Bollywood
oi-Muralidhar S
‘ಆದಿಪುರುಷ್’
ಸಿನಿಮಾ
ಬಗ್ಗೆ
ಜನರ
ಆಕ್ರೋಶ
ಕಮ್ಮಿಯಾಗಿಲ್ಲ.
ಹಿಂದೂಗಳ
ಭಾವನೆಗೆ
ಈ
ಸಿನಿಮಾ
ಧಕ್ಕೆ
ತಂದಿದೆ
ಎಂದು
ಹಲವೆಡೆ
ಆಕ್ರೋಶಗಳು
ವ್ಯಕ್ತವಾಗುತ್ತಿವೆ.
ಸಿನಿಮಾದ
ಪಾತ್ರಗಳು
ಹಾಗೂ
ಡೈಲಾಗ್ಗಳು
ಹಿಂದೂ
ಸಂಸ್ಕೃತಿಗೆ
ಅಗೌರವ
ತೋರಿದೆ
ಎಂದು
ಕೆಲವರು
ಸಿಟ್ಟಿಗೆದ್ದಿದ್ದಾರೆ.
ಇನ್ನೊಂದು
ಕಡೆ
ಸೋಶಿಯಲ್
ಮೀಡಿಯಾದಲ್ಲೂ
‘ಆದಿಪುರುಷ್’
ಸಿನಿಮಾ
ಹೆವೀ
ಟ್ರೋಲ್
ಆಗುತ್ತಿದೆ.
ಹನುಮಂತನ
ಡೈಲಾಗ್ಸ್,
ರಾವಣನ
ವೇಷ
ಭೂಷಣ
ಸೇರಿದಂತೆ
ಹಲವು
ವಿಷಯಗಳು
ಟ್ರೋಲ್
ಆಗುತ್ತಿದೆ.
ಸಿನಿಮಾ
ರಿಲೀಸ್
ಆದಲ್ಲಿಂದ
‘ಆದಿಪುರುಷ್’
ವಿರುದ್ಧ
ನೆಗೆಟಿವ್
ಕಮೆಂಟ್ಗಳು
ಹೆಚ್ಚಾಗಿವೆ.

ಈಗ
‘ಆದಿಪುರುಷ್’
ಸಿನಿಮಾವನ್ನು
ಬ್ಯಾನ್
ಮಾಡಬೇಕು
ಅಂತ
ಆಲ್
ಇಂಡಿಯಾ
ಸಿನಿ
ಅಸೋಸಿಯೇಷನ್
(AICWA)
ಪ್ರಧಾನಿಗೆ
ಮೋದಿಗೆ
ಪತ್ರ
ಬರೆದಿದೆ.
ಅಲ್ಲದೆ
ಎಫ್ಐಆರ್
ದಾಖಲಾಗಬೇಕು
ಅಂತ
ಪತ್ರದಲ್ಲಿ
ಒತ್ತಡ
ಹೇರಿದೆ.
AICWA
ಪ್ರಧಾನಿ
ಮೋದಿಗೆ
ಬರೆದ
ಪತ್ರದಲ್ಲಿ
ಅಂತಹದ್ದೇನಿದೆ?
ಅನ್ನೋದನ್ನು
ತಿಳಿಯಲು
ಮುಂದೆ
ಓದಿ..
‘ಆದಿಪುರುಷ್’
ಬ್ಯಾನ್
ಮಾಡಿ
ಪ್ಯಾನ್
ಇಂಡಿಯಾ
ಸೂಪರ್ಸ್ಟಾರ್
ಫ್ರಭಾಸ್
ಸಿನಿಮಾ
‘ಆದಿಪುರುಷ್’
ವಿವಾದಕ್ಕೆ
ಸಿಲುಕಿ
ಒದ್ದಾಡುತ್ತಿದೆ.
ಈಗ
ಆಲ್
ಇಂಡಿಯಾ
ಸಿನಿ
ಅಸೋಸಿಯೇಷನ್
(AICWA)
ಈ
ಸಿನಿಮಾವನ್ನು
ಬ್ಯಾನ್
ಮಾಡುವಂತೆ
ಪ್ರಧಾನಿ
ಮೋದಿಗೆ
ಪತ್ರ
ಬರೆದಿದೆ.
ಈ
ಸಿನಿಮಾವನ್ನು
ಥಿಯೇಟರ್
ಹಾಗೂ
ಓಟಿಟಿಯಿಂದ
ಬ್ಯಾನ್
ಮಾಡುವಂತೆ
ಪತ್ರದಲ್ಲಿ
ಮನವಿ
ಮಾಡಿಕೊಳ್ಳಲಾಗಿದೆ.
All
India
Cine
Workers
Association
write
to
Prime
Minister
Narendra
Modi,
requesting
him
to
“stop
screening
the
movie
and
immediately
order
a
ban
of
#Adipurush
screening
in
the
theatres
and
OTT
platforms
in
the
future.“We
need
FIR
against
Director
Om
Raut,
dialogue
writer…
pic.twitter.com/jYq3yfv05c—
ANI
(@ANI)
June
20,
2023
‘ಆದಿಪುರುಷ್’
ಸಿನಿಮಾದ
ಸ್ಕ್ರೀನ್
ಪ್ಲೇ
ಹಾಗೂ
ಡೈಲಾಗ್ಗಳು
ಶ್ರೀರಾಮ
ಹಾಗೂ
ಹನುಮಂತನ
ಇಮೇಜ್
ಅನ್ನು
ಹಾಳುಮಾಡುತ್ತಿವೆ.
ಈ
ಸಿನಿಮಾ
ಸನಾತನ
ಧರ್ಮ
ಹಾಗೂ
ಹಿಂದೂಗಳ
ಭಾವನೆಗ
ಧಕ್ಕೆಯುಂಟು
ಮಾಡಿದ
ಎಂದು
ಪ್ರಧಾನಿ
ನರೇಂದ್ರ
ಮೋದಿಗೆ
ಬರೆದ
ಪತ್ರದಲ್ಲಿ
ಹೇಳಲಾಗಿದೆ.
“FIR
ದಾಖಲಾಗಬೇಕು”
“ಪ್ರಭು
ಶ್ರೀರಾಮ್
ಪ್ರತಿಯೊಬ್ಬ
ಭಾರತೀಯನಿಗೂ
ದೇವರು.
ಯಾವ
ಧಾರ್ಮಿಕ
ನಂಬಿಕೆಯಿಂದ
ಬಂದಿದ್ದಾರೆಂಬುದು
ಇಲ್ಲಿ
ಮುಖ್ಯವಲ್ಲ.
ಹಾಗಿದ್ದರೂ
ಈ
ಸಿನಿಮಾದಲ್ಲಿ
ಶ್ರೀರಾಮ
ಹಾಗೂ
ರಾವಣನ
ಪಾತ್ರಗಳು
ವಿಡಿಯೋ
ಗೇಮ್ನಂತೆ
ಇವೆ.
ಅಲ್ಲದೆ
ಡೈಲಾಗ್ಗಳು
ವಿಶ್ವದಲ್ಲಿರುವ
ಪ್ರತಿಯೊಬ್ಬ
ಭಾರತೀಯನಿಗೂ
ನೋವುಂಟು
ಮಾಡಿದೆ”
ಎಂದು
ಪ್ರಧಾನಿ
ಮೋದಿಗೆ
AICWAನಲ್ಲಿ
ಬರೆದ
ಪತ್ರದಲ್ಲಿ
ಉಲ್ಲೇಖ
ಮಾಡಲಾಗಿದೆ.
‘ಆದಿಪುರುಷ್’
ನಿರ್ದೇಶಕನ
ವಿರುದ್ಧ
ಗರಂ?
ಟಾಲಿವುಡ್ನಲ್ಲೇನಿದು
ಸುದ್ದಿ?
ಇಷ್ಟೇ
ಅಲ್ಲದೆ
‘ಆದಿಪುರುಷ್’
ಸಿನಿಮಾದ
ನಿರ್ದೇಶಕ
ಓಂ
ರಾವುತ್,
ಲೇಖಕ
ಮನೋಜ್
ಮುಂತಶೀರ್
ಶುಕ್ಲಾ
ವಿರುದ್ಧ
ಎಫ್ಐಆರ್
ದಾಖಲು
ಮಾಡುವಂತೆಯೂ
ಮನವಿ
ಮಾಡಿಕೊಳ್ಳಲಾಗಿದೆ.
ಹೀಗಾಗಿ
ಚಿತ್ರತಂಡದ
ಗಂಭೀರ
ಸಮಸ್ಯೆಗೆ
ಸಿಕ್ಕಿಕೊಂಡಿದೆ.
“ಪ್ರಭಾಸ್
ಈ
ಸಿನಿಮಾದ
ಭಾಗವಾಗಬಾರದಿತ್ತು”
ಇಷ್ಟೇ
ಅಲ್ಲದೆ
ಆಲ್
ಇಂಡಿಯಾ
ಸಿನಿ
ಅಸೋಸಿಯೇಷನ್
‘ಆದಿಪುರುಷ್’
ಸಿನಿಮಾದ
ಹೀರೊ
ಪ್ರಭಾಸ್,
ಕೃತಿ
ಸನೋನ್
ಹಾಗೂ
ಸೈಫ್
ಅಲಿ
ಖಾನ್
ವಿರುದ್ಧವೂ
ತಿರುಗಿಬಿದ್ದಿದೆ.
ಅಲ್ಲದೆ
ಇವರು
ಅಗೌರವ
ತಂದಿರೋ
‘ಆದಿಪುರುಷ್’
ಸಿನಿಮಾದಂತಹ
ಭಾಗವಾಗಬಾರದಿತ್ತು
ಎಂದು
ಪತ್ರದಲ್ಲಿ
ಹೇಳಿಕೊಂಡಿದೆ.
ಸೋಮವಾರದ
ಸವಾಲು
ಸೋತ
ಆದಿಪುರುಷ್..ಬಾಕ್ಸಾಫೀಸ್ನಲ್ಲಿ
4ನೇ
ದಿನಕ್ಕೆ
ಸುಸ್ತು:
ಕರ್ನಾಟಕದಲ್ಲಿ
ಗಳಿಸಿದ್ದೆಷ್ಟು?
‘ಆದಿಪುರುಷ್’
ಸಿನಿಮಾ
ಸೋಮವಾರ(ಜೂನ್
19)ರಿಂದ
ಬಾಕ್ಸಾಫೀಸ್ನಲ್ಲೂ
ಹಿನ್ನೆಡೆ
ಅನುಭವಿಸಿದೆ.
ಸದ್ಯ
ಈ
ಸಿನಿಮಾದ
ಕಲೆಕ್ಷನ್
375
ಕೋಟಿ
ರೂ.
ದಾಟಿದ್ದು,
ಮುಂದಿನ
ದಿನಗಳಲ್ಲಿ
ಕಲೆಕ್ಷನ್
ಹೇಗಿರುತ್ತೆ?
ಅನ್ನೋದನ್ನು
ಚಿತ್ರತಂಡ
ಕುತೂಹಲದಿಂದ
ಎದುರು
ನೋಡುತ್ತಿದೆ.
English summary
AICWA Letter To PM Modi To Immediately Stop Screening Adipurush in Theatres and OTT Platforms, know more.
Tuesday, June 20, 2023, 14:34