The New Indian Express
ಐತಿಹಾಸಿಕ ವ್ಯಕ್ತಿಗಳ ಚಿತ್ರವು ಯಾವಾಗಲೂ ಚಲನಚಿತ್ರ ನಿರ್ಮಾಪಕರಲ್ಲಿ ಆಸಕ್ತಿ ಮೂಡಿಸುತ್ತದೆ.. ಧನಂಜಯ್ ಅಭಿನಯದ ಅಲ್ಲಮ ಎಂಬ ಶೀರ್ಷಿಕೆಯ ಚಿತ್ರವನ್ನು ಟಿ.ಎಸ್.ನಾಗಾಭರಣ ನಿರ್ದೇಶಿಸುತ್ತಿದ್ದಾರೆ, ಇದೇ ವೇಳೆ ಆಧ್ಯಾತ್ಮ ಸಂತನ ಮೇಲೆ ಮತ್ತೊಂದು ಚಿತ್ರ ತಯಾರಾಗಿದೆ.
ನಿರ್ದೇಶಕ ಶಂಕರ್ ಸಿಂಗ್ ಅವರ ಪ್ರಭು ಲಿಂಗ ಲೀಲಾ ಕಥೆ ಆಧರಿಸಿ ಶ್ರೀ ಅಲ್ಲಮಪ್ರಭು ಚಿತ್ರ ಸಿದ್ಧವಾಗಿದೆ. ಇದನ್ನು ಮಾದವಾನಂದ ಅವರು ಶ್ರೀ ಮಹಾವೀರ್ ಪ್ರಭು ಸಹಯೋಗದಲ್ಲಿ ನಿರ್ಮಿಸಿದ್ದಾರೆ ಮತ್ತು ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಅನುಭವದೊಂದಿಗೆ ಚಿತ್ರ ತಯಾರು ಮಾಡಿದ್ದಾರೆ.
ಇದೇ ವಾರ ಬಿಡುಗಡೆಯಾಗಲಿರುವ ಚಿತ್ರದಲ್ಲಿ ಸಚೀನ್ ಸುವರ್ಣ ಶ್ರೀ ಅಲ್ಲಮಪ್ರಭು ಪಾತ್ರದಲ್ಲಿ, ನೀನಾಸಂ ಅಶ್ವಥ್ ಶ್ರೀ ಬಸವೇಶ್ವರನಾಗಿ ಮತ್ತು ರಘು ಭಟ್ ಬಿಜ್ಜಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಅಲ್ಲಮಪ್ರಭು ಚಿತ್ರಕ್ಕೆ ಸಂಗೀತವನ್ನು ಕುಮಾರ್ ಈಶ್ವರ್ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣವನ್ನು ಆರ್ ಗಿರಿ ನಿರ್ವಹಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App