PTI
ನವದೆಹಲಿ: ಸಂಸತ್ತಿನ ಕಾರ್ಯಚಟುವಟಿಕೆಯು ನಿಷ್ಕ್ರಿಯವಾಗಿದೆ ಎಂಬ ತೀರ್ಮಾನಕ್ಕೆ ನಾನು ಬಂದಿರುವೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವವು ಉಸಿರಾಡಲು ಕಷ್ಟಪಡುತ್ತಿದೆ. ಬಹುತೇಕ ಎಲ್ಲಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ ಹೇಳಿದ್ದಾರೆ.
ಕಳೆದ ವಾರ ಅಧಿವೇಶನದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದಿಂದ ಸಮನ್ಸ್ ಪಡೆದಿದ್ದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಕ್ಷಿಸಲು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು “ವಿಫಲರಾಗಿದ್ದಾರೆ” ಎಂದು ಚಿದಂಬರಂ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಇಂದಿನ ಕಾಂಗ್ರೆಸ್ ಪ್ರತಿಭಟನೆ ರಾಮಮಂದಿರ ವಿರೋಧಿ ಸಂದೇಶ: ಕೇಂದ್ರ ಸಚಿವ ಅಮಿತ್ ಶಾ
ಕಳೆದ ಶುಕ್ರವಾರ ಬೆಲೆ ಏರಿಕೆ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯನ್ನು ರಾಮ ಮಂದಿರ ಪ್ರತಿಷ್ಠಾಪನಾ ದಿನಕ್ಕೆ ಲಿಂಕ್ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟೀಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಚಿದಂಬರಂ, ‘ಶಿಲಾನ್ಯಾಸ’ದ ವಾರ್ಷಿಕೋತ್ಸವ ದಿನಾಂಕ “ನಮ್ಮ ಮನಸ್ಸಿನಲ್ಲೇ ಇರಲಿಲ್ಲ” ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಗೆ ಶನಿವಾರ ಮತದಾನ ನಡೆಯುವುದರಿಂದ ಎಲ್ಲ ಸಂಸದರು ಶುಕ್ರವಾರ ದೆಹಲಿಯಲ್ಲಿರುತ್ತಾರೆ ಎಂದು ಗಣನೆಗೆ ತೆಗೆದುಕೊಂಡು ಅಂದು ಪ್ರತಿಭಟನೆ ನಿಗದಿಪಡಿಸಲಾಗಿದೆ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App