Last Updated:
ಆರ್ ಮಾಧವನ್ ಕನ್ನಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದ ನಾಯಕನ ಕೆಲಸವನ್ನು ಕೊಂಡಾಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಕಾಲಿವುಡ್ನ ನಾಯಕ ನಟ ಆರ್.ಮಾಧವನ್ (R Madhavan) ಕನ್ನಡದ ಮೋಡ ಕವಿದ ವಾತಾವರಣ ಚಿತ್ರದ ಟೀಸರ್ ನೋಡಿದ್ದಾರೆ. ನೋಡಿದ್ಮೇಲೆ ಅವರು ಒಂದು ಕಾಲ್ ಮಾಡಿದ್ದಾರೆ. ಕಾಲ್ ಮಾಡಿ ನಾಯಕ ನಟ ಶೀಲಂ ಎಂ.ಸ್ವಾಮಿ (Sheelam M Swamy) ಅವರಿಗೆ ಮನಸಾರೆ ವಿಶ್ ಮಾಡಿದ್ದಾರೆ. ಚಿತ್ರದ ಟೀಸರ್ (Teaser) ಅಲ್ಲಿ ತಾವು ಕಂಡ ಪ್ರತಿ ವಿಷಯವನ್ನು ಹೇಳಿದ್ದಾರೆ. ಆರ್. ಮಾಧವನ್ (R Madhavan) ಮತ್ತು ಶೀಲಂ ಅವರು ಫೋನ್ ಕಾಲ್ ಆಡಿಯೋ ಕೂಡ ಮಾಧ್ಯಮಗಳಿಗೆ ಶೇರ್ ಆಗಿದೆ. ಅವರು ಏನ್ ಹೇಳಿದರು ಅನ್ನೋದು ಟೆಕ್ಸ್ಟ್ ರೂಪದಲ್ಲೂ ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಿಂಪಲ್ ಸುನಿ ಡೈರೆಕ್ಷನ್ ಮಾಡಿರೋ ಮೋಡ ಕವಿದ ವಾತಾವರಣ ಚಿತ್ರದಲ್ಲಿಯೇ ಶೀಲಂ ಎಂ.ಸ್ವಾಮಿ ಅಭಿನಯಿಸಿದ್ದಾರೆ. ಇವರಿಗೆ ಇದು ಮೊದಲ ಚಿತ್ರವೇ ಆಗಿದೆ.
ಶೀಲಂ ಎಂ ಸ್ವಾಮಿ…
10 ವರ್ಷ ಸಿಂಪಲ್ ಸುನಿ ಅವರ ಜೊತೆಗೆ ಕೋ ಡೈರೆಕ್ಟರ್ ಆಗಿಯೇ ಶೀಲಂ ಕೆಲಸ ಮಾಡಿದ್ದಾರೆ. ಆದರೆ, ಕತೆ ಚೆನ್ನಾಗಿದೆ. ಇದಕ್ಕೆ ಹೊಸಬರೇಬೇಕು ಅಂತ ಸಿಂಪಲ್ ಸುನಿ ತಮ್ಮ ಕೋ ಡೈರೆಕ್ಟರ್ ಶೀಲಂ ಎಂ.ಸ್ವಾಮಿ ಅವರನ್ನ ಹೀರೋ ಮಾಡಿದ್ದಾರೆ.
ದಕ್ಷಿಣದ ಹೆಸರಾಂತ ನಾಯಕ ನಟ ಆರ್.ಮಾಧವನ್ ಈ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಮನಸಾರೆ ಹೊಗಳಿದ್ದಾರೆ. ಇವರು ನೋಡಿರೋ ಪ್ರತಿ ಫ್ರೇಮ್ ಅನ್ನು ಇಷ್ಟಪಟ್ಟಿದ್ದಾರೆ.
ಆರ್ ಮಾಧವನ್ ಆಡಿಯೋ ನೋಟ್ ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ಕನ್ನಡದ ಮೋಡ ಕವಿದ ವಾತಾವರಣ ಚಿತ್ರಕ್ಕೆ ಅರ್.ಮಾಧವನ್ ವಿಶ್ ಮಾಡಿರೋದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ.
ಆರ್ ಮಾಧವನ್ ಹಾರೈಕೆ
ಮೋಡ ಕವಿದ ವಾತಾವರಣ ಚಿತ್ರ ಜೂನ್-26 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ತೆರೆ ಕಾಣ್ತಿದೆ. ಸಿಂಪಲ್ ಸುನಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಜುಡಾ ಸ್ಯಾಂಡಿ ಸಂಗೀತದಲ್ಲಿ ಒಳ್ಳೆ ಹಾಡುಗಳೇ ಬಂದಿವೆ. ಸಿಂಪಲ್ ಸುನಿ ಈ ಚಿತ್ರದಲ್ಲೂ ಒಳ್ಳೆ ಕತೆ ಹೇಳುತ್ತಿದ್ದಾರೆ. ಈ ಚಿತ್ರದ ಹೀರೋ ಟೀಸರ್ ಅಲ್ಲಿ ಕೆಲವೇ ಕೆಲವು ವಿಷಯವನ್ನ ಬಿಟ್ಟುಕೊಟ್ಟಿದ್ದಾರೆ.
ಈ ಒಂದು ಮಾತನ್ನ ಸ್ವತಃ ಸಿಂಪಲ್ ಸುನಿ ಹೇಳಿಕೊಂಡಿದ್ದಾರೆ. ನನ್ನ ಚಿತ್ರಗಳ ಟೀಸರ್ ಇಲ್ಲವೆ ಟ್ರೈಲರ್ ಚೆನ್ನಾಗಿರುತ್ತವೆ. ನೀವು ಚೆನ್ನಾಗಿ ಎಡಿಟ್ ಮಾಡಿಸ್ತೀರಾ ಅಂತಲೇ ಹೇಳ್ತಾರೆ.
ಆದರೆ, ಈ ಚಿತ್ರದ ಟೀಸರ್ ಅಷ್ಟು ಬೆಸ್ಟ್ ಏನು ಇಲ್ಲ. ಕಾರಣ, ಇಡೀ ಚಿತ್ರದ ವಿಷಯವನ್ನ ನಾವು ಟೀಸರ್ ಅಲ್ಲಿ ಬಿಟ್ಟುಕೊಟ್ಟಿಲ್ಲ. ಅರ್ಧ ಚಿತ್ರದ ಮ್ಯಾಟರ್ ಅನ್ನ ಮಾತ್ರ ಹೇಳಿದ್ದೇವೆ.
ಈ ಚಿತ್ರದಲ್ಲಿ ವಿಷಯ ಇದೆ. ಅದನ್ನ ತೆರೆ ಮೇಲೇನೆ ರಿವೀಲ್ ಮಾಡುತ್ತೇವೆ. ಅದಕ್ಕೇನೆ ಟೀಸರ್ ಅಲ್ಲಿ ಏನೂ ಹೇಳಿಯೇ ಇಲ್ಲ ಅಂತಲೇ ಸಿಂಪಲ್ ಸುನಿ ಚಿತ್ರದ ಟೀಸರ್ ಇವೆಂಟ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













