Tv
oi-Muralidhar S
By ಎಸ್ ಸುಮಂತ್
|
ತಾಂಡವ್
ತನ್ನ
ಅಹಂಕಾರದಿಂದಾಗಿ
ಮನೆ
ಬಿಟ್ಟು
ಹೋಗಿದ್ದ.
ಆ
ಕಡೆ
ತಾಳಿ
ಕಟ್ಟಲಿಲ್ಲ
ಎಂಬ
ಕಾರಣಕ್ಕೆ
ಶ್ರೇಷ್ಠಾ
ಕೂಡ
ತಾಂಡವ್ನಿಂದ
ದೂರ
ಆಗಿದ್ದಾಳೆ.
ಈ
ಕಡೆ
ಕುಸುಮಾ
ಡೋಂಟ್
ಕೇರ್
ಎನ್ನುತ್ತಿದ್ದಾಳೆ.
ಮೊದಲೇ
ತಾಂಡವ್ಗೆ
ಬೇಕಿರುವುದು,
ತಾನೂ
ಗ್ರೇಟ್
ಎನ್ನಬೇಕು
ಎಂಬ
ಮನಸ್ಥಿತಿ.
ಆದರೆ
ಯಾರೂ
ತನ್ನತ್ತ
ಗಮನ
ಹರಿಸುತ್ತಿಲ್ಲವಲ್ಲ
ಎಂಬ
ಕಾರಣಕ್ಕೆ
ನೋವು
ಮಾಡಿಕೊಂಡಿದ್ದಾನೆ.
ಆಗಿದ್ದೆಲ್ಲವೂ
ಆಗಿ
ಹೋಯ್ತು.
ಈಗ
ಮನೆಯವರನ್ನು
ಬಿಟ್ಟರೆ
ಬೇರೆ
ಗತಿ
ಇಲ್ಲ
ಎಂಬ
ಪರಿಸ್ಥಿತಿಗೆ
ಬಂದು
ನಿಂತಿದ್ದಾನೆ.
ಹೀಗಾಗಿಯೇ
ಮತ್ತೆ
ಮನೆಗೆ
ಬಂದು
ಎಲ್ಲರ
ಕ್ಷಮೆ
ಕೇಳಿ,
ಒಳ್ಳೆ
ಮಗನಾಗುವುದಕ್ಕೆ
ಪ್ರಯತ್ನಿಸುತ್ತಿದ್ದಾನೆ.

ತಾಂಡವ್
ಕಡೆಯಿಂದ
ನಾಟಕ
ಶುರು
ತಾಂಡವ್
ಬೀದಿಯಲ್ಲಿ
ಬಿದ್ದವನು
ಯೋಚನೆ
ಮಾಡಿದ,
ಮತ್ತೆ
ಮನೆಗೆ
ಬಂದ.
ಮನೆಯವರೆಲ್ಲರ
ಬಳಿ
ಸುಳ್ಳು
ನಾಟಕವಾಡಿ,
ತಪ್ಪು
ಮಾಡಿದೆ
ಎಂದು
ಕ್ಷಮೆ
ಕೇಳಿದ.
ಇನ್ಮುಂದೆ
ಹೀಗೆ
ಹಾಗಲ್ಲ
ಎಂದು
ಚಡಪಡಿಸಿದ.
ಭಾಗ್ಯಾಳ
ಬಳಿಯೂ
ಕ್ಷಮೆಯಾಚಿಸಿದ.
ಕುಟುಂಬದಲ್ಲಿ
ಇನ್ಮೇಲೆ
ನೆಮ್ಮದಿ
ಇರುವಂತೆ
ನೋಡಿಕೊಳ್ಳುತ್ತೀನಿ
ಎಂದು
ಹೇಳಿದ.
ಮನೆಯವರೆಲ್ಲರಿಗೂ
ಪೂಸಿ
ಹೊಡೆದು,
ಸಮಾಧಾನ
ಮಾಡಿ,
ಮತ್ತೆ
ಮೊದಲಿಗನಂತೆ
ಆಗಿಬಿಟ್ಟ.
ತಾಂಡವ್ಗೆ
ಭಾಗ್ಯಾಳೇ
ಟಾರ್ಗೆಟ್
ಈಗಲೂ
ತಾಂಡವ್
ಮನಸ್ಥಿತಿ
ಏನು
ಬದಲಾಗಿಲ್ಲ.
ಸೊಸೆಯ
ಮುಂದೆಯೇ
ಮಗನನ್ನು
ದೂರ
ಮಾಡುತ್ತಾರೆ.
ಮಗನ
ಬೆಲೆ
ಗೊತ್ತು
ಮಾಡ್ತೀನಿ.
ಮಾತಿಗೆ
ಮುಂಚೆ
ಸೊಸೆಯನ್ನೇ
ಹೊಗಳುತ್ತಿದ್ದಾರೆ.
ಇನ್ಮುಂದೆ
ಬುದ್ದಿ
ಕಲಿಸುತ್ತೀನಿ
ಅಂತ
ಮನಸ್ಸಲ್ಲಿಯೇ
ಅಂದುಕೊಂಡು
ಮನೆಗೆ
ಬಂದಿದ್ದಾನೆ.
ಹೇಗಾದರೂ
ಮಾಡಿ,
ಭಾಗ್ಯಾಳನ್ನು
ಎಸ್ಎಸ್ಎಲ್ಸಿ
ಪರೀಕ್ಷೆ
ಬರೆಯದಂತೆ
ನೋಡಿಕೊಳ್ಳಬೇಕು
ಎಂದು
ತೀರ್ಮಾನ
ಮಾಡಿದ್ದಾನೆ.
ಅದಕ್ಕೆ
ತೀರಾ
ಒಳ್ಳೆಯವನ
ರೀತಿ
ನಡೆದುಕೊಳ್ಳುತ್ತಿದ್ದಾನೆ.
ಹಠ
ಮಾಡಿದ್ರೆ
ಏನು
ವರ್ಕೌಟ್
ಆಗಲ್ಲ
ಎಂದುಕೊಂಡ
ತಾಂಡವ್,
ಈಗ
ಸಾಫ್ಟ್
ಆಗಿನೇ
ಎಲ್ಲರ
ಬಳಿ
ನಡೆದುಕೊಳ್ಳುತ್ತಿದ್ದಾನೆ.
ದೇವಸ್ಥಾನದಲ್ಲಿ
ತಾಂಡವ್
ಹೊಸ
ನಾಟಕ
ಬದಲಾವಣೆಯಾಗಿದ್ದೀನಿ
ಅಂತ
ಎಲ್ಲರ
ಮುಂದೆ
ಶೋ
ಮಾಡಿರುವ
ತಾಂಡವ್
ಅಂಡ್
ಫ್ಯಾಮಿಲಿ
ದೇವರ
ಸನ್ನಿಧಾನಕ್ಕೆ
ಹೋಗಿದ್ದಾರೆ.
ಎಲ್ಲರು
ಪೂಜೆ
ಮಾಡಿಸಿದ್ದಾರೆ.
ಪೂಜೆಯ
ಬಳಿಕ
ತಾಂಡವ್,
ಅರ್ಚಕರ
ಬಳಿ
ಪೂಜೆಯ
ಬಗ್ಗೆ
ಕೇಳಿದ್ದಾನೆ.ಅದು
ಪಶ್ಚಾತ್ತಾಪ
ಪೂಜೆ
ಬಗ್ಗೆ.
ತಾಂಡವ್
ಈ
ರೀತಿ
ಬಗ್ಗೆ
ಕೇಳಿದ್ದಕ್ಕೆ
ಮನೆಯವರೆಲ್ಲ
ಶಾಕ್
ಆಗಿದ್ದಾರೆ.
ಅರ್ಚಕರು
ಕೂಡ
ವ್ರತದ
ಬಗ್ಗೆ
ಹೇಳಿದ್ರು.
ತೀರಾ
ಕಷ್ಟವಾದ
ವ್ರತ
ಅದು.
ನೀನು
ಮಾಡುವುದಕ್ಕೆ
ಸಾಧ್ಯವೇನಪ್ಪ
ಎಂದು
ಕೇಳಿದಾಗಲೂ
ನಾನು
ಮಾಡ್ತೀನಿ
ಅಂತ
ಒಪ್ಪಿಕೊಂಡಿದ್ದಾನೆ.

ಭಾಗ್ಯಾ
ನಂಬಿದ್ರು,
ಜನ
ನಂಬ್ತಿಲ್ಲ
ಈ
ಪಶ್ಚಾತ್ತಾಪದ
ವ್ರತಕ್ಕೆ
ತಾಂಡವ್
ಸಾದಾ
ಸೀದಾ
ಪಂಚೆಯುಟ್ಟು,
ಶಲ್ಯ
ತೊಟ್ಟು
ಬಂದಿದ್ದಾನೆ.
ನೀರಲ್ಲಿ
ಮುಳುಗಿ
ಮುಳುಗಿ
ಪಾಪ
ಕಳೆದುಕೊಳ್ಳುವ
ಪ್ರಯತ್ನ
ಮಾಡುತ್ತಿದ್ದಾನೆ.
ಇದನ್ನು
ಮನೆಯವರೆಲ್ಲ
ನಂಬುತ್ತಿದ್ದಾರೆ.
ಅಯ್ಯೋ
ತಾಂಡವ್
ಬದಲಾಗುತ್ತಿದ್ದಾನೆ
ಎಂದುಕೊಂಡಿದ್ದಾರೆ.
ಆದರೆ,
ತಾಂಡವ್
ಯಾತಕ್ಕಾಗಿ
ಮಾಡುತ್ತಿದ್ದಾನೆ
ಎಂದು
ಭಾಗ್ಯಲಕ್ಷ್ಮೀ
ಪ್ರೇಕ್ಷಕರಿಗೆ
ಗೊತ್ತು.
ಅದಕ್ಕಾಗಿಯೇ
ಸೋಷಿಯಲ್
ಮೀಡಿಯಾದಲ್ಲಿಯೇ
ಭಾಗ್ಯಾಳಿಗೆ
ಬುದ್ದಿ
ಹೇಳಿದ್ದಾರೆ.
ತಾಂಡವ್
ನಾಟಕವಾಡುತ್ತಿದ್ದಾನೆ
ಎಂದು
ಎಚ್ಚರಿಕೆ
ನೀಡುತ್ತಿದ್ದಾರೆ.
ಪಾಪ
ಭಾಗ್ಯಾ
ಅದ್ಯಾವಾಗ
ಎಚ್ಚೆತ್ತುಕೊಳ್ಳುತ್ತಾರೋ
ಏನೋ
ಗೊತ್ತಿಲ್ಲ.
English summary
Colors Kannada Bhagyalakshmi serial Written Update on June 21st episode. Here is the details Tandav’s new drama.
Wednesday, June 21, 2023, 23:03
Story first published: Wednesday, June 21, 2023, 23:03 [IST]