ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ನರಕಕ್ಕೆ ಹೋಗಲಿ; ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಕ್ರಿಕೆಟಿಗ-cricket news pakistan former cricketer javed miandad attack on bcci over asia cup 2023 row india vs pakistan jra

“ಪಾಕಿಸ್ತಾನವು 2012ರಲ್ಲಿ ಭಾರತಕ್ಕೆ ಪ್ರಯಾಣಿಸಿತ್ತು. ಆ ಬಳಿಕ 2016ರಲ್ಲಿ ಕೂಡ ಹಾಗೆಯೇ ನಡೆದಿದೆ. ಆದರೆ, ಈಗ ಭಾರತ ಯೂಟರ್ನ್‌ ಹೊಡೆಯುತ್ತಿದೆ. ಒಂದು ವೇಳೆ ನಾನು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ಯಾವುದೇ ಕಾರಣಕ್ಕೂ ಭಾರತಕ್ಕೆ ಹೋಗುತ್ತಿರಲಿಲ್ಲ. ವಿಶ್ವಕಪ್ ಪಂದ್ಯಾವಳಿಯೇ ಆಗಿದ್ದರೂ ನಾನು ಪಾಕ್‌ ತಂಡವನ್ನು ಭಾರತಕ್ಕೆ ಕಳುಹಿಸಲ್ಲ. ನಾವು ಭಾರತಕ್ಕೆ ಆತಿಥ್ಯ ನೀಡಲು ಸಿದ್ಧರಿದ್ದೇವೆ. ಆದರೆ ಭಾರತ ಇದುವರೆಗೂ ನಮ್ಮ ರೀತಿ ಯೋಚಿಸಿಯೂ ಇಲ್ಲ, ಪ್ರತಿಕ್ರಿಯಿಸಿಯೂ ಇಲ್ಲ. ಪಾಕಿಸ್ತಾನ ಕ್ರಿಕೆಟ್ ದೊಡ್ಡದಾಗಿದೆ. ನಮ್ಮಲ್ಲಿ ಗುಣಮಟ್ಟದ ಆಟಗಾರರನ್ನು ರೂಪಿಸುತ್ತಿದ್ದೇವೆ. ಭಾರತವು ನರಕಕ್ಕೆ ಹೋಗಬಹುದು. ನಾವು ಭಾರತಕ್ಕೆ ಹೋಗದಿದ್ದರೂ ಚಿಂತೆ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಆಗಲ್ಲ,” ಎಂದು ಮಿಯಾಂದಾದ್ ಸುದ್ದಿಗಾರರಿಗೆ ತಿಳಿಸಿದರು.

Source link