Last Updated:
ಇಬ್ಬರನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ಬಳಿಕ ತಾನೇ ಸಮಾಧಾನಗೊಂಡು ವಿಜಯಲಕ್ಷ್ಮಿ ಬಳಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeep) ಅವರನ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ರು. ಬಹುದಿನಗಳ ಬಳಿಕ ಹೆಂಡ್ತಿ-ಮಗನನ್ನ ಹತ್ತಿರದಿಂದ ಕಂಡು ದರ್ಶನ್ ಭಾವುಕರಾಗಿದ್ದಾರೆ. ಇಬ್ಬರನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ಬಳಿಕ ತಾನೇ ಸಮಾಧಾನಗೊಂಡು ವಿಜಯಲಕ್ಷ್ಮಿ ಬಳಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ಸಂದರ್ಶನದ ವೇಳೆ ಪತ್ನಿ ಹಾಗೂ ಮಗನಿಗೆ ದರ್ಶನ್ ಹೇಳಿದ್ದೇನು ಗೊತ್ತಾ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ಬಾರಿಗೆ ಕುಟುಂಬದ ಜೊತೆ ಜೈಲಲ್ಲಿ ವಿಶೇಷ ಸಂದರ್ಶನದ ಮೂಲಕ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಭೇಟಿಯಾಗಿದ್ರು. ಅರ್ಧ ಗಂಟೆ ಕಾಲ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಕುಟುಂಬದ ಜೊತೆ ಮಾತಾಡಿದ ಬಳಿಕ ದರ್ಶನ್ ಮನಸ್ಸಿನ ಭಾರ ಕಡಿಮೆ ಆಗಿದ್ದು, ಹಾಗಾದ್ರೆ ಪತ್ನಿ ಮಗನ ಜೊತೆ ದರ್ಶನ್ ಮಾತಾಡಿದ್ದೇನು?
ಜೈಲಿನಲ್ಲಿ ಹೆಂಡ್ತಿ-ಮಗನನ್ನ ಕಂಡು ತಬ್ಬಿ ಕಣ್ಣೀರಿಟ್ಟ ದರ್ಶನ್, ಮನಸ್ಸಿನ ಭಾರ ಇಳಿಸಿಕೊಂಡು ಪತ್ನಿ ಹಾಗೂ ಮಗನಿಗೆ ಧೈರ್ಯ ಹೇಳಿದ್ದಾರೆ. ನೀವೇನು ಬೇಜಾರಾಗ್ಬೇಡಿ, ಧೈರ್ಯವಾಗಿರಿ. ನಾನು ಇಲ್ಲಿ ಆರಾಮಾಗಿದ್ದೀನಿ ಅಂತ ಹೆಂಡತಿ ಮಗನಿಗೆ ಧೈರ್ಯ ತುಂಬಿದ ದರ್ಶನ್, ವಿಶೇಷ ಸಂದರ್ಶನಕ್ಕೆ ಅವಕಾಶ ಕೊಟ್ಟಿರೋದು ಸಮಾಧಾನ ತಂದಿದೆ ಎಂದಿದ್ದಾರಂತೆ.
”ಜೈಲಿನಲ್ಲಿದ್ರು ಪತ್ನಿ ಹಾಗೂ ಪುತ್ರನ ಕಣ್ಣೀರು ಒರೆಸಿದ ದರ್ಶನ್, ನಿಮ್ಮಿಬ್ರನ್ನ ಹತ್ತಿರದಿಂದ ಮಾತಾಡಿಸಿ ಮನಸ್ಸು ಹಗುರವಾಯ್ತು. ಹೇಗೋ ಇಷ್ಟು ದಿನ ಕಳೆದಿದ್ದೇನೆ. ಭಗವಂತ ಇದ್ದಾನೆ, ಇನ್ನೊಂದು ವರ್ಷ ಕಳೀತಿನಿ” ಎಂದು ಪತ್ನಿ- ಮಗನಿಗೆ ದರ್ಶನ್ ಧೈರ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕುಟುಂಬ ಕುರಿತ ಚರ್ಚೆ ಬಳಿಕ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಬಳಿ ಈ ಒಂದು ಪ್ರಶ್ನೆ ಕೇಳಿದ್ದಾರೆ ಎನ್ನಲಾಗ್ತಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಸುಪ್ರೀಂ ಕೋರ್ಟ್ ಬೇಲ್ ರಿಜೆಕ್ಟ್ ಮಾಡಿದ್ದು ಬೇಸರ ತರಿಸಿದೆ. ಹೀಗಾಗಿ ವಿಜಯಲಕ್ಷ್ಮಿ ಬಳಿ ಸುಪ್ರೀಂನಲ್ಲಿ ಬೇಲ್ ರಿಜೆಕ್ಟ್ ಆಗಿದ್ದು ಯಾಕೆ? ಎಂದು ದರ್ಶನ್ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮೊದಲು ಹೈಕೋರ್ಟ್ಗೆ ಬೇಲ್ ಅರ್ಜಿ ಹಾಕಿದ್ರೆ ಒಂದು ಅವಕಾಶ ಇರ್ತಿತ್ತು ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಏನು ಮಾಡಲು ಸಾಧ್ಯವಿಲ್ಲ ಎಂದು ಬೇಸರದ ಮಾತಾಡಿದ್ರು ಎನ್ನಲಾಗ್ತಿದೆ.
ಮಾತುಕತೆ ಬಳಿಕ ಹೆಂಡತಿ ತಂದಿದ್ದ ಡ್ರೈಫ್ರೂಟ್ಸ್ ಹಾಗೂ ಹಣ್ಣುಗಳನ್ನ ಪಡೆದ ದರ್ಶನ್, ಕೊನೆಯಲ್ಲಿ ಹೆಂಡ್ತಿ-ಮಗನನ್ನ ಪ್ರೀತಿಯಿಂದ ಮಾತಾಡಿಸಿ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ 23ನೇ ವಿವಾಹ ವಾರ್ಷಿಕೋತ್ಸವದ ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ನಿನ್ನೆ (ಮೇ 20) ಮಧ್ಯಾಹ್ನ ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು.
(ವರದಿ: ಮಾದೇಶ್, ನ್ಯೂಸ್18 ಕನ್ನಡ, ಬೆಂಗಳೂರು)













