ಗಿಲ್-ಅಂಪೈರ್ ಜೊತೆಗ ವಾಗ್ವಾದ
ಶುಭ್ಮನ್ ಗಿಲ್ ಮತ್ತು ಆನ್ಫೀಲ್ಡ್ ಅಂಪೈರ್ಗಳ ಜೊತೆಗೆ ಸುದೀರ್ಘ ವಾಗ್ವಾದ ನಡೆಯಿತು. ಎಲ್ಬಿಡಬ್ಲ್ಯು ವಿಚಾರವಾಗಿ ಈ ಜಗಳ ಚರ್ಚೆ ಜರುಗಿತು. ಎಸ್ಆರ್ಎಚ್ 14ನೇ ಓವರ್ನಲ್ಲಿ ಅಭಿಷೇಕ್ ಶರ್ಮಾರ ಕಾಲಿಗೆ ಚೆಂಡು ತಗುಲಿತು. ಆಗ ಜಿಟಿ ಬೌಲರ್ ಪ್ರಸಿದ್ಧ್ ಕೃಷ್ಣ ಮತ್ತು ಫೀಲ್ಡರ್ಸ್ ಎಲ್ಬಿಡಬ್ಲ್ಯೂ ಔಟ್ಗೆ ಮನವಿ ಮಾಡಿದರು. ಆದರೆ ಅಂಪೈರ್ ಅದನ್ನು ನಾಟೌಟ್ ಎಂದು ತೀರ್ಪು ಕೊಟ್ಟರು. ಆಗ ಜಿಟಿ ಡಿಆರ್ಎಸ್ ಮೊರೆ ಹೋಯಿತು. ಆದಾಗ್ಯೂ, ವಿಮರ್ಶೆಯಲ್ಲಿ ಚೆಂಡು ಎಲ್ಲಿ ಪಿಚ್ ಆಗಿದೆ ಎಂಬುದನ್ನು ತೋರಿಸಲಿಲ್ಲ, , ಕೇವಲ ಇಂಪ್ಯಾಕ್ಟ್ ಮತ್ತು ವಿಕೆಟ್ಗಳನ್ನು ತೋರಿಸಿದೆ. ಕೊನೆ ಅಂಪೈರ್ಸ್ ಕಾಲ್ ಎಂದು ನಾಟೌಟ್ ತೀರ್ಮಾನ ಕೊಡಲಾಯಿತು.