English Tamil Hindi Telugu Kannada Malayalam Google news Android App
Tue. Mar 28th, 2023

The New Indian Express

ಮಡಿಕೇರಿ: ದಕ್ಷಿಣ ಕೊಡಗಿನ ಖಾಸಗಿ ಎಸ್ಟೇಟ್‌ನೊಳಗಿನ ಕೆರೆಯಲ್ಲಿ ಕಾಡಾನೆಯೊಂದು ಮುಳುಗಿ ಸಾವನ್ನಪ್ಪಿದೆ. 

ತಿತಿಮತಿ ಅರಣ್ಯ ವ್ಯಾಪ್ತಿಯ ಬಡಗಬನಂಗಲ ಗ್ರಾಮದ ಬಿಬಿಟಿಸಿ ಎಸ್ಟೇಟ್‌ನಲ್ಲಿ ಘಟನೆ ವರದಿಯಾಗಿದೆ. ಇದು ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ವರದಿಯಾದ ಅಸಹಜ ಕಾಡಾನೆ ಸಾವಿನ ನಾಲ್ಕನೇ ಪ್ರಕರಣವಾಗಿದೆ.

ಬುಧವಾರ ಕೆಲಸಕ್ಕೆ ಹಾಜರಾಗಿದ್ದ ಎಸ್ಟೇಟ್ ಕಾರ್ಮಿಕರು ಎಸ್ಟೇಟ್ ಆವರಣದಲ್ಲಿರುವ ಕೊಳದೊಳಗೆ ಆನೆಯ ಶವ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಕ್ರೇನ್ ಬಳಸಿ ಆನೆಯ ಮೃತದೇಹವನ್ನು ಮೇಲೆತ್ತಿದ್ದಾರೆ. ಕಾಡು ಆನೆಗೆ ಸುಮಾರು 60 ವರ್ಷ ವಯಸ್ಸಾಗಿದೆ ಎಂದು ಆರ್‌ಎಫ್‌ಒ ಅಶೋಕ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿಯಲ್ಲಿ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆಗಳು ಸಾವು

ಮನುಷ್ಯ-ಆನೆ ಸಂಘರ್ಷವನ್ನು ನಿಯಂತ್ರಿಸಲು ಅದರ ಚಲನವಲನವನ್ನು ಪತ್ತೆಹಚ್ಚಲು ಹೆಣ್ಣು ಆನೆಗೆ ಇತ್ತೀಚೆಗೆ ರೇಡಿಯೊ ಕಾಲರ್ ಹಾಕಲಾಗಿತ್ತು. ಆದರೆ, ಆನೆ ಮೇವು ಅರಸಿ ಖಾಸಗಿ ಎಸ್ಟೇಟ್‌ಗೆ ನುಗ್ಗಿದೆ. ಕೆರೆಗೆ ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆಯ ತುಂಬೆಲ್ಲ ಮಳೆ ನೀರು ತುಂಬಿದ್ದರಿಂದ ಆನೆ ಹೊರ ಬರಲು ಸಾಧ್ಯವಾಗಲಿಲ್ಲ.

ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಮೃತದೇಹವನ್ನು ಖಾಸಗಿ ಎಸ್ಟೇಟ್ ಒಳಗೆ ಇಲಾಖೆ ಸಿಬ್ಬಂದಿ ಹೂಳಿದ್ದಾರೆ. ಕಳೆದ ವಾರವಷ್ಟೇ ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂರು ಕಾಡಾನೆಗಳು ಸಾವನ್ನಪ್ಪಿದ್ದವು. 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *