Karnataka rains: ಕರಾವಳಿ ಜಿಲ್ಲೆಗಳಿಗೆ ‘ಆರೇಂಜ್-ಯೆಲ್ಲೋ’ ಅಲರ್ಟ್, ಒಳನಾಡಿಗೆ ಮುಂಗಾರು ದುರ್ಬಲ | Monsoon No Active In Interior Districts Of Karnataka, Coastal Area Got Yellow And Orange Alert

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 23: ಕರ್ನಾಟಕ ರಾಜ್ಯದ ಒಂದು ಭಾಗದಲ್ಲಿ ಮಾತ್ರವೇ ಮುಂಗಾರು ಮಳೆ ಚುರುಕಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಎಂದಿಗಿಂತಲೂ ಅತ್ಯಧಿಕ ಮಳೆ ಬೀಳಲಿದ್ದು, ‘ಆರೇಂಜ್’ ಮತ್ತು ‘ಯೆಲ್ಲೋ ಅಲರ್ಟ್” ಎಚ್ಚರಿಕೆ ನೀಡಲಾಗಿದೆ. ಒಳನಾಡಿನ ಕೆಲವು ಜಿಲ್ಲೆಗಳಿಗೆ ಸಾಧಾರಣ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕಕ್ಕೆ ತಡವಾಗಿ ಆರಂಭವಾಗಿರುವ ಮುಂಗಾರು ಮಳೆ ರಾಜ್ಯಾದ್ಯಂತ ಚುರುಕುಗೊಳ್ಳಲು ಇನ್ನು ಸಮಯ ಹಿಡಿಯಬಹುದು ಎನ್ನಲಾಗಿದೆ. ಮಳೆ ವಿಳಂಬದಿಂದಾಗಿ ಪರಿಪೂರ್ಣವಾಗಿ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನ ಜಿಲ್ಲೆಗಳಿಗೆ ಮಳೆಯ ತುರ್ತು ಅಗತ್ಯತೆ ಇದೆ.

Monsoon No Active In Interior Districts Of Karnataka, Coastal Area Got Yellow And Orange Alert

ಆದರೆ ಒಳನಾಡಿಗೆ ಕೃಪೆ ತೋರದ ವರುಣ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರ ಶುರುವಿಟ್ಟುಕೊಂಡಿದ್ದಾನೆ. ಮುಂದಿನ ಐದು ದಿನವೂ ಕರಾವಳಿಯಲ್ಲಿ ವರುಣಾರ್ಭಟ ಹೆಚ್ಚಿರಲಿದೆ.

 Monsoon Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಮುಂದಿನ 5 ದಿನಗಳ ಕಾಲ ವರುಣಾರ್ಭಟ, ಇಲ್ಲಿದೆ ವಿವರ Monsoon Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಮುಂದಿನ 5 ದಿನಗಳ ಕಾಲ ವರುಣಾರ್ಭಟ, ಇಲ್ಲಿದೆ ವಿವರ

ನಾಳೆ ಶನಿವಾರದಿಂದ ಜೂನ್ 28ರವರೆಗೆ ಐದು ದಿನ ಕರಾವಳಿಯ ಉತ್ತರ ಕನ್ನಡ ಜಿಲ್ಲೆಗೆ ಎರಡು ದಿನ, ಉಡುಪಿ ಮತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ದಿನ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ದಿನಗಳು ಈ ಮೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಚಂಡಮಾರುತದ ನಂತರ ಕರಾವಳಿಗೆ ಮಳೆ ಅಬ್ಬರ

ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತ ಅಬ್ಬರವಿದ್ದಾಗಲೂ ಸಹ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಇಷ್ಟೊಂದು ಮಳೆ ಆಗಲಿರಲಿಲ್ಲ. ಮುಂಗಾರು ಚುರುಕು ಹಿನ್ನೆಲೆಯಲ್ಲಿ ವ್ಯಾಪಕವಾಗಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

Monsoon No Active In Interior Districts Of Karnataka, Coastal Area Got Yellow And Orange Alert

ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಬೀಳುವ ಸಂಭವವಿದೆ.

ಒಳನಾಡಿನ ಕೆಲವೆಡೆ ಅಲ್ಲಲ್ಲಿ ಮಳೆ ಸಾಧ್ಯತೆ

ಇದಾದ ನಂತರದ ಮೂರು ದಿನಗಳು ಹಲವು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಜೂನ್ 27 ಮತ್ತು ಜೂನ್ 28ರಂದು ಮಾತ್ರ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಭಾರೀ ಮಳೆ ಸುರಿಯುವುದರಿಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ಉತ್ತರ ಒಳನಾಡಿನ ಬಹುತೇಕ ಎಲ್ಲ ಕಡೆ ತುಂತುರು ಮಳೆ, ಕೆಲವೆಡೆ ಜೋರು ಮಳೆ ಆಗಮನ ನಿರೀಕ್ಷೆ ಇದೆ. ಕೊನೆಯ ಎರಡು ದಿನ ಅಂದರೆ ಜೂನ್ 27 ಮತ್ತು ಜೂನ್ 28ರಂದು ಬೀದರ್ ಮತ್ತು ಕಲಬುರಗಿಗೆ ಅಧಿಕ ಮಳೆ ಬರುವ ಸಂಬಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಐಎಂಡಿ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.

  • Heavy rain: ಅಸ್ಸಾಂ ಪ್ರವಾಹಕ್ಕೆ 34,000 ಕ್ಕೂ ಹೆಚ್ಚು ಜನರು ತತ್ತರ: ಭಾರೀ ಮಳೆಯ ಮುನ್ಸೂಚನೆ
  • Karnataka Monsoon: ಅಂತೂ ಇಂತು ಉತ್ತರ ಒಳನಾಡಿಗೆ ಸಿಹಿ ಸುದ್ದಿ, ರೈತರಲ್ಲಿ ಮಂದಹಾಸ, 10 ಜಿಲ್ಲೆಗೆ ‘ಹಳದಿ ಎಚ್ಚರಿಕೆ’
  • Karnataka Rain: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಉಳಿದ ಜಿಲ್ಲೆಗಳ ಮಳೆ ವರದಿ
  • ಬಿಪರ್‌ಜೋಯ್ ಚಂಡಮಾರುತ: ರಾಜಸ್ಥಾನದಲ್ಲಿ ಭಾರೀ ಮಳೆಗೆ 8 ಸಾವು, 17,000 ಮಂದಿ ಸ್ಥಳಾಂತರ
  • Bengaluru Rain: ಸಿಲಿಕಾನ್ ಸಿಟಿಯಲ್ಲಿ ಈಗ ‘ಮಳೆಗಾಲ’ದ ವಾತಾವರಣ, ಮಂಗಳವಾರ ಇಡೀ ದಿನ ಬಿದ್ದ ಮಳೆ ಎಷ್ಟು?
  • Heatwave Alert: ಭಾರತದ 9 ರಾಜ್ಯಗಳಿಗೆ ಶಾಖದ ಅಲೆ ಮುನ್ಸೂಚನೆ
  • ತೀವ್ರ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವ ರಾಜ್ಯಗಳಿಗೆ ಕೇಂದ್ರ ತಂಡದ ಭೇಟಿ: ಮನ್ಸುಖ್ ಮಾಂಡವಿಯಾ
  • ಭಾರತದಲ್ಲಿ ಮುಂದಿನ 3-4 ದಿನಗಳಲ್ಲಿ ಮಾನ್ಸೂನ್‌ ತೀವ್ರಗೊಳ್ಳುವ ಸಾಧ್ಯತೆ: ಐಎಂಡಿ
  • Coastal Karnataka: ತಮಿಳುನಾಡು ಬಳಿಕ ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದೆ ಕುಂಭ ದ್ರೋಣ ಮಳೆ- ಏನಿದು ಎಚ್ಚರಿಕೆ
  • Bengaluru: ಮಳೆಯಿಂದಾಗಿ ರಸ್ತೆಗಳು ಜಲಾವೃತ, ಮುಚ್ಚಿದ ಅಂಡರ್‌ಪಾಸ್‌- ಸಂಕಷ್ಟ ತಪ್ಪಿಸಲು ಈ ಮಾರ್ಗಗಳಿಂದ ದೂರವಿರಿ
  • Bengaluru: ಮುಂದಿನ ಕೆಲ ಗಂಟೆಗಳಲ್ಲಿ ಬೆಂಗಳೂರಿನಾದ್ಯಂತ ಮಹಾಮಳೆ- ಬಿರುಗಾಳಿ, ಗುಡುಗು, ಸಿಡಿಲಿನ ಮುನ್ಸೂಚನೆ
  • Bengaluru Rain: ಬೆಳಗ್ಗೆಯೇ ಬೆಂಗಳೂರು, ಕೋಲಾರದಲ್ಲಿ ಮಳೆ ಅಬ್ಬರ : ಭಾರಿ ಮಳೆ ಮುನ್ಸೂಚನೆ

English summary

karnataka rains: Monsoon no active in interior districts of Karnataka, Coastal area got yellow and orange alert, IMD forecast report said.

Story first published: Friday, June 23, 2023, 22:10 [IST]

Source link