India
oi-Ravindra Gangal
![](https://kannada.oneindia.com/images/patient-2.gif)
ಪುಣೆ, ಜೂನ್ 30: ಪುಣೆ ನಗರದ ಸಮೀಪ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ದೇವಸ್ಥಾನ ಪಟ್ಟಣವಾದ ಪಂಢರಪುರಕ್ಕೆ ದಿಗ್ವಿಜಯ ಸಿಂಗ್ ಅವರ ವಾರ್ಷಿಕ ತೀರ್ಥಯಾತ್ರೆಯನ್ನು ಗಡ್ಕರಿ ಶ್ಲಾಘಿಸಿದ್ದಾರೆ.
ಸೋಲಾಪುರ ಜಿಲ್ಲೆಯ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ಪ್ರಸಿದ್ಧ ದೇವಾಲಯವಿರುವ ಪಂಢರಪುರಕ್ಕೆ ದಿಗ್ವಿಜಯ ಸಿಂಗ್ ಪ್ರತಿ ವರ್ಷ ಆಷಾಢ ಏಕಾದಶಿಯಂದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಸಂತ ತುವಾಕ್ರಂ ಮತ್ತು ಸಂತ ಜ್ಞಾನೇಶ್ವರರ ಪವಿತ್ರ ಪಾದುಕೆಗಳನ್ನು ಹೊತ್ತ ಪಲ್ಲಕ್ಕಿಗಳು ನಗರವನ್ನು ತಲುಪುತ್ತವೆ.
![Union Minister Nitin Gadkari praised the Congress leader - know who Union Minister Nitin Gadkari praised the Congress leader - know who](https://kannada.oneindia.com/img/2023/06/gadkari-1688146846.jpg)
ಪುಣೆ ಬಳಿಯ ಪಿಂಪ್ರಿ ಚಿಂಚ್ವಾಡ್ನಲ್ಲಿ ದಿವಂಗತ ಕಾಂಗ್ರೆಸ್ ನಾಯಕ ರಾಮಕೃಷ್ಣ ಮೋರ್ ಅವರ ಪುಸ್ತಕವನ್ನು ಬಿಡುಗಡೆ ಮಾಡಲು ನಿತೀನ್ ಗಡ್ಕರಿ ಮತ್ತು ದಿಗ್ವಿಜಯ್ ಸಿಂಗ್ ಗುರುವಾರ ಒಂದೇ ವೇದಿಕೆಯಲ್ಲಿ ಕಂಡಬಂದರು.
Methanol Run Buses: ಬೆಂಗಳೂರಿನ ಮೊದಲ ಮೆಥೆನಾಲ್ ಬಸ್ಗಳಿಗೆ ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ
ನಿತಿನ್ ಗಡ್ಕರಿ ಅವರು ತಮ್ಮ ಭಾಷಣದಲ್ಲಿ ದಿಗ್ವಿಜಯ ಸಿಂಗ್ ಅವರು ಗುರುವಾರ ಆಚರಿಸಲಾದ ಆಷಾಢ ಏಕಾದಶಿಯಂದು ಪಂಢರಪುರಕ್ಕೆ ವಾರ್ಷಿಕ ತೀರ್ಥಯಾತ್ರೆ ಕೈಗೊಂಡಿದ್ದಕ್ಕಾಗಿ ಶ್ಲಾಘಿಸಿದರು.
‘ನಾನು ನಿಮಗಿಂತ ಚಿಕ್ಕವನಾಗಿದ್ದರೂ (ನಡೆಯಲು) ನನಗೆ ಅಂತಹ ಧೈರ್ಯ ಬರುವುದಿಲ್ಲ. ಆದರೆ ನೀವು (ತೀರ್ಥಯಾತ್ರೆಯ ಸಮಯದಲ್ಲಿ) ತುಂಬಾ ನಡೆದಿದ್ದೀರಿ. ನಾನು ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಗಡ್ಕರಿ ಹೇಳಿದರು.
![Union Minister Nitin Gadkari praised the Congress leader - know who Union Minister Nitin Gadkari praised the Congress leader - know who](https://kannada.oneindia.com/img/2023/06/gadkari1-1688146826.jpg)
ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯನ್ನು ಶ್ಲಾಘಿಸಿದರು ಮತ್ತು ರಾಜ್ಯದಲ್ಲಿ ವಿವಿಧ ಪಕ್ಷಗಳಿದ್ದರೂ ಅವರಲ್ಲಿ ಯಾವುದೇ ಕಹಿ ಇಲ್ಲ ಎಂದು ಗಡ್ಕರಿ ತಿಳಿಸಿದರು.
ಸರ್ಕಾರ ₹ 12,000 ಕೋಟಿ ವೆಚ್ಚದಲ್ಲಿ ಪಾಲ್ಕಿ ಮಾರ್ಗವನ್ನು (ಪಲ್ಲಕ್ಕಿ ಮಾರ್ಗ) ಅಭಿವೃದ್ಧಿಪಡಿಸುತ್ತಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಮಾತನಾಡಿದ ದಿಗ್ವಿಜಯ ಸಿಂಗ್ ಗಡ್ಕರಿ ಅವರು ಫಂಡರಿಪುರಕ್ಕೆ ಪಾದಯಾತ್ರೆಯಲ್ಲಿ ಬರುವುದನ್ನು ಪ್ರಯತ್ನಿಸಬೇಕು ಎಂದು ತಿಳಿಸಿದರು.
ನಿತಿನ್ ಗಡ್ಕರಿ ಅವರು 2012 ರಲ್ಲಿ ದಿಗ್ವವಿಜಯ ಸಿಂಗ್ ವಿರುದ್ಧ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿನ ಅಕ್ರಮಗಳಿಗೆ ತಮ್ಮ ಹೆಸರನ್ನು ಎಳೆದು ತಂದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
English summary
Union Minister Nitin Gadkari shared the stage with senior Congress leader Digvijaya Singh at a book launch event near Pune city,
Story first published: Friday, June 30, 2023, 23:12 [IST]