Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್​​ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews

ರಿಷಭ್ ಪಂತ್


Last Updated:

ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ರಿಷಭ್ ಪಂತ್
ರಿಷಭ್ ಪಂತ್

ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್‌ಸಿಬಿ (RCB) ಪ್ಲೇಆಫ್‌ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು ಐಪಿಎಲ್ ಫೈನಲ್ (Final) ನಡೆಯಲಿದೆ. ಇದಾದ ನಂತರ, ಭಾರತ ತಂಡ ಜೂನ್ 6 ರಿಂದ ತವರಿನಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ಟೆಸ್ಟ್ (Test) ಮತ್ತು ಜೂನ್ (June) 14 ರಿಂದ 3 ಪಂದ್ಯಗಳ ಏಕದಿನ (ODI) ಸರಣಿಯನ್ನು ಆಡಲಿದೆ. ಈ ಮಹತ್ವದ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದೆ. ಈ ವೇಳೆ ಟೀಮ್ ಇಂಡಿಯಾದ ಉಪನಾಯಕ (Vice-captain) ರಿಷಭ್ ಪಂತ್ (Rishabh Pant) ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ಮಹತ್ವದ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದೆ. ಈ ವೇಳೆ ಟೀಮ್ ಇಂಡಿಯಾದ ಉಪನಾಯಕ (Vice-captain) ರಿಷಭ್ ಪಂತ್ (Rishabh Pant) ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ರಿಷಭ್ ಪಂತ್ ಪ್ರಸ್ತುತ ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅವರು ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರ ನಡುವೆ ಅಫ್ಘಾನಿಸ್ತಾನ ಸರಣಿಗಾಗಿ ನಡೆಯಲಿರುವ ಸಭೆಯಲ್ಲಿ ರಿಷಭ್ ಪಂತ್ ಅವರಿಗೆ ಬಿಗ್ ಶಾಕ್ ನೀಡಬಹುದು.

ಬಿಸಿಸಿಐ ಮಹತ್ವದ ನಿರ್ಧಾರ

ಪಿಟಿಐ ವರದಿಯ ಪ್ರಕಾರ, ಪಂತ್ ಟೆಸ್ಟ್ ಸ್ವರೂಪದಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಆದ್ದರಿಂದ ಬಿಸಿಸಿಐ ಅವರನ್ನು ತಂಡದಿಂದ ಕೈಬಿಡುತ್ತಿಲ್ಲ. ಉಪನಾಯಕ ಸ್ಥಾನದಿಂದ ರಿಷಬ್ ಪಂತ್ ವಜಾ ಮಾಡಲಾಗುತ್ತಿದೆ. ನಾಯಕತ್ವದ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಮತ್ತು ಬ್ಯಾಟಿಂಗ್‌ನ ಮೇಲೆ ಮಾತ್ರ ಗಮನಹರಿಸಲು ಪಂತ್ ಅವರಿಂದ ಉಪನಾಯಕತ್ವವನ್ನು ತೆಗೆದುಹಾಕುವುದು ಇದರ ಉದ್ದೇಶವಾಗಿದೆ.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ?

ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಅಫ್ಘಾನಿಸ್ತಾನ ವಿರುದ್ಧದ ತವರು ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಬುಮ್ರಾ ಅವರ ಕೆಲಸದ ಹೊರೆ ನಿರ್ವಹಣೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಸೂಚಿಸಿದೆ. ಆದಾಗ್ಯೂ, ಬುಮ್ರಾಗೆ ವಿಶ್ರಾಂತಿ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಬಿಸಿಸಿಐ ವೈದ್ಯಕೀಯ ತಂಡದ ಫಿಟ್ನೆಸ್ ವರದಿಯ ನಂತರವೇ ತೆಗೆದುಕೊಳ್ಳಲಾಗುತ್ತದೆ. ಅವರ ದೇಹದ ಮೇಲೆ ಯಾವುದೇ ಹೆಚ್ಚುವರಿ ಒತ್ತಡವಿದ್ದರೆ, ಮುಂಬರುವ ಇಂಗ್ಲೆಂಡ್ ಪ್ರವಾಸವನ್ನು ಪರಿಗಣಿಸಿ ಈ ಸರಣಿಗೆ ಅವರಿಗೆ ಖಂಡಿತವಾಗಿಯೂ ವಿಶ್ರಾಂತಿ ನೀಡಲಾಗುವುದು.

ಹಿರಿಯ ಆಟಗಾರರ ಭವಿಷ್ಯ ಏನು?

ಜೂನ್ 19 ರಂದು ನಡೆಯಲಿರುವ ಆಯ್ಕೆ ಸಮಿತಿ ಸಭೆಯು ಅಫ್ಘಾನಿಸ್ತಾನ ಸರಣಿಗೆ ತಂಡವನ್ನು ಆಯ್ಕೆ ಮಾಡುವುದಲ್ಲದೆ, ಟೀಮ್ ಇಂಡಿಯಾದ ಹಲವಾರು ಹಿರಿಯ ಆಟಗಾರರ ಭವಿಷ್ಯದ ಬಗ್ಗೆಯೂ ಒಂದು ಮಾರ್ಗಸೂಚಿಯನ್ನು ರೂಪಿಸಲಿದೆ. ರಿಷಭ್ ಪಂತ್ ಅವರನ್ನು ಉಪನಾಯಕತ್ವದಿಂದ ತೆಗೆದುಹಾಕಿದರೆ, ಈ ಜವಾಬ್ದಾರಿಯನ್ನು ಯಾರಿಗೆ ನೀಡಲಾಗುತ್ತದೆ ಮತ್ತು ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಚುಕ್ಕಾಣಿ ಯಾರು ವಹಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಈಗ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರ ಚಿತ್ತ ನೆಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed