‘ಅಂದು ನನಗೆ ಕರಾಳ ಸಮಯವಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ. ಏಕೆಂದರೆ ಟಿ20 ವಿಶ್ವಕಪ್ನಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಒಂದು ವಿಕೆಟ್ ಕೂಡ ಪಡೆಯದಿದ್ದಕ್ಕೆ ವಿಷಾದಿಸುತ್ತೇನೆ. ಅದರ ನಂತರ, ಮೂರು ವರ್ಷಗಳವರೆಗೆ, ನನ್ನನ್ನು ಆಯ್ಕೆ ಮಾಡಲಿಲ್ಲ. ಆದ್ದರಿಂದ, ತಂಡಕ್ಕೆ ಮರಳುವುದು ನನ್ನ ಚೊಚ್ಚಲ ಹಾದಿಗಿಂತ ಕಠಿಣವಾಗಿತ್ತು ಎಂದು ನಾನು ಭಾವಿಸುತ್ತೇನೆ’ ಎಂದು ವರುಣ್ ಯೂಟ್ಯೂಟ್ನ ಚಾಟ್ನಲ್ಲಿ ಗೋಬಿನಾಥ್ಗೆ ತಿಳಿಸಿದ್ದಾರೆ.