Online Desk
ಬೆಂಗಳೂರು: ರಾಜಸ್ತಾನದ ಉದಯಪುರದಲ್ಲಿ ಟೈಲರ್ ನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಅಮಾನವೀಯ ಮತ್ತು ಅತ್ಯಂತ ಹೇಯ ಕೃತ್ಯ. ಇದು ಭಯೋತ್ಪಾದಕ ಕೃತ್ಯ, ಅದರ ಹಿಂದೆ ಬಹಳ ದೊಡ್ಡ ಅಂತಾರಾಷ್ಟ್ರೀಯ ಷಡ್ಯಂತ್ರವಿದ್ದು, ಅವರನ್ನು ಗಲ್ಲಿಗೇರಿಸಬೇಕು. ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉದಯಪುರ ಘಟನೆಯ ಹಿಂದೆ ಯಾರಿದ್ದಾರೆ, ಯಾವ ಸಂಘ-ಸಂಸ್ಥೆಗಳಿವೆ ಎಂದು ಸಂಪೂರ್ಣ ತನಿಖೆಯಿಂದ ಹೊರಗೆಬರಬೇಕು. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಕೈವಾಡವಿರುವ ಸಾಧ್ಯತೆಯಿದೆ ಎಂದರು.
ಇದನ್ನೂ ಓದಿ: ಹಂತಕರನ್ನು ಗಲ್ಲಿಗೇರಿಸಿ ಇಲ್ಲದಿದ್ದರೆ ಇಂದು ನನ್ನ ಗಂಡ, ನಾಳೆ ಮತ್ತೊಬ್ಬರು: ಕನ್ನಯ್ಯಲಾಲ್ ಪತ್ನಿ ರೋಧನ!
ಇಂದಿಗೆ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬಂದು 5 ವರ್ಷವಾಗಿದೆ. ಜಿಎಸ್ ಟಿಯಲ್ಲಿನ ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಕಾನೂನು ಸಮಿತಿಯಿರುತ್ತದೆ. ಇನ್ನೊಂದು ಫಿಟ್ ಮೆಂಟ್ ಕಮಿಟಿಯಿರುತ್ತದೆ (ಹೊಂದಾಣಿಕೆ ಸಮಿತಿ). ಅದರ ಶಿಫಾರಸುಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಮೊನ್ನೆ ಚಂಡೀಗಢದಲ್ಲಿ ನಡೆದ 47ನೇ ಜಿಎಸ್ ಟಿ ಸಭೆಯಲ್ಲಿ ಪರಿಹಾರ ವಿಸ್ತರಣೆ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವೆ ಹೇಳಿದ್ದಾರೆ ಎಂದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App