Last Updated:
ರಾಮ್ ಚರಣ್ ಅವರು ಕತೆಯನ್ನ ಒಂದೇ ಏಟಿಗೆ ಒಪ್ಪಿಕೊಳ್ಳಬೇಕು. ಯಾವುದೇ ಬದಲಾವಣೆ ಹೇಳಬಾರದು. ಕತೆ ಹೇಗಿದೆಯೋ ಃಹಾಗೆ ಒಪ್ಪಿಕೊಳ್ಳಬೇಕು. ಹೀಗೆ ಡೈರೆಕ್ಟರ್ ಬುಚಿ ಬಾಬು ಸನಾ ದೇವರಲ್ಲಿ ಬೇಡಿಕೊಂಡಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಆ ದಿನ ದೇವಸ್ಥಾನಲ್ಲಿ ಕುಳಿತಿದ್ದರು. ಅವರಿಗೆ ಒಂದು ವಿಷಯ ಹೊಳೆಯಿತು. ಚಿತ್ರದ ನಾಯಕ ರಾಮ್ ಚರಣ್ (Ram Charan) ಅವರು…ಪಾತ್ರದ ಹೆಸರು ಪೆದ್ದಿ….ಹೀಗೆ ಬರೆದುಕೊಂಡರು. ಈ ಚಿತ್ರ ಶುರು ಆಗುವ ಮೊದಲೇ ಉಪ್ಪೇನಾ ರೆಡಿ ಆಗಿತ್ತು. ಆದರೆ, ಆಗ ಈ ಚಿತ್ರ ಥಿಯೇಟರ್ಗೆ ಬರುತ್ತೋ? ಇಲ್ಲಒಟಿಟಿಗೆ ಬರುತ್ತಾ ಅನ್ನೋ ಟೆನ್ಷನ್ ಇತ್ತು. ಇದೇ ಸಮಯದಲ್ಲಿಯೇ ಡೈರೆಕ್ಟರ್ (Director) ಬುಚಿ ಬಾಬು ಸನಾ (Buchi Babu Sana) ಪೆದ್ದಿ ಕನಸು ಕಂಡಿದ್ದರು. ಆದರೆ, ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ….
ಚಿತ್ರದ ಪ್ರಚಾರದಲ್ಲಿ ಹೇಳಿರೋದು
(ಚಿತ್ರ ಕೃಪೆ: ಬುಚಿ ಬಾಬು ಸನಾ ಇನ್ಸ್ಟಾಗ್ರಾಮ್)
ಈ ಚಿತ್ರವನ್ನ ರಾಮ್ ಚರಣ್ ಅವರಿಗೇನೆ ಬರೆದಿದ್ದಾರೆ. ಚಿತ್ರದ ಪಾತ್ರ ಪೆದ್ದಿ ಅಂತ ಇರುತ್ತದೆ. ಹೀರೋ ರಾಮ್ ಚರಣ್ ಅಂತಲೇ ಬರೆದುಕೊಂಡಿದ್ದರು. ಅದೃಷ್ಟಕ್ಕೆ ಈ ಚಿತ್ರಕ್ಕೆ ರಾಮ್ ಚರಣ್ ಅವರೇ ಹೀರೋ ಆದರು.
1980 ರ ಕಾಲಘಟ್ಟದಲ್ಲಿ ನಡೆಯೋ ಕತೆ ಇದು. ಐಡೆಂಟಿಟಿನೇ ಇರದ ಒಂದು ಗ್ರಾಮ. ಈ ಹಳ್ಳಿಯ ಯವಕ ಪೆದ್ದಿ. ಈತನಿಗೆ ಕ್ರಿಕೆಟ್ ಹುಚ್ಚು ಬೇರೆ. ರನ್ನಿಂಗ್, ಕುಸ್ತಿ ಹೀಗೆ ಇತರ ಕ್ರೀಡೆಯಲ್ಲೂ ಆಸಕ್ತಿ ಇರುತ್ತದೆ.
ರಾಮ್ ಚರಣ್ ಅವರಿಗೆ ಬುಚಿ ಬಾಬು ಕತೆ ಹೇಳಿದರು. ಈ ಕತೆಯನ್ನ ಕೇಳಿದ ರಾಮ್ ಚರಣ್ ಮೆಚ್ಚಿಕೊಂಡರು. ಒಂದೇ ಒಂದು ವಿಷಯವನ್ನು ಕೂಡ ಚೇಂಜ್ ಮಾಡಲು ಹೇಳಲೇ ಇಲ್ಲ. ಬದಲಾಗಿ ಎಲ್ಲದಕ್ಕೂ ರೆಡಿ ಆಗಿದ್ದರು.
ಈ ರೀತಿನೇ ಪೆದ್ದಿ ಶುರು ಆಗಿತ್ತು. ಬೆಂಗಳೂರಿಗೆ ರಾಮ್ ಚರಣ್ ಬಂದಿದ್ದರು. ಚಿತ್ರವನ್ನ ಪ್ರಚಾರ ಕೂಡ ಮಾಡಿದರು. ಇದೇ ಸಮಯದ ಅನುಶ್ರೀ ಸಂದರ್ಶನದಲ್ಲಿ ರಾಮ್ ಚರಣ್ ಒಂದು ಮಾತು ಹೇಳಿದ್ದರು. ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿರೋದು ಬೇರೆ ಯಾವುದೋ ವಿಷಯಕ್ಕೆ ಅಲ್ವೇ ಅಲ್ಲ. ಬದಲಾಗಿ ಕತೇನೆ ಅಂತಲೇ ಹೇಳಿದರು.
ಪೆದ್ದಿ ಕತೇನೆ ಹಾಗಿದೆ ನೋಡಿ
(ಚಿತ್ರ ಕೃಪೆ: ಬುಚಿ ಬಾಬು ಸನಾ ಇನ್ಸ್ಟಾಗ್ರಾಮ್)
ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹಾಗೆ ಬರೆದಿದ್ದಾರೆ. ಇಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಏನು ಇಲ್ಲ. ಎಮೋಷನ್ಸ್ ಇಲ್ಲಿ ಆ ಕೆಲಸ ಮಾಡುತ್ತವೆ.
ಈ ವಿಚಾರವನ್ನ ಜಗಪತಿ ಬಾಬು ಕೂಡ ಹೇಳಿಕೊಂಡಿದ್ದಾರೆ. ಪೆದ್ದಿ ಚಿತ್ರದ ಅತಿ ದೊಡ್ಡ ಶಕ್ತಿ ಅಂದ್ರೆ ಅದು ಎಮೋಷನ್ಸ್ ಅನ್ನೊದೇ ಆಗಿದೆ. ಅಂತಹ ಈ ಕತೆಯನ್ನ ಬರೆದ ಬುಚಿ ಬಾಬು ಸನಾ ಅವರಿಗೆ ಟೆನ್ಷನ್ ಇದ್ದೇ ಇದೆ. ಜನ ಹೇಗೆ ತೆಗೆದುಕೊಳ್ತಾರೋ ಏನೋ ಅನ್ನುವ ಆತಂಕ ಇದ್ದೇ ಇದೆ.
ಪೆದ್ದಿ ಚಿತ್ರದ ಪ್ರಚಾರ ಎಲ್ಲೆಡೆ ನಡೆದಿದೆ. ಹೈದ್ರಾಬಾದ್ ಅಲ್ಲೂ ಈ ಚಿತ್ರದ ಪ್ರಮೋಷನ್ ಇವೆಂಟ್ ಆಗಿದೆ. ಇದೇ ಸಮಯದಲ್ಲಿಯೇ ಬುಚಿ ಬಾಬು ಸನಾ ಹೇಳಿಕೊಂಡಿದ್ದಾರೆ.
ರಾಮ್ ಚರಣ್ ಅವರು ಯಾವುದೇ ಬದಲಾವಣೆ ಹೇಳದೆ ಕತೆ ಒಪ್ಪಿಕೊಳ್ಳಲಿ ಅಂತಲೇ ದೇವರಲ್ಲಿ ಹರಕೆ ಹೊತ್ತಿದ್ದೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ಈ ಚಿತ್ರದ ರಿಲೀಸ್ ತಡವಾಗಲು ಕತೆನೆ ಕಾರಣವಾಗಿದೆ. ಅಂದ್ರೆ ಉತ್ತಮ ಕತೆ ಇದೆ. ಇದನ್ನ ಇನ್ನಷ್ಟು ಚೆನ್ನಾಗಿ ಕೊಡ್ಬೇಕು ಅಂತಲೆ ಚಿತ್ರ ತಂಡಕ್ಕೆ ನಿರ್ಮಾಪಕರು ಮತ್ತಷ್ಟು ಟೈಮ್ ಕೊಟ್ಟಿದ್ದರು. ಈ ವಿಷಯವನ್ನ ನಿರ್ಮಾಪಕರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jun 03, 2026 10:54 PM IST













