English Tamil Hindi Telugu Kannada Malayalam Google news Android App
Fri. Mar 24th, 2023

Express News Service

ಶಿವರಾಜಕುಮಾರ್ ಅಭಿನಯದ ಶ್ರೀನಿಯ ನಿರ್ದೇಶನದ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್, ದಕ್ಷಿಣ ಭಾರತದ ಜನಪ್ರಿಯ ನಟ ಜಯರಾಮ್ ಮತ್ತು ಪ್ರಶಾಂತ್ ನಾರಾಯಣನ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಹಿಂದೆ ತಮ್ಮ ಚಿತ್ರದಲ್ಲಿ ನಾಯಕಿ ಇರುವುದಿಲ್ಲ ಎಂದು ಹೇಳಿದ್ದ ನಿರ್ದೇಶಕರು, ಇದೀಗ ಚಿತ್ರದ ಪ್ರಮುಖ ಪಾತ್ರಕ್ಕೆ ನಟಿ ಅರ್ಚನಾ ಜೋಯಿಸ್ ಅವರನ್ನು ಕರೆತಂದಿದ್ದಾರೆ.

ಕೆಜಿಎಫ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟಿ, ತಮ್ಮ ಮುಂದಿನ ಚಿತ್ರ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಶಿವರಾಜ್‌ಕುಮಾರ್ ಅಭಿನಯದ  ಘೋಸ್ಟ್ ಚಿತ್ರಕ್ಕೆ ಬಾಲಿವುಡ್‌ನ ಅನುಪಮ್ ಖೇರ್ ಎಂಟ್ರಿ!

ಅರ್ಚನಾ ಅವರು ಘೋಸ್ಟ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರ ಪಾತ್ರದ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಶ್ರೀನಿ, ‘ಅರ್ಚನಾ ಅವರು ಘೋಸ್ಟ್‌ನಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ ಮತ್ತು ಇಡೀ ಚಿತ್ರದಲ್ಲಿ ಅವರು ಕಾಣಿಸುತ್ತಾರೆ. ಅವರ ಪಾತ್ರವೇ ಸಸ್ಪೆನ್ಸ್ ಮತ್ತು ಟ್ವಿಸ್ಟ್ ಅನ್ನು ತರುತ್ತದೆ. ನಾನು ವಿಶಾಲ ವ್ಯಾಪ್ತಿಯ ಭಾವನೆಗಳೊಂದಿಗೆ ನಟಿಸಬಲ್ಲ ನಟಿಯನ್ನು ಬಯಸುತ್ತೇನೆ ಮತ್ತು ನಾವು ಅರ್ಚನಾ ಜೋಯಿಸ್ ಅವರನ್ನು ಉತ್ತಮವಾಗಿ ತೋರಿಸಿದ್ದೇವೆ. ಅವರು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಶೇ 40 ರಷ್ಟು ಚಿತ್ರೀಕರಣ ಬಾಕಿ ಉಳಿದಿರುವ ಈ ಚಿತ್ರದ ಮುಂದಿನ ಶೆಡ್ಯೂಲ್ ಫೆಬ್ರುವರಿ 10 ರಿಂದ ಪುನರಾರಂಭಗೊಳ್ಳಲಿದ್ದು, ಮಾರ್ಚ್‌ನಲ್ಲಿ ಚಿತ್ರೀಕರಣವನ್ನು ಮುಗಿಸಲು ನಿರ್ಮಾಪಕರು ಯೋಜಿಸಿದ್ದಾರೆ.

ಇದನ್ನೂ ಓದಿ: ಶಿವಣ್ಣ ಅಭಿನಯದ ‘ಘೋಸ್ಟ್’ ಚಿತ್ರದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ!

ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಘೋಸ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *