Tv
oi-Muralidhar S
By ಎಸ್ ಸುಮಂತ್
|
ಕಾವೇರಿಗೆ
ಆತಂಕ
ಹೆಚ್ಚಾಗಿದೆ.
ಇನ್ನೆಲ್ಲಿ
ಕೀರ್ತಿ
ಸತ್ಯ
ಹೇಳಿ,
ಮಗನಿಂದ
ದೂರ
ಆಗಿ
ಬಿಡುತ್ತೀನೋ
ಎಂಬ
ಭಯ.
ಹೀಗಾಗಿಯೇ
ಹೊಸ
ನಾಟಕವಾಡಿ,
ಅಂತು
ಇಂತೂ
ಕೀರ್ತಿ
ಮತ್ತು
ವೈಷ್ಣವ್
ಡಿನ್ನರ್
ಪಾರ್ಟಿಯನ್ನು
ಕೆಡಿಸಿದ್ದಾಳೆ.
ಸೊಸೆ
ಮತ್ತು
ಮಗನಿಗೆ
ಡಿನ್ನರ್
ಪಾರ್ಟಿಯಲ್ಲಿ
ಎಂಜಾಯ್
ಮಾಡಲು
ಬಿಟ್ಟಿದ್ದಾಳೆ.
ಮೀಡಿಯಾ
ಎಂಬ
ಮಾತನ್ನು
ಇಟ್ಟುಕೊಂಡು
ಕೀರ್ತಿಯನ್ನು
ಹೆದರಿಸಿ,
ಮನೆಗೆ
ಕಳುಹಿಸಿದ್ದಾಳೆ.
ಮನೆಗೂ
ಬಂದು
ಎಲ್ಲರ
ಪ್ರೀತಿ,
ನಂಬಿಕೆಯನ್ನೇ
ಕಾವೇರಿ
ಗಳಿಸಿದ್ದಾಳೆ.
ಇಷ್ಟು
ದಿನ
ಗಂಡನ
ಬಳಿ
ವಿಚಾರ
ಮುಚ್ಚಿಟ್ಟು,
ಈಗ
ಕೀರ್ತಿ,
ತನ್ನ
ಮಗನ
ಸಂಸಾರವನ್ನು
ಹಾಳು
ಮಾಡುತ್ತಿದ್ದಾಳೆ
ಎಂದು
ಹೇಳಿ,
ಕೃಷ್ಣನ
ಗಮನವನ್ನು
ಸೆಳೆದಿದ್ದಾಳೆ.
ಈಗ
ಮನೆಯಲ್ಲೂ
ಮಗನಿಗೆ
ಊಟದಲ್ಲಿಯೇ
ಪ್ರೀತಿಯನ್ನು
ತುಂಬಿದ್ದಾಳೆ.

ಕೀರ್ತಿಗೆ
ಗೊತ್ತಾಯ್ತು
ಸತ್ಯ
ವೈಷ್ಣವ್
ಜೊತೆಗೆ
ಡಿನ್ನರ್
ಪಾರ್ಟಿಗೆ
ಹೋದ
ಕೀರ್ತಿ
ಬೇಸರದಿಂದಾನೇ
ಮನೆಗೆ
ಬಂದಳು.
ಕಾರುಣ್ಯಗೆ
ಪರಿಸ್ಥಿತಿ
ಏನಾಗಬಹುದು
ಎಂಬುದು
ಅದಾಗಲೇ
ಗೊತ್ತಾಗಿತ್ತು.
ಮನೆಗೆ
ಕೀರ್ತಿ,
ಹೋದ
ತಕ್ಷಣ
ಕಾವೇರಿಯ
ನಾಟಕವನ್ನು
ಬಯಲು
ಮಾಡಿದಳು.
ಮೀಡಿಯಾದವರು
ಬರುವುದಕ್ಕೆ
ಸಾಧ್ಯವಿಲ್ಲ
ಎಂದು
ಮನವರಿಕೆ
ಮಾಡಿದಳು.
ಆಗ
ಕೀರ್ತಿ
ಮತ್ತೆ
ಅದೇ
ಹೊಟೇಲ್ಗೆ
ಹೋಗಿದ್ದಾಳೆ.
ಅಲ್ಲೆಲ್ಲಾ
ಹುಡುಕಾಟ
ನಡೆಸಿದ್ದಾಳೆ.
ಅಲ್ಲಿನ
ಮ್ಯಾನೇಜರ್ನನ್ನು
ಕೇಳಿದ್ದಾಳೆ.
ಸಿಸಿಟಿವಿ
ಫೂಟೇಜ್
ಎಲ್ಲಾ
ತೆಗೆದು
ನೋಡಿದ್ದಾಳೆ.
ಮಾಧ್ಯಮದವರು
ಎಂದು
ಹೇಳಿದ್ದ
ವ್ಯಕ್ತಿ
ತಗಲಾಕಿಕೊಂಡಿದ್ದಾನೆ.
ಕಾವೇರಿ
ಈಗಲೂ
ಬಚಾವ್
ಆಗ್ತಾಳಾ..?
ಕಾವೇರಿಯ
ನಾಟಕ
ಕೀರ್ತಿಗೆ
ಅರ್ಥವಾಗಿದೆ.
ಕಾವೇರಿ
ಮಾಡಿದ
ಮೋಸಕ್ಕೆ
ಬುದ್ದಿ
ಕಲಿಸುವುದಕ್ಕೆ
ಹೊರಟಿದ್ದಾಳೆ.
ಅಮ್ಮ
ಹೇಳಿದರೂ
ಆ
ವಿಚಾರ
ಬಿಡದೆ,
ಯಾಕಾದ್ರೂ
ಕೀರ್ತಿಯ
ಜೊತೆಗೆ
ಆಟ
ಆಡಿದೆನೋ
ಅಂತ
ಅನ್ನಿಸ್ಬೇಕು
ಅಷ್ಟು
ದೊಡ್ಡಮಟ್ಟಕ್ಕೆ
ಬುದ್ದಿ
ಕಲಿಸುತ್ತೀನಿ
ಎಂದು
ಪಣ
ತೊಟ್ಟಿದ್ದಾಳೆ
ಕೀರ್ತಿ.
ಈಗ
ಕಾವೇರಿಯ
ನಾಟಕದ
ಮುಂದೆ
ಕೀರ್ತಿ
ವೈಷ್ಣವ್ನ
ಬಳಸಿಕೊಳ್ಳುತ್ತಿದ್ದಾಳೆ.
ಮೀಡಿಯಾದವರು
ಅಂತ
ಹೇಳಿಕೊಂಡು
ವಿಡಿಯೋ
ತೆಗೆಯುತ್ತಿದ್ದ
ವ್ಯಕ್ತಿಯನ್ನು,
ವೈಷ್ಣವ್
ಮುಂದೆ
ತಂದು
ನಿಲ್ಲಿಸಿದ್ದಾಳೆ.
ಆ
ವ್ಯಕ್ತಿಯ
ಬಣ್ಣ
ಬಯಲು
ಮಾಡಿದ್ದಾಳೆ.
ವೈಷ್ಣವ್
ಆ
ವ್ಯಕ್ತಿಯನ್ನು
ಪ್ರಶ್ನೆ
ಮಾಡುತ್ತಿರುವಾಗಲೇ
ಸತ್ಯ
ಬಾಯ್ಬಿಟ್ಟಿದ್ದಾಳೆ.
ಇದಕ್ಕೆಲ್ಲಾ
ಕಾರಣ
ನಿಮ್ಮ
ಅಮ್ಮನೆ.
ನಮ್ಮ
ಡಿನ್ನರ್
ಹಾಳು
ಮಾಡಿದ್ದು
ನಿಮ್ಮ
ಅಮ್ಮನೆ
ಎಂಬ
ಸತ್ಯ
ಹೇಳಿದ್ದಾಳೆ.
ಪೂಜಾಗೆ
ಎಲ್ಲಿಂದ
ಬಂತು
ಹಣ?
ಪೂಜಾ
ಸ್ಟುಡಿಯೋಗೆ
ಬಂದ
ಮೇಲೆ
ಕೀರ್ತಿ
ಮತ್ತು
ವೈಷ್ಣವ್
ಪ್ರೀತಿಯ
ಗುಟ್ಟು
ಅನಾವರಣವಾಗಿದೆ.
ಕೀರ್ತಿ
ಇಡೀ
ಸ್ಟುಡಿಯೋವನ್ನು
ಅಲಂಕಾರ
ಮಾಡಿದ್ದಳು.
ಸ್ಟುಡಿಯೋ
ವಿಡಿಯೋ
ಮಾಡಿಕೊಂಡು
ಬಂದ
ಪೂಜಾ,
ಈಗ
ಶ್ರೀಮಂತೆಯಾಗ್ತಾ
ಇದ್ದಾಳೆ.
ಕಾಸ್ಟ್ಲಿಯೆಸ್ಟ್
ಎನಿಸುವಂತ
ಫೋನ್
ತೆಗೆದುಕೊಂಡಿದ್ದಾಳೆ.
ಅದನ್ನ
ವಿಡಿಯೋ
ಬೇರೆ
ಹಾಕಿದ್ದಾಳೆ.
ವೈಷ್ಣವ್ಗೆ
ಬ್ಲಾಕ್
ಮೇಲ್
ಮಾಡಿಯೇ
ಮೊಬೈಲ್
ತೆಗೆದುಕೊಂಡಿದ್ದಾಳೆ.

ಫೋನ್
ಜಾಲ
ಹಿಡಿದು
ಹೊರಟ
ಲಕ್ಷ್ಮೀ
ಪೂಜಾ
ಮೊಬೈಲ್
ಅನ್ನು
ಅನ್
ಬಾಕ್ಸ್
ಮಾಡ್ತಾ
ಇದ್ರೆ,
ಆ
ಕಡೆ
ವಿಧಿಗೆ
ತಡೆದುಕೊಳ್ಳಲಾಗುತ್ತಿಲ್ಲ.
ಲಕ್ಷ್ಮೀಯನ್ನೇ
ತರಾಟೆಗೆ
ತೆಗೆದುಕೊಂಡಿದ್ದಾಳೆ.
ಇಲ್ಲಿ
ಭಾಷಣ
ಮಾಡ್ತೀರಿ,
ಅಲ್ಲಿ
ನಿಮ್ಮ
ತಂಗಿ
ದುಬಾರಿ
ಮೊಬೈಲ್
ತೆಗೆದುಕೊಳ್ಳಬಹುದಾ
ಎಂದು
ಪ್ರಶ್ನೆ
ಮಾಡಿದ್ದಾಳೆ.
ಲಕ್ಷ್ಮೀಗೂ
ಇದು
ಗೊತ್ತಿಲ್ಲ.
ಈಗ
ಮೊಬೈಲ್
ಎಲ್ಲಿಂದ
ಬಂತು
ಅಂತ
ಕೇಳುವುದಕ್ಕೆ
ಹೊರಟಿದ್ದಾಳೆ.
ಲಕ್ಷ್ಮೀಯ
ಬೆಂಬಲಕ್ಕೆ
ನಿಂತಿರುವ
ಕಾವೇರಿ,
ಪೂಜಾಳ
ಬಗ್ಗೆ
ವಿಚಾರಿಸಲು
ಜೊತೆಯಾಗಿ
ಹೊರಟಿದ್ದಾಳೆ.
English summary
Colors Kannada Lakshmibaramma serial Written Update on June 21st episode. Here is the details Kaveri and Lakshmi surprise entry.
Wednesday, June 21, 2023, 23:11
Story first published: Wednesday, June 21, 2023, 23:11 [IST]