Tamil
oi-Narayana M
ಚೆನ್ನೈನಲ್ಲಿ
ಸೂಪರ್
ಸ್ಟಾರ್
ರಜನಿಕಾಂತ್
ನಟನೆಯ
‘ಜೈಲರ್’
ಸಿನಿಮಾ
ಆಡಿಯೋ
ಲಾಂಚ್
ಕಾರ್ಯಕ್ರಮ
ಅದ್ಧೂರಿಯಾಗಿ
ನೆರವೇರಿದೆ.
ನೆಲ್ಸನ್
ದಿಲೀಪ್
ಕುಮಾರ್
ನಿರ್ದೇಶನದ
ಈ
ಆಕ್ಷನ್
ಎಂಟರ್ಟೈನರ್ನಲ್ಲಿ
ಸ್ಟಾರ್
ಕಲಾವಿದರು
ನಟಿಸಿದ್ದಾರೆ.
ಕನ್ನಡ
ನಟ
ಸೆಂಚುರಿ
ಸ್ಟಾರ್
ಶಿವರಾಜ್ಕುಮಾರ್
ಕೂಡ
ಚಿತ್ರದ
ಮುಖ್ಯ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ಅದ್ಧೂರಿ
ಕಾರ್ಯಕ್ರಮದಲ್ಲಿ
ಶಿವಣ್ಣ
ಫ್ಯಾಮಿಲಿ
ಸಮೇತ
ಹಾಜರಾಗಿದ್ದರು.
ಸಾವಿರಾರು
ಅಭಿಮಾನಿಗಳ
ಸಮ್ಮುಖದಲ್ಲಿ
‘ಜೈಲರ್’
ಆಡಿಯೋ
ಲೋಕಾರ್ಪಣೆ
ಕಾರ್ಯಕ್ರಮ
ರಂಗೇರಿತ್ತು.
ಇದೇ
ಮೊದಲ
ಬಾರಿಗೆ
ಶಿವಣ್ಣ
ತಮಿಳು
ಸಿನಿಮಾವೊಂದರಲ್ಲಿ
ನಟಿಸಿದ್ದಾರೆ.
ಶಿವರಾಜ್
ಕುಮಾರ್
ಮಾತನಾಡಿ,
“ನಾನು
ಹುಟ್ಟಿದ್ದು,
ಬೆಳೆದಿದ್ದು,
ಓದಿದ್ದು
ಚೆನ್ನೈನಲ್ಲಿ.ಅದಕ್ಕಾಗಿಯೇ
ನನಗೆ
ಚೆನ್ನೈ
ಎಂದರೆ
ತುಂಬಾ
ಇಷ್ಟ.
ಒಂದು
ದಿನ
ನನ್ನ
ತಂದೆ
ಶಬರಿಮಲೆಗೆ
ಹೋದಾಗ
ರಜನಿ
ನಾನು
ಸರ್
ಅವರ
ಹಿಡಿದುಕೊಂಡು
ಹೋಗಿದ್ದೆ.
ಬಾಲ್ಯದಲ್ಲಿ
ಕೈ
ಹಿಡಿದು
ಅಂದು
ತೋರಿದ
ಪ್ರೀತಿಯನ್ನು
ಈಗಲೂ
ತೋರಿಸುತ್ತಾರೆ.
ಅವರು
ನನ್ನ
ಚಿಕ್ಕಪ್ಪನ
ಹಾಗೆ
ಎಂದು
ಹೇಳಿದರೆ
ತಪ್ಪಾಗದು”

“ನನಗೆ
ತಮಿಳು
ಚಿತ್ರರಂಗದಲ್ಲಿ
ಬಹಳಷ್ಟು
ಮಂದಿ
ಇಷ್ಟವಾಗುತ್ತಾರೆ.
ಬೀಸ್ಟ್
ಚಿತ್ರೀಕರಣದ
ನಂತರ
ನೆಲ್ಸನ್
ನನಗೆ
ಕರೆ
ಮಾಡಿದರು.
ನಂತರ
ನಾನು
ವಿಜಯ್
ಸರ್
ಅವರನ್ನು
ಭೇಟಿಯಾದೆ.
ಅದೇ
ರೀತಿ
ನಾನು
ಧನುಷ್
ಅವರ
ದೊಡ್ಡ
ಅಭಿಮಾನಿ.”
ಎಂದು
ಶಿವಣ್ಣ
ಹೇಳಿದ್ದಾರೆ.
ಬಳಿಕ
ರಜನಿಕಾಂತ್
ಮಾತನಾಡಿ,
‘ಬೀಸ್ಟ್’
ಸಿನಿಮಾ
ರಿಲೀಸ್ಗೂ
ಮುನ್ನ
ನೆಲ್ಸನ್
ಬಂದು
‘ಜೈಲರ್’
ಒನ್ಲೈನ್
ಸ್ಟೋರಿ
ಹೇಳಿದ್ದರು.
ನನಗೂ
ಇಷ್ಟವಾಗಿತ್ತು.
ನಂತರ
ಅವರು
‘ಬೀಸ್ಟ್’
ಸಿನಿಮಾ
ಮುಗಿಸಿ
ಬಂದು
ಸಂಪೂರ್ಣ
ಕಥೆ
ಹೇಳಿದರು.
ಮೊದಲು
ಹೇಳಿದ್ದಕ್ಕಿಂತ
ಬಹಳ
ಚೆನ್ನಾಗಿ
ಎನಿಸಿತು.
ಬೀಸ್ಟ್
ಸಿನಿಮಾ
ರಿಲೀಸ್ಗೂ
ಮುನ್ನ
‘ಜೈಲರ್’
ಸಿನಿಮಾ
ಓಕೆ
ಆಗಿತ್ತು.
ನಿರ್ದೇಶಕರನ್ನು
ಬದಲಾಯಿಸುವಂತೆ
ನನಗೆ
ವಿತರಕರಿಂದ
ಸಾಕಷ್ಟು
ಕರೆಗಳು
ಬಂದವು.
ಯಾವತ್ತು
ಕೂಡ
ನಿರ್ದೇಶರು
ಸೋಲಲ್ಲ.
ಅವರು
ಮಾಡುವ
ಸಬ್ಜೆಕ್ಟ್
ಸೋಲುತ್ತವೆ
ಅಷ್ಟೆ”
ಎಂದಿದ್ದಾರೆ.
ನೆಲ್ಸನ್
ತಮಾಷೆಯಾಗಿ
ಮಾತನಾಡುತ್ತಾರೆ.
ಆದರೆ
ನಿರ್ದೇಶನ
ಅಂತ
ಬಂದರೆ
ಹಿಟ್ಲರ್
ರೀತಿ
ಆಗಿಬಿಡುತ್ತಾರೆ.
ತಮಗೆ
ಬೇಕಾಗಿದ್ದನ್ನು
ಪಡೆಯದೇ
ಬಿಡಲ್ಲ.
ಚಿತ್ರದಲ್ಲಿ
ಕಾಮಿಡಿ,
ಆಕ್ಷನ್
ಎಲ್ಲವೂ
ಇದೆ.
ಕಾವಾಲಾ
ಸಾಂಗ್ನಲ್ಲಿ
ನನಗೆ
ಜಾಸ್ತಿ
ಸ್ಟೆಪ್ಸ್
ಇರುತ್ತೆ
ಅಂತ
ಕರೆದುಕೊಂಡು
ಹೋದರು.
ಆದರೆ
ಎರಡೇ
ಸ್ಟೆಪ್ಸ್
ಇತ್ತು.
ಅವತ್ತು
ಇಡೀ
ದಿನ
ನಾನು
ತಮನ್ನಾ
ಜೊತೆ
ಮಾತನಾಡಲಿಲ್ಲ.”
“ಮೊದಲ
ಬಾರಿಗೆ
‘ಹುಕುಂ’
ಹಾಡಿನ
ಸಾಹಿತ್ಯವನ್ನು
ಕೇಳಿದಾಗ
ನಾನು
ಶಾಕ್
ಆಗಿದ್ದೆ.
ಹಾಡಿನಲ್ಲಿ
ಸೂಪರ್
ಸ್ಟಾರ್
ಪದವನ್ನು
ತೆಗೆದುಹಾಕಲು
ನಾನು
ಕೇಳಿದೆ.
ಸೂಪರ್
ಸ್ಟಾರ್
ಟೈಟಲ್
ನನಗೆ
ಸದಾ
ಕಷ್ಟ
ಎನಿಸುತ್ತದೆ.
ನಾನು
ಸೂಪರ್
ಸ್ಟಾರ್
ಟೈಟಲ್
ಬೇಡ
ಎಂದು
ಬಹಳ
ಹಿಂದೆಯೇ
ಕೇಳಿದೆ.
ನಂತರ
ಕೆಲವರು
ರಜನಿ
ಹೆದರಿದ್ದಾರೆ,
ಅಂದರು.
ಇಬ್ಬರ
ಬಗ್ಗೆ
ಮಾತ್
ನನಗೆ
ಭಯ.
ಒಬ್ಬರು
ದೇವರು
ಮತ್ತು
ಮತ್ತೊಬ್ಬರು
ಒಳ್ಳೆಯವರು.
ಒಳ್ಳೆಯ
ಜನರೊಂದಿಗಿನ
ಶಾಪವು
ಯಾವಾಗಲೂ
ನಮ್ಮನ್ನು
ನೋಯಿಸುತ್ತದೆ.
ನಾವು
ಒಳ್ಳೆಯವರನ್ನು
ನೋಯಿಸಬಾರದು.
ಒಳ್ಳೆಯ
ಜನರು
ಭಯಪಡಬೇಕು”

“ಅಣ್ಣಾತ್ತೆ
ಚಿತ್ರದ
ನಂತರ
ದೊಡ್ಡ
ಗ್ಯಾಪ್
ಆಯಿತು.
ಕಾರಣ
ಸರಿಯಾದ
ನಿರ್ದೇಶಕರು,
ಒಳ್ಳೆ
ಕಥೆ
ಸಿಗಲಿಲ್ಲ.
ನನ್ನ
ವೃತ್ತಿಜೀವನವನ್ನು
ನನ್ನ
ನಿರ್ದೇಶಕರು
ತಿದ್ದಿ
ತೀಡಿದ್ದಾರೆರೆ.
ಮುತ್ತುರಾಮನ್,
ಮಹೇಂದ್ರನ್,
ಸುರೇಶ್
ಕೃಷ್ಣನ್,
ವಾಸು,
ಕೆ.
ಎಸ್.ರವಿಕುಮಾರ್,
ಶಂಕರ್,
ಪಾ.ರಂಜಿತ್,
ಕಾರ್ತಿಕ್
ಸುಬ್ಬರಾಜ್
ಮತ್ತು
ಈಗ
ನೆಲ್ಸನ್.”
“ಅಣ್ಣಾತ್ತೆ
ಬಳಿಕ
ನಾನು
ಸಾಕಷ್ಟು
ಕಥೆಗಳನ್ನು
ಕೇಳಿದೆ.
ಎಲ್ಲರೂ
ಬಾಷಾ,
ಅಣ್ಣಾಮಲೆ
ಇದ್ದಂತೆ
ಎನ್ನುತ್ತಾರೆ.
ಅಥವಾ
ಸ್ವಲ್ಪ
ದೊಡ್ಡದಾಗಿ
ಹೇಳುತ್ತಾರೆ
ಅಷ್ಟೆ.
ಕೆಲವರು
ಒನ್
ಲೈನ್
ಸ್ಟೋರಿ
ಹೇಳುತ್ತಾರೆ,
ಆದರೆ
ಅದನ್ನು
ಸಂಪೂರ್ಣ
ಕಥೆಯಾಗಿ
ಬದಲಾಯಿಸಿದಾಗ
ಬೇರೆ
ಏನೋ
ಆಗಿರುತ್ತದೆ.
ಹಲವರು
ಬಂದು
ಕಥೆ
ಹೇಳಿದರು.
ನಾನು
ಅನೇಕ
ಜನರನ್ನು
ತಿರಸ್ಕರಿಸಿದೆ.
ನಾನು
ರೀತಿ
ಎಲ್ಲರನ್ನು
ತಿರಸ್ಕರಿಸುವುದು
ನನಗೆ
ಬೇಸರವಾಯಿತು.
ಅದಕ್ಕೆ
ಕಥೆಗಳನ್ನು
ಕೇಳುವುದೇ
ಬಿಟ್ಟೆ”
ಎಂದು
ಜೈಲರ್
ಆಡಿಯೋ
ಲಾಂಚ್
ವೇದಿಕೆಯಲ್ಲಿ
ರಜನಿಕಾಂತ್
ಹೇಳಿದ್ದಾರೆ.
English summary
Jailer Audio launch Event, Shivarajkumar about Rajinikanth. know more.
Saturday, July 29, 2023, 7:59