ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ

ಫೀಲ್ಡಿಂಗ್ ಸಮಯದಲ್ಲಿ ರೋಹಿತ್ ಮೈದಾನದಲ್ಲಿ ಇಲ್ಲದೇ ಇರುವುದು ಮುಂಬೈ ಇಂಡಿಯನ್ಸ್​ಗೆ ನೋವುಂಟು ಮಾಡಿದೆ ಎಂದು ಭಾವಿಸುತ್ತೇನೆ. ಮೈದಾನದಲ್ಲಿ ಇದ್ದಿದ್ದರೆ ಹಾರ್ದಿಕ್ ಪಾಂಡ್ಯಗೆ ನೆರವಾಗುತ್ತಿದ್ದರು ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಂಬಾಟಿ ರಾಯುಡು, ‘ಪಾಂಡ್ಯಗೆ ರೋಹಿತ್ ಇನ್ಪುಟ್ ಅಗತ್ಯವಿಲ್ಲ ಎಂದು ಹೇಳಿದ್ದರು. ಹಾರ್ದಿಕ್ ತಮ್ಮದೇ ದಾರಿಯಲ್ಲಿ ಹೋಗುತ್ತಾರೆ. ಅಷ್ಟೇ ಅಲ್ಲ, ಕೊಹ್ಲಿ ನಾಯಕನಾಗಿದ್ದಾಗ ಧೋನಿ ಕೂಡ ಎಲ್ಲದರ ಬಗ್ಗೆ ಸಲಹೆ ನೀಡಲಿಲ್ಲ ಎಂದು ರಾಯುಡು ಹೇಳಿದ್ದಾರೆ. ಸಂಜಯ್ ಬಂಗಾರ್ ಇನ್ನೇನು ಉತ್ತರಿಸಬೇಕು ಎನ್ನುವಾಗ ಮತ್ತೆ ಮಾತಾಡಿದ ರಾಯುಡು, ನಾಯಕನನ್ನು ಏಕಾಂಗಿಯಾಗಿ ಬಿಡಬೇಕು ಎಂದರು. ಬಳಿಕ ಬಂಗಾರ್ ಸುಮ್ಮನಾದರು.

Source link