟ್ಟ ಏರಿಕೆ ಮತ್ತು ಅಪಾಯದ ಪರಿಸ್ಥಿತಿ ಜಾಸ್ತಿಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ರಾಜ್ಯದ 4 ಜಿಲ್ಲೆಗಳ ಶಾಲೆ, ಕಾಲೇಜ್‌ಗಳಿಗೆ ನಾಳೆ ಅಂದರೆ ಆಗಸ್ಟ್ 4, ಮಂಗಳವಾರದಂದು ರಜೆ ಘೋಷಣೆ ಮಾಡಲಾಗಿದೆ.

ಶಾಲೆಗೆ ರಜೆ
ಶಾಲೆಗೆ ರಜೆ

ಕೇರಳಂ: ದೇವರ ಸ್ವಂತ ನಾಡಲ್ಲಿ (God’s Own Country) ಮಳೆ ಅಬ್ಬರ (Heavy rain) ಮುಂದುವರೆದಿದೆ. ಹಲವೆಡೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ನೀರು ನಿಲ್ಲುವಿಕೆ, ನೀರಿನ ಮಟ್ಟ ಏರಿಕೆ ಮತ್ತು ಅಪಾಯದ ಪರಿಸ್ಥಿತಿ ಜಾಸ್ತಿಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳಂ ರಾಜ್ಯದ 4 ಜಿಲ್ಲೆಗಳ ಶಾಲೆ, ಕಾಲೇಜ್‌ಗಳಿಗೆ ನಾಳೆ ಅಂದರೆ ಆಗಸ್ಟ್ 4, ಮಂಗಳವಾರದಂದು ರಜೆ (schools and colleges holiday) ಘೋಷಣೆ ಮಾಡಲಾಗಿದೆ.

ನಾಳೆ ಮಂಗಳವಾರ ಶಾಲೆ, ಕಾಲೇಜ್‌ಗಳಿಗೆ ರಜೆ

ಆಗಸ್ಟ್ 4 ರ ಮಂಗಳವಾರದಂದು ಕೇರಳಂ ರಾಜ್ಯದ 4 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ನಿರಂತರ ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ನೀರು ನಿಲ್ಲುವಿಕೆ, ನೀರಿನ ಮಟ್ಟ ಏರಿಕೆ ಮತ್ತು ಅಪಾಯದ ಸ್ಥಿತಿ ಇರುವ ಕಾರಣ ಕಾರಣ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ.

ಯಾವೆಲ್ಲ ಜಿಲ್ಲೆಗಳಲ್ಲಿ ರಜೆ ಇರುತ್ತದೆ?

ಕೇರಳಂ ರಾಜ್ಯದ ಕೋಝಿಕ್ಕೋಡ್, ಮಲಪ್ಪುರಂ, ಆಲಪ್ಪುಳ ಮತ್ತು ಪಟ್ಟಣಂತಿಟ್ಟಗಳಲ್ಲಿ ಸಂಪೂರ್ಣ ರಜೆ ಘೋಷಿಸಲಾಗಿದ್ದು, ಕಣ್ಣೂರು, ವಯನಾಡ್ ಮತ್ತು ಇಡುಕ್ಕಿಯ ಆಯ್ದ ಪ್ರದೇಶಗಳಲ್ಲಿ ನಿರ್ಬಂಧಿತ ರಜೆ ಘೋಷಿಸಲಾಗಿದೆ. ಈ ಹಿಂದೆ ನಿಗದಿಪಡಿಸಲಾದ ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ವೇಳಾಪಟ್ಟಿ ಪ್ರಕಾರ ನಡೆಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣ ರಜೆ ಘೋಷಣೆ

ನಿರಂತರ ಭಾರೀ ಮಳೆ ಮತ್ತು ಪ್ರವಾಹದ ಸಮಸ್ಯೆಯಿಂದಾಗಿ ಕೋಝಿಕ್ಕೋಡ್, ಮಲಪ್ಪುರಂ, ಆಲಪ್ಪುಳ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಆಗಸ್ಟ್ 4 ರ ಮಂಗಳವಾರ ಜಿಲ್ಲಾಧಿಕಾರಿಗಳು ಸಂಪೂರ್ಣ ರಜೆ ಘೋಷಿಸಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಿಗದಿತ ಪರೀಕ್ಷೆಗಳಿಗಿಲ್ಲ ಯಾವುದೇ ತೊಂದರೆ

ಶಾಲೆಗಳು, ಕಾಲೇಜುಗಳು, ವೃತ್ತಿಪರ ಕಾಲೇಜುಗಳು (ಅನ್ವಯವಾಗುವಲ್ಲಿ), ಅಂಗನವಾಡಿ ಕೇಂದ್ರಗಳು, ಮದರಸಾಗಳು ಮತ್ತು ಬೋಧನಾ ಕೇಂದ್ರಗಳಿಗೆ ರಜೆ ಅನ್ವಯಿಸುತ್ತದೆ. ಆದಾಗ್ಯೂ, ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಗದಿತ ಪರೀಕ್ಷೆಗಳನ್ನು ಅಸ್ತಿತ್ವದಲ್ಲಿರುವ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು ಮತ್ತು ಈ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಧಿಕೃತ ವೇಳಾಪಟ್ಟಿಯನ್ನು ಅನುಸರಿಸಿ ಮತ್ತು ತಮ್ಮ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತವಾಗಿ ತಲುಪಲು ಸೂಚಿಸಲಾಗಿದೆ.

ಈ ತಾಲೂಕುಗಳಲ್ಲಿ ರಜೆ ಘೋಷಣೆ

ಕಣ್ಣೂರು, ವಯನಾಡು ಮತ್ತು ಇಡುಕ್ಕಿಯಲ್ಲಿ ನಿರ್ಬಂಧಿತ ರಜೆ ಘೋಷಿಸಲಾಗಿದೆ. ಇನ್ನು ಆಯ್ದ ಪ್ರದೇಶಗಳಲ್ಲಿ ಭಾಗಶಃ ರಜೆಯನ್ನು ಸಹ ಘೋಷಿಸಲಾಗಿದೆ. ಕಣ್ಣೂರು ಜಿಲ್ಲೆಯ ಪಯ್ಯನ್ನೂರು, ತಲಿಪರಂ, ಇರಿಟ್ಟಿ ತಾಲ್ಲೂಕುಗಳಲ್ಲಿನ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯಿಸುತ್ತದೆ. ಆದಾಗ್ಯೂ, ವೃತ್ತಿಪರ ಕಾಲೇಜುಗಳು ತೆರೆದಿರುತ್ತವೆ ಮತ್ತು ಎಲ್ಲಾ ವಿಶ್ವವಿದ್ಯಾಲಯ/ಸಾರ್ವಜನಿಕ ಪರೀಕ್ಷೆಗಳು ಮತ್ತು ಸಂದರ್ಶನಗಳು ನಿಗದಿಯಂತೆ ನಡೆಯಲಿವೆ.

ಇಡುಕ್ಕಿ ಜಿಲ್ಲೆಯಲ್ಲಿ ಹಲವೆಡೆ ರಜೆ

ವಯನಾಡ್ ಮತ್ತು ಇಡುಕ್ಕಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ತುರ್ತು ವ್ಯವಸ್ಥೆಗಳಿಂದಾಗಿ ವಯನಾಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೂ ರಜೆ ನೀಡಲಾಗಿದೆ.

ಈ ವಿವಿಯಲ್ಲಿ ಪರೀಕ್ಷೆ ಮುಂಡೂಡಿಕೆ

ಎಂಜಿ ವಿಶ್ವವಿದ್ಯಾಲಯವು ಆಗಸ್ಟ್ 4, 5, 6 ಮತ್ತು 7 ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ತಿರುವನಂತಪುರದ ಮ್ಯಾಸ್ಕಾಟ್ ಹೋಟೆಲ್‌ನಲ್ಲಿ ನಡೆಯಬೇಕಿದ್ದ ‘ಉಪಕುಲಪತಿಗಳ ಸಮಾವೇಶ 2026’ ಅನ್ನು ಮುಂದೂಡಲಾಗಿದೆ ಎಂದು ನ್ಯೂಸ್ 18 ಮಲಯಾಳಂ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed