Heavy rain: ಅಸ್ಸಾಂ ಪ್ರವಾಹಕ್ಕೆ 34,000 ಕ್ಕೂ ಹೆಚ್ಚು ಜನರು ತತ್ತರ: ಭಾರೀ ಮಳೆಯ ಮುನ್ಸೂಚನೆ | Heavy rainfall predicted in Assam, Flood situation remains

India

oi-Mamatha M

|

Google Oneindia Kannada News

ದಿಸ್‌ಪುರ್, ಜೂನ್. 21: ಅಸ್ಸಾಂ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 34,000 ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದು, ಹಲವಾರು ಸ್ಥಳಗಳಲ್ಲಿ ರಾತ್ರಿ ಸುರಿದ ಭಾರೀ ಮಳೆಯ ನಂತರ ಜೂನ್ 21 ರಂದು ಕೂಡ ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂತಾನ್ ಸರ್ಕಾರ ಮತ್ತು ಭಾರತೀಯ ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳಲ್ಲಿ ಮೇಲಿನ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಇದು ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟವು ಹೆಚ್ಚಾಗಬಹುದು ಎಂಬ ಮಾಹಿತಿ ನೀಡಿದೆ.

Heavy rainfall predicted in Assam, Flood situation remains

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಭೂತಾನ್‌ನ ರಾಯಲ್ ಸರ್ಕಾರವು ಹವಾಮಾನ ಸಲಹೆಯನ್ನು ನೀಡಿದೆ ಎಂದು ತಿಳಿಸಿದ್ದು, ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗಬಹುದು. ಇದು ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಗೆ ಕಾರಣವಾಗಬಹುದು ಎಂದು ಹೇಳಿದೆ..

ಭೂತಾನ್ ಮತ್ತು ಅಸ್ಸಾಂನ ಮೇಲ್ಭಾಗದ ಜಲಾನಯನ ಪ್ರದೇಶಗಳೆರಡರಲ್ಲೂ ನಿರಂತರ ಮಳೆಯಿಂದಾಗಿ ನೆರೆಯ ದೇಶದ ಕುರಿಚು ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡುವುದರಿಂದ ರಾಜ್ಯದ ಪಶ್ಚಿಮ ಭಾಗದಲ್ಲಿ ನೀರಿನ ಮಟ್ಟ ಮತ್ತು ಪ್ರವಾಹಗಳು ಹೆಚ್ಚುತ್ತಿವೆ ಎಂದು ಸಂಸ್ಥೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಅನ್ನು ಸಹ ಹೊರಡಿಸಿದೆ.

ಬಿಪರ್‌ಜೋಯ್ ಚಂಡಮಾರುತ: ರಾಜಸ್ಥಾನದಲ್ಲಿ ಭಾರೀ ಮಳೆಗೆ 8 ಸಾವು, 17,000 ಮಂದಿ ಸ್ಥಳಾಂತರಬಿಪರ್‌ಜೋಯ್ ಚಂಡಮಾರುತ: ರಾಜಸ್ಥಾನದಲ್ಲಿ ಭಾರೀ ಮಳೆಗೆ 8 ಸಾವು, 17,000 ಮಂದಿ ಸ್ಥಳಾಂತರ

ಮುಂದಿನ ಕೆಲವು ದಿನಗಳಲ್ಲಿ ಅಸ್ಸಾಂನ ಹಲವಾರು ಜಿಲ್ಲೆಗಳಲ್ಲಿ ‘ಭಾರೀ’ ಮತ್ತು ‘ಅತ್ಯಂತ ಭಾರೀ’ ಮಳೆಯಾಗುವ ಮುನ್ಸೂಚನೆ ನೀಡಿದೆ. ಗುವಾಹಟಿಯಲ್ಲಿರುವ ಐಎಂಡಿಯ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್‌ಎಂಸಿ) ಮಂಗಳವಾರದಿಂದ 24 ಗಂಟೆಗಳ ಕಾಲ ‘ರೆಡ್ ಅಲರ್ಟ್’ ನೀಡಿದೆ. ನಂತರ ಬುಧವಾರ ‘ಆರೆಂಜ್ ಅಲರ್ಟ್’ ಮತ್ತು ಗುರುವಾರ ‘ಯೆಲ್ಲೋ ಅಲರ್ಟ್’ ನೀಡಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದೈನಂದಿನ ಪ್ರವಾಹ ವರದಿಯ ಪ್ರಕಾರ, ಬಕ್ಸಾ, ಬರ್ಪೇಟಾ, ದರ್ರಾಂಗ್, ದಿಬ್ರುಗಢ್, ಕೊಕ್ರಜಾರ್, ಲಖಿಂಪುರ, ನಲ್ಬರಿ, ಸೋನಿತ್‌ಪುರ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ ಸುಮಾರು 34,100 ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಲಖಿಂಪುರದಲ್ಲಿ 22,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ದಿಬ್ರುಗಢದಲ್ಲಿ ಸುಮಾರು 3,900 ಜನರು ಮತ್ತು ಕೊಕ್ರಜಾರ್ 2,700 ಕ್ಕೂ ಹೆಚ್ಚು ಜನರು ಪ್ರವಾಹದಿಂದ ತತ್ತರಿಸಿದ್ದಾರೆ ಎಂದು ಹೇಳಿದೆ.

ಆಡಳಿತವು ಕೊಕ್ರಜಾರ್‌ನಲ್ಲಿ ಒಂದು ಪರಿಹಾರ ಶಿಬಿರವನ್ನು ನಡೆಸುತ್ತಿದೆ. ಅಲ್ಲಿ 56 ಜನರು ಆಶ್ರಯ ಪಡೆದಿದ್ದಾರೆ ಮತ್ತು ನಾಲ್ಕು ಜಿಲ್ಲೆಗಳಲ್ಲಿ 24 ಪರಿಹಾರ ವಿತರಣಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಪ್ರಸ್ತುತ, 523 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 5,842.78 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಬಾರ್ಪೇಟಾ, ಸೋನಿತ್‌ಪುರ್, ಬೊಂಗೈಗಾಂವ್, ಧುಬ್ರಿ, ದಿಬ್ರುಗಢ್, ಗೋಲಾಘಾಟ್, ಕಾಮ್ರೂಪ್, ಮೋರಿಗಾಂವ್, ನಲ್ಬರಿ, ಶಿವಸಾಗರ್ ಮತ್ತು ಉದಲ್‌ಗುರಿಯಲ್ಲಿ ಭಾರಿ ಸವೆತಗಳು ಕಂಡುಬಂದಿವೆ ಎಂದು ಎಎಸ್‌ಡಿಎಂಎ ತಿಳಿಸಿದೆ. ಕಚಾರ್, ದಿಮಾ ಹಸಾವೊ ಮತ್ತು ಕರೀಮ್‌ಗಂಜ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದ ಘಟನೆಗಳು ವರದಿಯಾಗಿವೆ.

ಉದಲ್ಗುರಿ, ಸೋನಿತ್‌ಪುರ್, ದರ್ರಾಂಗ್, ಬೊಂಗೈಗಾಂವ್, ಚಿರಾಂಗ್, ಧುಬ್ರಿ, ಗೋಲ್‌ಪಾರಾ, ಕಾಮ್ರೂಪ್, ಕರೀಮ್‌ಗಂಜ್, ಕೊಕ್ರಜಾರ್, ನಾಗಾವ್, ನಲ್ಬರಿ ಮತ್ತು ಬರ್ಪೇಟಾದಲ್ಲಿ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ನಗರ ಪ್ರದೇಶಗಳಾದ ದರ್ರಾಂಗ್, ಜೋರ್ಹತ್, ಕಾಮ್ರೂಪ್ ಮೆಟ್ರೋಪಾಲಿಟನ್, ಕೊಕ್ರಜಾರ್ ಮತ್ತು ನಲ್ಬರಿ ಜಿಲ್ಲೆಗಳಾದ್ಯಂತ ಅನೇಕ ಸ್ಥಳಗಳಲ್ಲಿ ಮುಳುಗಿವೆ. ಸದ್ಯಕ್ಕೆ ಯಾವುದೇ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿಲ್ಲ.

  • UP rains: ಯುಪಿಯಲ್ಲಿ ಮುಂಗಾರು ಮಳೆಯಿಂದಾಗುವ ಪ್ರವಾಹ ಎದುರಿಸಲು ಯೋಗಿ ಸರ್ಕಾರ ಸಿದ್ಧತೆ
  • Bengaluru rains: ಬೆಂಗಳೂರಿನ ಒಳಚರಂಡಿಯನ್ನು ವ್ಯವಸ್ಥೆ ಸರಿಪಡಿಸಲು ಬೇಕು 2,800 ಕೋಟಿ ರೂ.!
  • Bengaluru rains: ಮಳೆಯ ತುರ್ತು ಸಂದರ್ಭಗಳಲ್ಲಿ ಬಿಬಿಎಂಪಿ ಸಹಾಯಕ್ಕೆ ಬರಲಿದ್ದಾರೆ ಸಂಚಾರಿ ಪೊಲೀಸರು
  • ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಅವಾಂತರ, ಹಾನಿ ವಿವರ ಇಲ್ಲಿದೆ
  • Bengaluru Rains: ಮುಂಗಾರು ಮುನ್ನವೇ ಮಂಗಳವಾರ ಮಳೆಗೆ ನಲುಗಿದ ರಾಜಧಾನಿ, 76mm ಮಳೆ ದಾಖಲು
  • ಸ್ವಲ್ಪ ಮಳೆಗೂ ನೆರೆ ಪೀಡಿತವಾಗಲಿವೆ 226 ಪ್ರದೇಶಗಳು: ಬೆಂಗಳೂರಿನ ಬಗ್ಗೆ ಹೊರಬಿತ್ತು ಆಘಾತಕಾರಿ ವರದಿ- ಯಾವ ಏರಿಯಾಗಳು ತಿಳಿಯಿರಿ
  • ಕಾಫಿನಾಡಿನಲ್ಲಿ ಅಬ್ಬರಿಸಿದ ಬೊಬ್ಬೆರೆದ ಮಳೆರಾಯ, ಚರಂಡಿಯಂತಾದ ರಸ್ತೆಗಳು, ಪರದಾಟ
  • ಹಾಸನದಲ್ಲಿ ಬಿರುಗಾಳಿಗೆ ತೂರಿಕೊಂಡು ಹೋದ ಮನೆಯ ಮೇಲ್ಚಾವಣಿ, ಮದುವೆ ಮನೆಯ ಸಂಭ್ರಮವನ್ನೇ ಕಿತ್ತುಕೊಂಡ ಮಳೆರಾಯ
  • ಬಿರುಗಾಳಿ ಸಹಿತ ಮಳೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕೃಷಿ ಭೂಮಿಗಳು ಜಲಾವೃತ, ಅನ್ನದಾತ ಕಂಗಾಲು,
  • ಬೆಂಗಳೂರಿನಲ್ಲಿ ಎಷ್ಟು ಪ್ರವಾಹ ಪೀಡಿತ ಪ್ರದೇಶಗಳಿವೆ?; ಬಿಬಿಎಂಪಿ ಆಯುಕ್ತರು ನೀಡಿದ್ರು ಭಯಾನಕ ಮಾಹಿತಿ
  • Breaking: Bengaluru rain: ಎರಡನೇ ಸಾವು ವರದಿ, ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆ
  • ಮಳೆರಾಯನ ಅಟ್ಟಹಾಸಕ್ಕೆ ನಲುಗಿದ ಚಾಮರಾಜನಗರ ಜಿಲ್ಲೆ ಜನತೆ, ಎಲ್ಲೆಲ್ಲಿ ಹಾನಿ?, ಇಲ್ಲಿದೆ ವಿವರ

English summary

Flood situation in Assam remained critical on June 21 following overnight rainfall at several places, over 34,000 people reeling under deluge across nine districts. know more.

Story first published: Wednesday, June 21, 2023, 16:42 [IST]

Source link