ಮೊದಲಾರ್ಧದ ಅಂತ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ನಾಯಕ ಸುನಿಲ್ ಛೆಟ್ರಿ ಭಾರತಕ್ಕೆ ಗೋಲಿನ ಖಾತೆ ತೆರೆದರು. ಪಂದ್ಯದ 46ನೇ ನಿಮಿಷದಲ್ಲಿ (45+2) ಥಾಪಾ ಅವರ ಕಾರ್ನರ್ ಕಿಕ್ ಅನ್ನು ಗೋಲಿನತ್ತ ಬಾರಿಸಿದ ಅನುಭವಿ ಆಟಗಾರ, ಬೆಂಗಳೂರಿನ ಅಭಿಮಾನಿಗಳ ಶಿಳ್ಳೆ, ಕೇಕೆಗೆ ಕಾರಣರಾದರು. ಭಾರತ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ, ಕೊನೆಯ ಹಂತದಲ್ಲಿ ಕುವೈತ್ ಗಳಿಸಿದ ಗೋಲಿನಿಂದಾಗಿ ಪಂದ್ಯ ಸಮಬಲದದಲ್ಲಿ ಅಂತ್ಯಗೊಂಡಿತು. ಪಂದ್ಯದ್ 91ನೇ ನಿಮಿಷದಲ್ಲಿ ಅನ್ವರ್ ಅಲಿ ಗೋಲು ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.